ಆ್ಯಪ್ನಗರ

ಪಿಡಿಒ ವರ್ಗಾಯಿಸದಿದ್ದರೆ ಹೋರಾಟ

ಕಲಾದಗಿ: ಗ್ರಾಪಂನ ಅಧ್ಯಕ್ಷರಾದಿಯಾಗಿ ಯಾವೊಬ್ಬ ಸದಸ್ಯರ ಮಾತಿಗೆ ಮನ್ನಣೆ ನೀಡದೆ ಸರ್ವಾಧಿಕಾರದ ಧೋರಣೆ ತೋರುತ್ತಾ ಗ್ರಾಮದ ಅಭಿವೃದ್ಧಿ ನಿರ್ಲಕ್ಷಿಸುತ್ತಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ದಾಕ್ಷಾಯಣಿ ಹಿರೇಮಠ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕೆಂದು ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು ಜಿಪಂ ಸಿಇಒ ಗಂಗೂಬಾಯಿ ಮಾನಕರ್‌ ಅವರಿಗೆ ಮನವಿ ಮಾಡಿದ್ದಾರೆ.

Vijaya Karnataka 12 Nov 2019, 5:00 am
ಕಲಾದಗಿ: ಗ್ರಾಪಂನ ಅಧ್ಯಕ್ಷರಾದಿಯಾಗಿ ಯಾವೊಬ್ಬ ಸದಸ್ಯರ ಮಾತಿಗೆ ಮನ್ನಣೆ ನೀಡದೆ ಸರ್ವಾಧಿಕಾರದ ಧೋರಣೆ ತೋರುತ್ತಾ ಗ್ರಾಮದ ಅಭಿವೃದ್ಧಿ ನಿರ್ಲಕ್ಷಿಸುತ್ತಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿ ದಾಕ್ಷಾಯಣಿ ಹಿರೇಮಠ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕೆಂದು ಸ್ಥಳೀಯ ಗ್ರಾಪಂ ಅಧ್ಯಕ್ಷರು, ಸದಸ್ಯರು ಜಿಪಂ ಸಿಇಒ ಗಂಗೂಬಾಯಿ ಮಾನಕರ್‌ ಅವರಿಗೆ ಮನವಿ ಮಾಡಿದ್ದಾರೆ.
Vijaya Karnataka Web fight if the pdo does not transfer
ಪಿಡಿಒ ವರ್ಗಾಯಿಸದಿದ್ದರೆ ಹೋರಾಟ


ಜಿಪಂ ಸದಸ್ಯೆ ಶೋಭಾ ವೆಂ.ಬಿರಾದಾರಪಾಟೀಲ ನೇತೃತ್ವದಲ್ಲಿಸೋಮವಾರ ಸದಸ್ಯರೊಂದಿಗೆ ಸಿಇಒ ಅವರಿಗೆ ಮನವಿ ಸಲ್ಲಿಸಿರುವ ಗ್ರಾಪಂ ಅಧ್ಯಕ್ಷೆ ತಾರಾಮತಿ ಪಾಟೀಲ, ಉಪಾಧ್ಯಕ್ಷ ನೂರ್‌ ಅಹ್ಮದ್‌ ಮುಜಾವರ್‌ ಹಾಗೂ ಸದಸ್ಯರಾದ ಫಕೀರಪ್ಪ ಮಾದರ, ಅಮೀನಸಾಬ್‌ ಬೀಳಗಿ, ಅಂಜಲಿಬಾನು ಸೈಫುದ್ದೀನ್‌ ಗುಳ್ಳಾರ, ಮೆಹಬೂಬ್‌ ಬನ್ನೂರ, ಶಾಂತವ್ವ ಜಲಗೇರಿ ಮುಂತಾದವರು ಪಿಡಿಒ ಯವೊಂದು ನಿರ್ಣಯವನ್ನು ನಮ್ಮ ಗಮನಕ್ಕೆ ತರದೆ ಸಲಹೆ ಸೂಚನೆಗಳನ್ನು ಕೇಳದೆ ಮನಸ್ಸಿಗೆ ಬಂದಂತೆ ಕಾರ್ಯಬಿರ್ವಹಿಸುತ್ತಿರುವುದರಿಂದ ಗ್ರಾಪಂನ ಎಲ್ಲಾಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ದೂರಿದ್ದಾರೆ.

ನೆರೆ ಪ್ರಹಾದ ಸಂದರ್ಭದಲ್ಲಿರೋಗರುಜಿನಗಳು ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು 10 ಲಕ್ಷ ರೂ.ಗಳನ್ನು ಕಾಯ್ದಿರಿಸಿದ್ದರು ಅದನ್ನು ಬಳದೆ ರೋಗಗಳನ್ನು ತಡೆಯಲು ವಿಫಲರಾಗಿದ್ದಾರೆ. ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆಯನ್ನು ಹೇಳಲು ಹೋದರೆ ಅವಾಜ್‌ ಹಾಕುತ್ತಾರೆ ಎಂದು ಮನವಿಯಲ್ಲಿದೂರಿದ್ದಾರೆ.

ಸರಿಯಾಗಿ ಗ್ರಾಪಂಗೂ ಬರದೆ ಸರ್ವಾಧಿಕಾರದ ದೂರಣೆಯನ್ನು ತೋರುತ್ತಿರುವ ಸದರಿ ಪಿಡಿಒ ದಾಕ್ಷಾಯಣಿ ಹಿರೇಮಠ ಅವರನ್ನು ಒಂದು ವಾರದೊಳಗೆ ಬೇರೆಕಡೆಗೆ ವರ್ಗಾಯಿಸಿ ಸಮರ್ಥ ಅಧಿಕಾರಿಯನ್ನು ಗ್ರಾಪಂಗೆ ನೇಮಿಸಬೇಕು, ಇಲ್ಲದಿದ್ದರೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ