ಆ್ಯಪ್ನಗರ

ಸುನಗ ಯೋಧನಿಗೆ ಅಂತಿಮ ನಮನ

ಬೀಳಗಿ: ಜಮ್ಮು ಕಾಶ್ಮಿರದ ಶ್ರೀನಗರದಲ್ಲಿ ಮೃತಪಟ್ಟಿದ್ದ ತಾಲೂಕಿನ ಸುನಗ ಎಲ್‌.ಟಿ ನಂ1 ಗ್ರಾಮದ ಯೋಧ ಭೀಮಸಿಂಗ್‌ ಸಿದ್ಧಪ್ಪ ರಾಠೋಡ್‌ (53) ಅಂತ್ಯ ಕ್ರಿಯೆ ಸ್ವಗ್ರಾಮದಲ್ಲಿ ಗುರುವಾರ ಸಕಲ ಸರಕಾರಿ ಗೌರವದೊಂದಿಗೆ ಜರುಗಿತು.

Vijaya Karnataka 12 Jul 2019, 5:00 am
ಬೀಳಗಿ: ಜಮ್ಮು ಕಾಶ್ಮಿರದ ಶ್ರೀನಗರದಲ್ಲಿ ಮೃತಪಟ್ಟಿದ್ದ ತಾಲೂಕಿನ ಸುನಗ ಎಲ್‌.ಟಿ ನಂ1 ಗ್ರಾಮದ ಯೋಧ ಭೀಮಸಿಂಗ್‌ ಸಿದ್ಧಪ್ಪ ರಾಠೋಡ್‌ (53) ಅಂತ್ಯ ಕ್ರಿಯೆ ಸ್ವಗ್ರಾಮದಲ್ಲಿ ಗುರುವಾರ ಸಕಲ ಸರಕಾರಿ ಗೌರವದೊಂದಿಗೆ ಜರುಗಿತು.
Vijaya Karnataka Web final salute to the sunaga warrior
ಸುನಗ ಯೋಧನಿಗೆ ಅಂತಿಮ ನಮನ


ಸಿಆರ್‌ಪಿಎಫ್‌ನಲ್ಲಿ ಕಳೆದ 28 ವರ್ಷ ಸೇವೆ ಸಲ್ಲಿಸಿ ಆರು ತಿಂಗಳಾಚೆ ಬಡ್ತಿ ಪಡೆದು ಎಸ್‌ಐಯಾಗಿ ಕಾರ್ಯನಿರ್ವಹಿಸುತ್ತಿದ್ದ. ಯೋಧನಿಗೆ ತಂದೆ, ತಾಯಿ, ಪತ್ನಿ, ಮೂವರು ಪುತ್ರರು ಇದ್ದಾರೆ.

ಜಮ್ಮು ಕಾಶ್ಮಿರದಿಂದ ಬುಧವಾರ ರಾತ್ರಿ ಯೋಧನ ಪಾರ್ಥೀವ ಶರೀರವನ್ನು ಪೂಣೆ ಮಾರ್ಗವಾಗಿ ಗುರುವಾರ ಸ್ವ-ಗ್ರಾಮಕ್ಕೆ ತರಲಾಯಿತು. ನಂತರ ಸಹಸ್ರಾರು ಜನರು, ಕುಟುಂಬದ ಸದಸ್ಯರು, ಬಂಧು-ಬಾಂಧವರು ಅಂತಿಮ ದರ್ಶನ ಪಡೆದರು.

ಅನಂತರ ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಸುನಗ ಕ್ರಾಸ್‌ ದಿಂದ ಸುನಗ ತಾಂಡಾದವರೆಗೆ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಜನರು ಮನೆಗಳ ಮುಂದೆ, ಮಾಳಿಗೆ ಮೇಲೆ ನಿಂತು ಅಂತಿಮ ದರ್ಶನ ಪಡೆದರು. ಜನರ ಕಣ್ಣಾಲಿಗಳು ತೇವಗೊಂಡಿದ್ದವು. ಮೆರವಣಿಗೆ ಉದ್ದಕ್ಕೂ ಭೀಮಸಿಂಗ್‌ ಅಮರ ರಹೇ, ಬೋಲೋ ಭಾರತ ಮಾತಾಕಿ ಜೈ, ಒಂದೇ ಮಾತರಂ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಪಂ ಸದಸ್ಯ ಬಸವರಾಜ ಖೋತ, ಹೂವಪ್ಪ ರಾಠೋಡ್‌, ಕಸ್ತೂರಿ ಲಿಂಗಣ್ಣವರ್‌, ಜಿಲ್ಲಾಧಿಕಾರಿ ರಾಮಚಂದ್ರ.ಆರ್‌, ಎಸ್ಪಿ ಲೋಕೇಶ್‌.ಜೆ, ತಹಶೀಲ್ದಾರ ಉದಯ ಕುಂಬಾರ, ಸಿಪಿಐ ರವೀಂದ್ರ ಡಿ.ಬಿ, ಶಿವಕುಮಾರ ಲೋಹಾರ, ಕ್ಷೇತ್ರಶಿಕ್ಷ ಣಾಧಿಕಾರಿ ಹಣಮಂತಗೌಡ ಮಿರ್ಜಿ ಗೌರವ ಸಲ್ಲಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಿಂದ 3 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಯೋಧನಿಗೆ ಅಂತಿಮ ಗೌರವ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ