ಆ್ಯಪ್ನಗರ

ಮತ್ತೊಮ್ಮೆ ಘಟಪ್ರಭೆ ಪ್ರವಾಹ ಭೀತಿ!

ಮುಧೋಳ(ಬಾಗಲಕೋಟ): ಘಟಪ್ರಭಾ ನದಿಯಲ್ಲಿ15 ದಿನಗಳಿಂದ ಇಳಿಕೆಯಾಗಿದ್ದ ಪ್ರವಾಹ ಪುನಃ ಹೆಚ್ಚಾಗಿ, ಮತ್ತೊಮ್ಮೆ ಆತಂಕ ಸೃಷ್ಟಿಸಿದೆ.

Vijaya Karnataka 7 Sep 2019, 5:00 am
ಮುಧೋಳ(ಬಾಗಲಕೋಟ): ಘಟಪ್ರಭಾ ನದಿಯಲ್ಲಿ15 ದಿನಗಳಿಂದ ಇಳಿಕೆಯಾಗಿದ್ದ ಪ್ರವಾಹ ಪುನಃ ಹೆಚ್ಚಾಗಿ, ಮತ್ತೊಮ್ಮೆ ಆತಂಕ ಸೃಷ್ಟಿಸಿದೆ.
Vijaya Karnataka Web ghataprabha river in mudhol floods again
ಮತ್ತೊಮ್ಮೆ ಘಟಪ್ರಭೆ ಪ್ರವಾಹ ಭೀತಿ!


ಬೆಳಗಾವಿ ಜಿಲ್ಲೆಯ ಜಲಾವೃತಗೊಂಡ ಪ್ರದೇಶದಿಂದ ಘಟಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನ ನಾನಾ ಗ್ರಾಮದ ಸಂತ್ರಸ್ತರಲ್ಲಿಭಯ ಮನೆ ಮಾಡಿದೆ.

ನದಿ ತೀರದಲ್ಲಿಈಜಲು, ಬಟ್ಟೆ ತೊಳೆಯಲು, ರೈತರು, ಕೃಷಿ ಕಾರ್ಮಿಕರು ಕೃಷಿ ಕಾರ್ಯಗಳಿಗೆ ತೆರಳಬಾರದು. ತಮ್ಮ ಪಂಪಸೆಟ್‌, ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು ತೆರಳಬೇಕು ಎಂದು 36 ಗ್ರಾಮಗಳಲ್ಲಿಕಂದಾಯ ಇಲಾಖೆಯಿಂದ ಈಗಾಗಲೇ ಡಂಗೂರು ಸಾರಲಾಗಿದೆ.

ಸೇತುವೆ ಸಂಚಾರ ಸ್ಥಗಿತ:

ಢವಳೇಶ್ವರ, ನಂದಗಾಂವ ಹಾಗೂ ಮಿರ್ಜಿ ಬ್ರಿಜ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಮುಧೋಳ ಮಾರ್ಗವಾಗಿ ಮಿರ್ಜಿಗೆ ತೆರಳಬೇಕಾಗಿದೆ. ನದಿ ತೀರದ ಬಹುತೇಕ್‌ ಭಾಗದಲ್ಲಿತಾಲೂಕಾಡಳಿತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಆರಂಭಿಸಿದೆ. ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ, ಸಿಬ್ಬಂದಿ, ನೋಡೆಲ್‌ ಅಧಿಕಾರಿಗಳಿಗೆ ಕ್ರಿಯಾಶೀಲರಾಗಲು ಸೂಚನೆ ಕೂಡ ನೀಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

ಐತಿಹಾಸಿಕ ಮಾಚಕನೂರಿನ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ದೇವಸ್ಥಾನ ಸುತ್ತಲು ನೀರು ಬಂದಿದ್ದರಿಂದ ದೂರದಿಂದಲೇ ದೇವರಿಗೆ ಕೈ ಮುಗಿಯುವಂತಾಗಿದೆ. ಮಾಚಕನೂರ ಬ್ರಿಜ್‌ ತುಂಬಿ ಹರಿಯುತ್ತಿದೆ.

ಬ್ಯಾರಿಕೇಡ್‌ ನಿರ್ಮಿಸಲು ಸೂಚನೆ

ನದಿ ತೀರದ ಅಪಾಯ ಹಂತದಲ್ಲಿರುವ ಜಾಗೆಯಲ್ಲಿಬ್ರಿಜ್‌ ಹಾಗೂ ರಸ್ತೆಗಳ ಮಧ್ಯೆ ಬ್ಯಾರಿಕೇಡ್‌ ನಿರ್ಮಾಣ ಮಾಡಬೇಕೆಂದು ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

----

ಹಿಡಕಲ್‌ ಜಲಾಶಯ ಭಾಗದಿಂದ ನೀರಿನ ಪ್ರಮಾಣ ಘಟಪ್ರಭಾ ನದಿಯ ತೀರದಲ್ಲಿಸ್ವಲ್ಪ ನೀರಿನಮಟ್ಟ ಹೆಚ್ಚಳವಾಗಿದೆ. ಯಾವುದೇ ಸಂದರ್ಭದಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಬಹುದು. ಸೇತುವೆ ಮೇಲೆ ಯಾರೂ ಸಂಚರಿಸಬಾರದು.

ಎಚ್‌.ಜಿ.ಆಲೂರ, ಎಇಇ, ಸಣ್ಣ ನೀರಾವರಿ ಇಲಾಖೆ, ಮುಧೋಳ.

----

ಫೋಟೊ: 6ಎಂಡಿಎಲ್‌1

ಮುಧೋಳ ತಾಲೂಕಿನ ಮಾಚಕನೂರ ಘಟಪ್ರಭಾ ನದಿ ನೀರಿನ ಹೆಚ್ಚಳದಿಂದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.

----

6ಎಂಡಿಎಲ್‌ 2

ಮುಧೋಳ ತಾಲೂಕಿನ ಮಿರ್ಜಿ ಬಳಿ ಘಟಪ್ರಭಾ ನದಿಯಲ್ಲಿಸೇತುವೆ ಜಲಾವೃತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ