ಆ್ಯಪ್ನಗರ

ಅಕ್ರಮ ತಡೆಗೆ ಸ್ವತಃ ಫೀಲ್ಡಿಗೆ

ಬಾಗಲಕೋಟ: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಪೊಲೀಸ್‌ ವ್ಯವಸ್ಥೆಯನ್ನು ಭದ್ರಪಡಿಸಲಾಗುವುದು. ಅವಶ್ಯಕತೆ ಬಿದ್ದರೆ ಸ್ವತ: ಫಿಲ್ಡಿಗಿಳಿಯುವುದಾಗಿ ನೂತನ ಎಸ್ಪಿ ಲೋಕೇಶ ಜಗಲಾಸರ್‌ ತಿಳಿಸಿದರು.

Vijaya Karnataka 6 Jul 2019, 5:00 am
ಬಾಗಲಕೋಟ: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟಲು ಪೊಲೀಸ್‌ ವ್ಯವಸ್ಥೆಯನ್ನು ಭದ್ರಪಡಿಸಲಾಗುವುದು. ಅವಶ್ಯಕತೆ ಬಿದ್ದರೆ ಸ್ವತ: ಫಿಲ್ಡಿಗಿಳಿಯುವುದಾಗಿ ನೂತನ ಎಸ್ಪಿ ಲೋಕೇಶ ಜಗಲಾಸರ್‌ ತಿಳಿಸಿದರು.
Vijaya Karnataka Web fielding itself for illegal interception
ಅಕ್ರಮ ತಡೆಗೆ ಸ್ವತಃ ಫೀಲ್ಡಿಗೆ


ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಚಾರ ನಿಯಮ ಪಾಲನೆ, ಶಾಂತಿ ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಾಗಲಕೋಟ ಹಾಗೂ ಮುಧೋಳ ಪಟ್ಟಣದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು ಅದನ್ನು ಸರಿದೂಗಿಸಲು ಈ ತಿಂಗಳ ಮೂರನೇ ವಾರದಿಂದ ಸ್ಥಳೀಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಇಸ್ಪಿಟ್‌ ಕ್ಲಬ್‌ ಬಂದ್‌ ಆಗಿವೆ ಎಂದು ತಿಳಿದು ಬಂದಿದ್ದು, ಒಂದು ವೇಳೆ ಕ್ಲಬ್‌ ಬಗ್ಗೆ ಮಾಹಿತಿ ತಿಳಿಸಿದರೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುತ್ತೇವೆ. ಜತೆಗೆ ನಗರದಲ್ಲಿ ಮಾವಾ ಹಾವಳಿ ಹೆಚ್ಚಾದ ಕುರಿತು ದೂರುಗಳು ಬಂದಿದ್ದು ನಿರಂತರ, ಸೂಕ್ತ ಸಮಯದಲ್ಲಿ ದಾಳಿ ಮಾಡಲಾಗುವುದು. ಠಾಣೆಗೆ ದೂರು ನೀಡಲು ಬಂದ ಕೆಲವರನ್ನು ವಿನಾಕಾರಣ ಪೊಲೀಸ್‌ ಸಿಬ್ಬಂದಿ ದೂರು ಪಡೆಯಲು ವಿಳಂಬ ಮಾಡುತ್ತಿದ್ದಾರೆ ಎಂಬ ವಿಷಯದ ಕುರಿತು ವೃದ್ಧರು, ಮಹಿಳೆಯರು, ಅಸಹಾಯಕರಿಗೆ ನಮ್ಮ ಇಲಾಖೆ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಸಮಸ್ಯೆ ಹೊತ್ತು ಠಾಣೆಗೆ ಬಂದವರಿಗೆ ತೊಂದರೆ ಆಗಬಾರದು ಎಂದು ಎಸ್ಪಿ ತಿಳಿಸಿದರು.

ನವನಗರ, ವಿದ್ಯಾಗಿರಿಯಲ್ಲಿ ಬಾಲಕಿಯರ ವಸತಿ ನಿಲಯದ ಸುತ್ತಮುತ್ತ ಪುಂಡರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಆ ಪ್ರದೇಶದಲ್ಲಿ ಪೊಲೀಸ್‌ ವ್ಯವಸ್ಥೆ ಬಲಪಡಿಸಲಾಗುವುದು. ವಿದ್ಯಾಗಿರಿ ಕಾಲೇಜ್‌ ಸರ್ಕಲ್‌ ಹಾಗೂ ಸ್ಮಶಾನ ರಸ್ತೆಯಲ್ಲಿ ಪಡ್ಡೆ ಹುಡುಗರ ವೀಲಿಂಗ್‌ ತಡೆಗಟ್ಟಲಾಗುವುದು. ಜತೆಗೆ ಹಳೆ ಬಾಗಲಕೋಟದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹಗಲು ಅವಧಿಯಲ್ಲಿ ಹೆವಿ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಿರಲಿ, ಎಂಥಹ ಅಪರಾಧ ಚಟುವಟಿಕೆಗಳಿರಲಿ ಅವುಗಳ ನಿಯಂತ್ರಣಕ್ಕೆ ಮೊದಲು ಆದ್ಯತೆ ನೀಡಲಾಗುವುದು. ಅವ್ಯವಹಾರ, ಅಕ್ರಮ, ಅನೈತಿಕ ಚಟುವಟಿಕೆ ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ನೇರವಾಗಿ ಮಾಹಿತಿ ನೀಡಬಹುದು. ದೂರವಾಣಿ ಮೂಲಕವೂ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಲೋಕೇಶ ಜಗಲಾಸರ್‌, ನೂತನ ಎಸ್ಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ