ಆ್ಯಪ್ನಗರ

ರಸ್ತೆ ಸರಿ ಸರಿಪಡಿಸಿ, ನೀರಲ್ಲೇ ನಿಂತು ಬಾಲಕಿ ನಿವೇದನೆ: ವೀಡಿಯೋ ವೈರಲ್

ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿಯಲ್ಲಿ ಭಾರಿ ಮಳೆಯಿಂದ ರಸ್ತೆಗಳು ಹಾಳಾಗಿ ಹೋಗಿವೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಾಲಕಿಯೊಬ್ಬಳು ಮನವಿ ಮಾಡಿದ್ದಾಳೆ...

Vijaya Karnataka Web 21 Oct 2019, 8:06 pm
ಬಾಗಲಕೋಟೆ: ಜಿಲ್ಲೆಯ ರನ್ನ ಬೆಳಗಲಿಯಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆ ಸರಿಪಡಿಸುವಂತೆ ಬಾಲಕಿ ಮನವಿ ಓದಿದ ವಿಡಿಯೋ ಈಗ ವೈರಲ್ ಆಗಿದೆ.
Vijaya Karnataka Web ಬಾಗಲಕೋಟೆ
ಬಾಗಲಕೋಟೆ


ರನ್ನಬೆಳಗಲಿಯಿಂದ 17ನೇ ವಾರ್ಡ್‌ನಲ್ಲಿರುವ ಚಿಮ್ಮಡ ರಸ್ತೆ ಮಳೆಯಿಂದ ಜಲಾವೃತವಾಗಿದ್ದರಿಂದ ವಾರ್ಡ್ ನಿವಾಸಿಗಳು ಬರೆದ ಮನವಿಯನ್ನು ಪುಟ್ಟ ಬಾಲಕಿ ನೀರಲ್ಲೇ ನಿಂತು ಓದಿ ನಿವೇದನೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೂರು ದಿನದಿಂದ ನಮ್ಮ ರಸ್ತೆ ಮೇಲೆ ನೀರು ಹರಿದು ರಸ್ತೆ ಹಾಳಾಗುತ್ತಿದೆ. ಆದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ನೀವು ನಿಜವಾಗಿಯೂ ಜನಸೇವೆ ಮಾಡುವ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಬಂದ ಜವಾಬ್ದಾರಿಯುತ ರಾಜಕಾರಣಿಯಾಗಿದ್ದರೆ, ಕೂಡಲೇ ಸ್ಪಂದಿಸಿರಿ, ಒಂದು ರಸ್ತೆಯನ್ನೂ ದುರಸ್ತಿ ಮಾಡಲಾಗದಿದ್ದರೆ ನೀವು ಜನಪ್ರತಿನಿಧಿಯಾಗಿ ಏನು ಪ್ರಯೋಜನ? ಎಂದು ಹಾಲಿ ಶಾಸಕರು, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಚೇರ್ಮನ್‌, ವಾರ್ಡ್ ಸದಸ್ಯ, ಮುಖ್ಯಾಧಿಕಾರಿ ಸೇರಿದಂತೆ ಎಲ್ಲರಿಗೂ ಚಾಟಿ ಬೀಸುವ ರೀತಿಯಲ್ಲಿ ಬರೆದ ಮನವಿಯನ್ನು ರಸ್ತೆ ಮೇಲೆ ನಿಂತ ನೀರಲ್ಲೇ ಅರ್ಧ ಶರೀರ ಮುಳುಗಿಸಿ ಓದಿ ಹೇಳಿದ ರೀತಿ ಎಲ್ಲರನ್ನೂ ನಾಚಿಸುವಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ