ಆ್ಯಪ್ನಗರ

ಇಳಕಲ್‌ದಲ್ಲಿನಿತ್ಯವೂ ಗ್ಯಾಸ್‌ ಟ್ರಬಲ್‌ !

ಇಳಕಲ್‌: ಇಳಕಲ್‌ ನಗರ ವಿಶಾಲವಾಗಿ ಬೆಳೆದರೂ, ಅಭಿವೃದ್ಧಿ ಕಂಡರೂ, ನಾಗರಿಕರು ಮಾತ್ರ ಮೂಲ ಸೌಕರ್ಯಗಳಿಗಾಗಿ ಪರದಾಡುವುದು ತಪ್ಪಲಿಲ್ಲ. ಇದೀಗ ಜನಸಂಖ್ಯೆ ಲಕ್ಷ ಮೀರಿದ್ದರೂ ಇಡೀ ನಗರಕ್ಕೆ ಗ್ಯಾಸ್‌ ವಿತರಣೆ ಕೇಂದ್ರ ಒಂದೇ ಇರುವುದರಿಂದ ನಿತ್ಯವೂ ಕ್ಯೂ ನಿಲ್ಲುವುದು ತಪ್ಪತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 13 Sep 2019, 5:00 am
ಇಳಕಲ್‌: ಇಳಕಲ್‌ ನಗರ ವಿಶಾಲವಾಗಿ ಬೆಳೆದರೂ, ಅಭಿವೃದ್ಧಿ ಕಂಡರೂ, ನಾಗರಿಕರು ಮಾತ್ರ ಮೂಲ ಸೌಕರ್ಯಗಳಿಗಾಗಿ ಪರದಾಡುವುದು ತಪ್ಪಲಿಲ್ಲ. ಇದೀಗ ಜನಸಂಖ್ಯೆ ಲಕ್ಷ ಮೀರಿದ್ದರೂ ಇಡೀ ನಗರಕ್ಕೆ ಗ್ಯಾಸ್‌ ವಿತರಣೆ ಕೇಂದ್ರ ಒಂದೇ ಇರುವುದರಿಂದ ನಿತ್ಯವೂ ಕ್ಯೂ ನಿಲ್ಲುವುದು ತಪ್ಪತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web gas trouble
ಇಳಕಲ್‌ದಲ್ಲಿನಿತ್ಯವೂ ಗ್ಯಾಸ್‌ ಟ್ರಬಲ್‌ !


ಮೊಬೈಲ್‌ ಬಂದನಂತರ ಸ್ಥಿರ ದೂರವಾಣಿ ಪಕ್ಕದಲ್ಲಿದ್ದರೂ ಎತ್ತುವವರಿಲ್ಲ.ಮೊಬೈಲ್‌ ಜೇಬಿನಲ್ಲಿದ್ದರೂ ಎತ್ತಲು ಸಮಯವಿಲ್ಲ, ಪಕ್ಕದಲ್ಲೇ ಬ್ಯಾಂಕ್‌ ಇದ್ದರೂ ಹಣ ತುಂಬಲು ಆಗುತ್ತಿಲ್ಲ. ಹೀಗಿರುವಾಗ ಅಡುಗೆ ಅನಿಲಕ್ಕಾಗಿ ಕ್ಯೂ ನಿಲ್ಲಲು ಸಮಯವೆಲ್ಲಿದೆ?

ಇಲ್ಲಿನ ಬಡ, ಕೂಲಿ, ಮಧ್ಯಮ ವರ್ಗದ ಹಾಗೂ ಉದ್ದಿಮೆದಾರರೂ ಕುಂಬಾರ ಒಲೆ ಹೂಡಲಿಲ್ಲ, ಕಟ್ಟಿಗೆ ಖರೀದಿಸಲಿಲ್ಲ, ಎಲ್ಲರೂ ಸರಳ ಅಡುಗೆಗಾಗಿ ಅಳವಡಿಸಿಕೊಂಡಿರುವುದು ಅಡುಗೆ ಅನಿಲ. ಅದಕ್ಕಾಗಿ ಸಿಲಿಂಡರ್‌ ಸಿಗದಿರುವುದರಿಂದ ನಿತ್ಯವೂ ಸರತಿ ಹಚ್ಚುವುದು ತಪ್ಪಿಲ್ಲ, ಹೆಸರು ನೋಂದಾಯಿಸಲೂ, ಪಡೆಯಲೂ ಹಾಗೂ ಪಾವತಿಸಲೂ ಎಲ್ಲದಕ್ಕೂ ಸರತಿ

ನಿತ್ಯ ಅಡುW æಅನಿಲ ಪಡೆಯಲು ಕ್ಯೂ ನಿಲ್ಲುವುದು ಹೇಗೆ? ಎಂದು ಯೋಚಿಸಿದರೇ ಮೈ ನಡುಕ ಹುಟ್ಟುತ್ತದೆ. ಇಳಕಲ್‌ನಲ್ಲಿರುವುದು ಒಂದೇ ಒಂದು ಗ್ಯಾಸ್‌ ಎಜೆನ್ಸಿ . ಇದರಿಂದ ಸಾರ್ವಜನಿಕರು ತೊಂದರೆ ಈ ಕ್ಯೂನಲ್ಲಿನಿಲ್ಲುವ ಶಿಕ್ಷೆ ಅನುಭವಿಸುವಂತಾಗಿದೆ.

ನಾಗರಿಕರ ಎಚ್ಚರಿಕೆ

ಅಡುಗೆ ಅನಿಲ ಪೂರೈಸುವ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನಹರಿಸಿ ನಾಗರಿಕರ ತೊಂದರೆ ದೂರ ಮಾಡುವಲ್ಲಿಸಹಕರಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾದೀತು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ಏಜೆನ್ಸಿ ಹಾಗೂ ಗೋಡೌನ್‌ ಎರಡೂ ಪ್ರಮುಖ ರಸ್ತೆಗಳಲ್ಲೇ ಇರುವುದರಿಂದ ನಿತ್ಯವೂ ಸಹಸ್ರಕ್ಕೂ ಮಿಕ್ಕ ಜನ ಸಿಲಿಂಡರ್‌ ಹಿಡಿದುಕೊಂಡು ಕ್ಯೂ ನಿಲ್ಲುವುದರಿಂದ ರಸ್ತೆಗಳಲ್ಲಿಕಾರ್‌ ಲಾರಿ ಇರಲಿ, ಬೈಕ್‌ ಸಂಚಾರಿಗಳೂ ಸಂಚರಿಸದಂತೆ ತೊಂದರೆಯಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದವರು ಜನರ ಗೋಳು ಕೇಳುತ್ತಿಲ್ಲ.

-

ಅಡುಗೆ ಅನಿಲದ ಸಿಲಿಂಡರ್‌ಗಳು ಅಗತ್ಯಕ್ಕೆ ತಕ್ಕಷ್ಟು ಅಂದರೆ ಬೇಡಿಕೆಗನುಗುಣವಾಗಿ ಧಾರವಾಡದಿಂದ ಪೂರೈಕೆಯಾಗುತ್ತಿಲ್ಲ. ಹೀಗಾಗಿ ನಾವು ಪೂರೈಸುವಲ್ಲಿವಿತರಣೆ ಮಾಡುವಲ್ಲಿತೊಂದರೆಯಾಗುತ್ತಿದೆ. ಈಗಾಗಲೇ ಧಾರವಾಡ ಪೂರೈಕಾ ಘಟಕಕ್ಕೆ ಹೆಚ್ಚಿನ ಬೇಡಿಕೆ ಕಳುಹಿಸಿದ್ದೇವೆ. ಬಂದರೆ ಎಲ್ಲವನ್ನೂ ಸರಿಪಡಿಸುತ್ತೇವೆ.

ಗ್ಯಾಸ್‌ ಸಿಲಿಂಡರ್‌ ವಿತರಣೆ ಕೇಂದ್ರದ ಮಾಲೀಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ