ಆ್ಯಪ್ನಗರ

ಗೂಡ್ಸ್‌ ವಾಹನ ಸಿದ್ಧಗೊಳಿಸಿ ಸಂಚಾರ ಆರಂಭಿಸಿ

''ಲಾಭ ಗಳಿಕೆಯ ಅನ್ಯ ಮೂಲ ಸೃಷ್ಟಿಸುವ ನಿಟ್ಟಿನಲ್ಲಿವಾಕರಸಾ ಸಂಸ್ಥೆಯಿಂದ ಗೂಡ್ಸ್‌ ಮಾದರಿ ವಾಹನಗಳ ಸಂಚಾರ ಆರಂಭಿಸಿ' ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷತ್ರ್ಮಣ ಸವದಿ ಸೂಚನೆ ನೀಡಿದರು.

Vijaya Karnataka Web 18 Jun 2020, 5:00 am
ಬಾಗಲಕೋಟೆ : ''ಲಾಭ ಗಳಿಕೆಯ ಅನ್ಯ ಮೂಲ ಸೃಷ್ಟಿಸುವ ನಿಟ್ಟಿನಲ್ಲಿವಾಕರಸಾ ಸಂಸ್ಥೆಯಿಂದ ಗೂಡ್ಸ್‌ ಮಾದರಿ ವಾಹನಗಳ ಸಂಚಾರ ಆರಂಭಿಸಿ' ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷತ್ರ್ಮಣ ಸವದಿ ಸೂಚನೆ ನೀಡಿದರು.
Vijaya Karnataka Web SAVADI MEETING-BGK-17_41


ನಗರದ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿಬುಧವಾರ ಪ್ರಗತಿ ಪರಿಶೀಲನೆ ಸಭೆಯಲ್ಲಿಅವರು ಮಾತನಾಡಿದರು.

ಪರ್ಯಾಯ ಮಾರ್ಗ
''ಕೇವಲ ಸಾರ್ವಜನಿಕರ ಪ್ರಯಾಣದಿಂದ ಸಂಸ್ಥೆ ಲಾಭ ಗಳಿಸಲು ಆಗುವುದಿಲ್ಲ. ಆದಾಯ ಮೂಲಕ್ಕೆ ಪರ್ಯಾಯ ಮಾರ್ಗ ಸೃಷ್ಟಿಸಬೇಕು. ಕೋವಿಡ್‌ ಜತೆಗೆ ಜೀವನ ನಡೆಸಬೇಕಿದೆ. ವಸತಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆಗೆ ಗೂಡ್ಸ್‌ ಮಾದರಿ ವಾಹನ ಸಜ್ಜುಗೊಳಿಸಿ.ಸಂಸ್ಥೆಯಿಂದ 15 ದಿನಗಳಲ್ಲಿಕೊರಿಯರ್‌ ಸೇವೆ ಆರಂಭವಾಗಲಿದೆ' ಎಂದರು.

ಶ್ರೀಗಂಧ ಬೆಳೆಸಿ: ''ಬಸ್‌ ನಿಲ್ದಾಣಗಳ ಆವರಣದಲ್ಲಿಶ್ರೀಗಂಧದ ಸಸಿ ನೆಡಬೇಕು. 15 ವರ್ಷಗಳ ನಂತರ ಆದಾಯ ಗಳಿಸಬಹುದಾಗಿದೆ. ವಿಕಲಚೇತನರು, ವಿದ್ಯಾರ್ಥಿಗಳಿಗೆ ನೀಡುವ ಬಸ್‌ ಪಾಸ್‌ಗಳ ವಿತರಣೆಯಲ್ಲಿನಿಗಾ ವಹಿಸಬೇಕು. ಶಾಲೆ, ಕಾಲೇಜ್‌ ಆರಂಭವಾಗದಿದ್ದರೂ ವಿದ್ಯಾರ್ಥಿಗಳಿಗೆ ಪಾಸ್‌ ರಸೀದಿ ನೀಡಿದ ಪ್ರಕರಣ ನಡೆದಿವೆ. ಪಾಸ್‌ ದುರುಪಯೋಗವಾಗಿದ್ದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಸಿದರು.

ಅನುದಾನ ಲಭ್ಯ
''ನಾನಾ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆಯಿಲ್ಲ. ಮಹಾಲಿಂಗಪುರ ಬಸ್‌ ನಿಲ್ದಾಣದ ಕಾಮಗಾರಿ ಮೂರು ತಿಂಗಳಲ್ಲಿಪೂರ್ಣಗೊಳಿಸಿ' ಎಂದು ಆದೇಶಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ಲಾಕ್‌ಡೌನ್‌ನಿಂದಾಗಿ ಸಂಸ್ಥೆಯ ವಿಭಾಗಕ್ಕೆ 9 ಕೋಟಿ 50 ಲಕ್ಷ ರೂ. ಹಾನಿಯಾಗಿದೆ ಎಂದು ವಿವರಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ವಾಕರಸಾ ಸಂಸ್ಥೆಯ ಅಧ್ಯಕ್ಷ ವಿ.ಎಸ್‌.ಪಾಟೀಲ, ಶಾಸಕರಾದ ಸಿದ್ದು ಸವದಿ, ಹಣಮಂತ ನಿರಾಣಿ, ವಾಕರಸಾ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಜಿಲ್ಲಾಧಿಕಾರಿ ಕ್ಯಾ.ಡಾ.ರಾಜೇಂದ್ರ, ಸಾರಿಗೆ ನಿಯಂತ್ರಣಾಧಿಕಾರಿ ಪಡಿಯಪ್ಪ ಮೈತ್ರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ