ಆ್ಯಪ್ನಗರ

ಬಂದೋ ಬಸ್‌್ತ ಮಧ್ಯೆ ಅಂತ್ಯಸಂಸ್ಕಾರ

ಮುಧೋಳ: ದಲಿತ ಸಮುದಾಯದ ಇಬ್ಬರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಶಿರೋಳದಲ್ಲಿಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Vijaya Karnataka 17 Oct 2019, 5:00 am
ಮುಧೋಳ: ದಲಿತ ಸಮುದಾಯದ ಇಬ್ಬರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಶಿರೋಳದಲ್ಲಿಬಿಗುವಿನ ವಾತಾವರಣ ನಿರ್ಮಾಣವಾಗಿದೆ.
Vijaya Karnataka Web funeral amidst the bando bus
ಬಂದೋ ಬಸ್‌್ತ ಮಧ್ಯೆ ಅಂತ್ಯಸಂಸ್ಕಾರ


ಮಂಗಳವಾರ ಸಂಜೆ ಕೊಲೆಯಾದ ವಿಠ್ಠಲ್‌ ತಳಗೇರಿ ಹಾಗೂ ಮಳೆಯಪ್ಪ ತಳಗೇರಿ ಅವರ ಶವಗಳಿಗೆ ಬಾಗಲಕೋಟೆ ಸರಕಾರಿ ಆಸ್ಪತ್ರೆಯಿಂದ ಎಸ್ಪಿ ನೇತೃತ್ವದಲ್ಲಿವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಶಿರೋಳದಲ್ಲಿಬುಧುವಾರ ಸಂಜೆ ಅಂತ್ಯಸಂಸ್ಕಾರ ನಡೆಯಿತು.

ಆಕ್ರಂದನ: ಅಂತ್ಯಕ್ರಿಯೆಯಲ್ಲಿಜಿಲ್ಲೆಯ ನಾನಾ ತಾಲೂಕುಗಳಿಂದ ದಲಿತ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿಜನರು ಭಾಗಿಯಾಗಿದ್ದರು. ತಳಗೇರಿ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ತಹಸೀಲ್ದಾರ್‌ ಎಸ್‌.ಬಿ.ಇಂಗಳೆ, ಜಮಖಂಡಿ ಡಿವೈಎಸ್ಪಿ ಆರ್‌.ಕೆ.ಪಾಟೀಲ, ಸಿಪಿಐ ಎಚ್‌.ಆರ್‌.ಪಾಟೀಲ, ಡಿಸಿಆರ್‌ಬಿ ಡಿವೈಎಸ್ಪಿ ಸುರೇಶರೆಡ್ಡಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮೋಹನ ಕೊರಡ್ಡಿ ಗ್ರಾಮದಲ್ಲಿದ್ದರು. ಸ್ಮಶಾನ ಜಾಗೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿಪೊಲೀಸ್‌ ನಿಯೋಜನೆ ಮಾಡಲಾಗಿತ್ತು. ಪೊಲೀಸ್‌ ತುಕುಡಿಗಳ ನಿಯೋಜನೆ ಮಾಡಲಾಗಿತ್ತು. ಗ್ರಾಮದಲ್ಲಿಎಲ್ಲೆಡೆ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ. ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ