ಆ್ಯಪ್ನಗರ

ಸರಕಾರಿ ಶಾಲೆಗಳಲ್ಲಿ ವಿಜೃಂಭಣೆಯ ವಾತಾವರಣ

ಬಾದಾಮಿ: ಪ್ರಸಕ್ತ ಶೈಕ್ಷ ಣಿಕ ವರ್ಷಾರಂಭಕ್ಕೆ ತಾಲೂಕಿನ ಎಲ್ಲ ಸರಕಾರಿ ಖಾಸಗಿ ಶಾಲೆಗಳಲ್ಲಿಯೂ ವಿಜೃಂಭಣೆಯಿಂದ ಸರಕಾರದ ಸಮವಸ್ತ್ರ, ಪುಸ್ತಕಗಳನ್ನು ಒದಗಿಸುವ ಜತೆಗೆ ಶಾಲೆ ಆರಂಭವನ್ನು ಹಬ್ಬದಂತೆ ಆಚರಿಸಲಾಯಿತು.

Vijaya Karnataka 30 May 2019, 5:00 am
ಬಾದಾಮಿ: ಪ್ರಸಕ್ತ ಶೈಕ್ಷ ಣಿಕ ವರ್ಷಾರಂಭಕ್ಕೆ ತಾಲೂಕಿನ ಎಲ್ಲ ಸರಕಾರಿ ಖಾಸಗಿ ಶಾಲೆಗಳಲ್ಲಿಯೂ ವಿಜೃಂಭಣೆಯಿಂದ ಸರಕಾರದ ಸಮವಸ್ತ್ರ, ಪುಸ್ತಕಗಳನ್ನು ಒದಗಿಸುವ ಜತೆಗೆ ಶಾಲೆ ಆರಂಭವನ್ನು ಹಬ್ಬದಂತೆ ಆಚರಿಸಲಾಯಿತು.
Vijaya Karnataka Web glamorous atmosphere in government schools
ಸರಕಾರಿ ಶಾಲೆಗಳಲ್ಲಿ ವಿಜೃಂಭಣೆಯ ವಾತಾವರಣ


ತಾಲೂಕಿನ ಕಬ್ಬಲಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವವನ್ನು ಮಕ್ಕಳ ದಾಖಲಾತಿ ಆಂದೋಲನ ಮತ್ತು ಪುಸ್ತಕ ವಿತರಿಸಿ, ಮಕ್ಕಳನ್ನು ಶಿಕ್ಷ ಕರು ಸಂಭ್ರಮದಿಂದ ಸ್ವಾಗತಿಸಿದರು. ಸರಕಾರಿ ಶಾಲೆಗಲ್ಲಿ ಮಕ್ಕಳಿಗೆ ಮೊದಲು ಕನ್ನಡ ಮಾಧ್ಯಮದಲ್ಲಿಯೇ ಕಲಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕನಕಪ್ಪ ಪರಸನ್ನವರ ಸಲಹೆ ನೀಡಿದರು.

ಸರಕಾರ ಕೊಡುವ ಸಂಬಳಕ್ಕಾಗಿ ಶಿಕ್ಷ ಕರು ಕರ್ತವ್ಯಕ್ಕೆ ಸೀಮಿತರಾಗದೇ ಮಕ್ಕಳಿಗೆ ಸೌಲಭ್ಯ ಸರಿಯಾಗಿ ವಿತರಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಬಹುತರ ಜವಾಬ್ದಾರಿಯೂ ನಮ್ಮದಾಗಿದೆ ಎಂದು ಮುಖ್ಯ ಗುರು ವೈ.ಎಫ್‌.ಷರೀಫ ಭರವಸೆ ಹೇಳಿದರು.

ಶಿಕ್ಷ ಕರಾದ ಜಿ.ಬಿ.ಕುಲಕರ್ಣಿ, ಶಿವಯೋಗಿ ಕುಂಬಾರ, ಎ.ಎಸ್‌.ಮುಲ್ಲಾ, ಪಿ.ವಿ.ಹಿರೇಮಠ, ಎಸ್‌.ಎಸ್‌.ಕಂಬಾಳಿಮಠ, ಆರ್‌.ಡಿ.ದಾಯಪುಲೆ, ಎ.ಎಸ್‌.ಶಿಲಿಯಪ್ಪನವರ ಸೇರಿದಂತೆ ಶಾಲಾ ಸುಧಾರಣಾ ಸಮಿತಿ ಸದಸ್ಯರು ಮಕ್ಕಳು ಇದ್ದರು.

ಸಂಭ್ರಮ: ಶಿಕ್ಷ ಕರು ಹಾಗೂ ಗ್ರಾಮಸ್ಥರು ಶಾಲಾ ಆವರಣ ಸ್ವಚ್ಛಗೊಳಿಸಿ ಶಿಕ್ಷ ಕರು ಮಕ್ಕಳೊಂದಿಗೆ ರಂಗೋಲಿ ಸ್ವಾಗತದೊಂದಿಗೆ ಅದ್ದೂರಿ ಕಾರ್ಯಕ್ರಮ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ