ಆ್ಯಪ್ನಗರ

ಬೆಳಗ್ಗೆಯಿಂದ ಸಂಜೆವರೆಗೆ ಧರಣಿ, ನಾನಾ ಮಠಾಧೀಶರು

ಬಾಗಲಕೋಟೆ: ನೆರೆ ಸಂತ್ರಸ್ತರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿನಾನಾ ಮಠಾಧೀಶರ ನೇತೃತ್ವದಲ್ಲಿಗದ್ದನಕೇರಿ ಕ್ರಾಸ್‌ನಲ್ಲಿಅನಿರ್ದಿಷ್ಠ ಧರಣಿ ಆರಂಭವಾಯಿತು.

Vijaya Karnataka 28 Sep 2019, 5:00 am
ಬಾಗಲಕೋಟೆ: ನೆರೆ ಸಂತ್ರಸ್ತರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿನಾನಾ ಮಠಾಧೀಶರ ನೇತೃತ್ವದಲ್ಲಿಗದ್ದನಕೇರಿ ಕ್ರಾಸ್‌ನಲ್ಲಿಅನಿರ್ದಿಷ್ಠ ಧರಣಿ ಆರಂಭವಾಯಿತು.
Vijaya Karnataka Web from dawn to dharani nana pontiff
ಬೆಳಗ್ಗೆಯಿಂದ ಸಂಜೆವರೆಗೆ ಧರಣಿ, ನಾನಾ ಮಠಾಧೀಶರು


ಬೆಳಗ್ಗೆ ಗದ್ದನಕೇರಿ ಕ್ರಾಸ್‌ಗೆ ಆಗಮಿಸಿದ ನಾನಾ ಮಠದ ಸ್ವಾಮೀಜಿಗಳು ನೆರೆ ಸಂತ್ರಸ್ತರ ಬದುಕು ದುಸ್ತರವಾಗಿದೆ. ಕೂಡಲೆ ರಾಜ್ಯ ಹಾಗೂ ಕೇಂದ್ರ ಸರಕಾರ ಪರಿಹಾರ ದೊರಕಿಸುವಲ್ಲಿಕಾಳಜಿ ತೋರಬೇಕು. ತಾತ್ಕಾಲಿಕ ಪರಿಹಾರದಿಂದ ಸಂತ್ರಸ್ತರು ಯಥಾಸ್ಥಿತಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಡಲೆ ಸರಕಾರ ವೈಜ್ಞಾನಿಕ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಸಂಜೆವರೆಗೆ ಧರಣಿ ಕುಳಿತರು.

ಚಿಕ್ಕಶೆಲ್ಲಿಕೇರಿಯ ಶಿವಜ್ಞಾನ ಗುರುಕುಲದ ಅಡವೇಶ್ವರ ಶಾಸ್ತ್ರಿಗಳು ಮಾತನಾಡಿ, ರಾಜ್ಯದಲ್ಲಿನ ನೆರೆ ಅನಾಹುತದಿಂದ ಜನರ ಬದುಕು ತಲ್ಲಣವಾಗಿದೆ. ಸರಕಾರದ ತಾತ್ಕಾಲಿಕ ಪರಿಹಾರ ಶಾಶ್ವತ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ನೆರೆಗಾಗಿ ಬದುಕು ಕಳೆದುಕೊಂಡಿರುವ ಜನತೆಯ ಬದುಕು ಕಟ್ಟಿಕೊಡಬೇಕಾಗಿದ್ದು ಸರಕಾರಗಳ ಕರ್ತವ್ಯ. ಆ ಕರ್ತವ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮರೆತಂತಿವೆ ಎಂದರು.

ನೆರೆಯಿಂದಾಗಿ ಹಲವು ಜನ ಹಾಗೂ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಜಮೀನಿನಲ್ಲಿಬೆಳೆದ ಬೆಳೆ ಸಂಪೂರ್ಣ ನಾಶವಾಗಿವೆ. ಹಲವೆಡೆ ಜಮೀನುಗಳೇ ನಾಶವಾಗಿ ಬೆಳೆ ಬಾರದ ಪರಿಸ್ಥಿತಿಗೆ ಬಂದು ತಲುಪಿವೆ. ಶಾಲೆ, ಮಠ, ಸೇತುವೆಗಳು ಹಾನಿಗೀಡಾಗಿವೆ. ಹೀಗೆ ನೆರೆಯಿಂದಾಗಿ ದೊಡ್ಡಮಟ್ಟದ ಹಾನಿ ರಾಜ್ಯದಲ್ಲಿಅದರಲ್ಲೂಉತ್ತರ ಕರ್ನಾಟಕದ ಜನತೆಗೆ ನಷ್ಟವಾಗಿದೆ. ಹೀಗಾಗಿ ಸರಕಾರ ಕೂಡಲೆ ಈ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ನಾಗೇಶ ಗೋಲಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಕೇಂದ್ರಕ್ಕೆ ಇಲ್ಲಿನ ಹಾನಿಯ ಕುರಿತು ಮನವರಿಕೆ ಮಾಡುವಲ್ಲಿವಿಫಲವಾಗಿದೆ. ಕೇಂದ್ರದ ಇಬ್ಬರು ಮಂತ್ರಿಗಳು ಬಂದು ಹೋದರೆ ಹೊರತು ಇದುವರೆಗೂ ಪರಿಹಾರ ದೊರಕಿಸಿಕೊಡುವಲ್ಲಿಅವರೂ ತಮ್ಮ ಜವಾಬ್ದಾರಿ ಮರೆತಂತಿದೆ ಎಂದು ಆರೋಪಿಸಿದರು.

ಸರಕಾರ ನೆರೆ ಸಂತ್ರಸ್ತರ ಬೇಡಿಕೆ ಈಡೇರಿಸುವವರೆಗೆ ಈ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ. ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಧರಣಿ ನಡೆಯಲಿದೆ ಎಂದು ತಿಳಿಸಿದರು. ಧರಣಿ ಸ್ಥಳಕ್ಕೆ ಡಿವೈಎಸ್ಪಿ ಎಸ್‌.ಬಿ.ಗಿರೀಶ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿದ್ದರು.

ಶಿರೋಳದ ಶಂಕರಾರೂಢ ಸ್ವಾಮೀಜಿ, ಹುಲ್ಯಾಳದ ಹರ್ಷಾನಂದರು, ಚಿಕ್ಕಶೆಲ್ಲಿಕೇರಿಯ ಅಡವೇಶ ಶಾಸ್ತ್ರಿಗಳು, ಲಿಂಗನೂರಿನ ಶಿವಪುತ್ರಾವಧೂತರು, ಕುಂಚನೂರಿನ ಸಿದ್ದಲಿಂಗದೇವರು, ಆಲಗೂರಿನ ಲಕ್ಷ್ಮಣ ಮುತ್ಯಾರವರು, ಜಮಖಂಡಿಯ ಕೃಷ್ಣಾನಂದರು, ಗಣಿ ಚಿನ್ಮಯಾನಂದರು, ರೂಗಿನ ನಿತ್ಯಾನಂದರು, ಗೋಕಾಕ್‌ನ ನಾಗರಾಜ ದೇವರು, ಗದ್ದನಕೇರಿ ಕಸ್ತೂರಿಮಠದ ಸ್ವಾಮೀಜಿ, ಹುಬ್ಬಳ್ಳಿಯ ಶಿವಶಂಕರ ಸ್ವಾಮೀಜಿ, ಹೋರಾಟಗಾರರಾದ ಡಾ.ಬಸವರಾಜ ಗವಿಮಠ, ರಮೇಶ ಬದ್ನೂರ, ಆರ್‌.ಡಿ.ಬಾಬು, ಶ್ರೀಶೈಲ ಪರಾಸ, ಯಾಕೂಬ ನದಾಫ್‌, ಬಸವರಾಜ ಶೆಟ್ಟಿ, ಡಿ.ಎಸ್‌.ಪಾಟೀಲ, ಸಿದ್ದಪ್ಪ ಬಳಗಾನೂರ ಇತರರು ಇದ್ದರು.

ಬೇಡಿಕೆಗಳು

ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.

ನೆರೆ ಸಂತ್ರಸ್ತರ ಸಂಪೂರ್ಣ ಸಾಲ ಮನ್ನಾ

ಯುಕೆಪಿ ಮಾದರಿಯಲ್ಲಿಪರಿಹಾರ ಹಾಗೂ ಪುನರ್ವಸತಿ

ಪಾರದರ್ಶಕ ಮತ್ತು ಸಮರ್ಪಕ ಸಮೀಕ್ಷೆ

ಸುಸಜ್ಜಿತ ತಾತ್ಕಾಲಿಕ ಶೆಡ್‌ ನಿರ್ಮಾಣ

ನೆರೆ ಸಮಸ್ಯೆ ಚರ್ಚೆಗೆ ವಿಶೇಷ ಅಧಿವೇಶನಕ್ಕೆ ಒತ್ತಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ