ಆ್ಯಪ್ನಗರ

ಮೇದಾರ ಸಮುದಾಯಕ್ಕೆ ಪರಿಹಾರ ನೀಡಿ

ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿಮೇದಾರ ಸಮುದಾಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಪರಿಹಾರ ಘೋಷಿಸಬೇಕು ಎಂದು ನಗರದ ಮೇದಾರ ಕೇತೇಶ್ವರ ಗಿರಿಜನ(ಎಸ್ಟಿ) ಸಮುದಾಯ ಎಡಿಸಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka Web 23 May 2020, 5:00 am
Vijaya Karnataka Web give the meder community a solution
ಮೇದಾರ ಸಮುದಾಯಕ್ಕೆ ಪರಿಹಾರ ನೀಡಿ
ತೇರದಾಳ: ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿಮೇದಾರ ಸಮುದಾಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಪರಿಹಾರ ಘೋಷಿಸಬೇಕು ಎಂದು ನಗರದ ಮೇದಾರ ಕೇತೇಶ್ವರ ಗಿರಿಜನ(ಎಸ್ಟಿ) ಸಮುದಾಯ ಎಡಿಸಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.

ಪ್ರಕೃತಿ ವಿಕೋಪದಿಂದಾಗಿ ಪ್ರವಾಹ ಬಂದು ಕಳೆದ ವರ್ಷ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಈಗ ಕೊರೊನಾದಿಂದಾಗಿ ನಮ್ಮ ಬದುಕು ಬೀದಿಗೆ ಬಂದಿದೆ. ಬಿದಿರಿನ ಬುಟ್ಟಿ, ಮರ ತಯಾರಿಸಿ ನಮ್ಮ ಹೊಟ್ಟೆ ತುಂಬಿಕೊಳ್ಳುತ್ತಿದ್ದ ನಮ್ಮ ಸಮುದಾಯಕ್ಕೆ ಲಾಕ್‌ಡೌನ್‌ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಸರಕಾರ ಇತರ ಸಮುದಾಯವರಿಗೆ ಪರಿಹಾರ ನೀಡಿದ ಹಾಗೆ ಮೇದಾರ ಸಮುದಾಯಕ್ಕೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಎಸಿ ಡಾ.ಸಿದ್ದು ಹುಲ್ಲೊಳಿ, ಎಸ್‌.ಬಿ.ಕಾಂಬಳೆ, ಈಶ್ವರ ಬುರುಡ, ಪ್ರಭು ಬುರುಡ, ಗಣೇಶ ಬುರುಡ, ಶಾಂತವ್ವ ಬುರುಡ, ವಸ್ತಲಾ ಬುರುಡ, ಮುರಗೇಶ ಬುರುಡ, ಸುಬ್ಬರಾಯ ಬುರುಡ, ರಮೇಶ ಬುರುಡ, ಪಕ್ಕವ್ವ ಬುರುಡ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ