ಆ್ಯಪ್ನಗರ

ನೀರಾಗ ತೇಲಿ ಹೋಗ್ತೀವು: ಶಾಶ್ವತ ಪರಿಹಾರ ಕೊಡ್ರಿ

ಬಾದಾಮಿ: ಈಗ ಮೂರು ಸಲ ನೀರು ಬಂದು ನಮ್ಮ ಮನಿ, ಬೆಳಿ ಹಾಳಾಗಿ ಹೋಗ್ಯಾವು ನಮಗ ಶಾಶ್ವತ ಪರಿಹಾರ ಕೊಡ್ರಿ ಇಲ್ಲದಿದ್ದರ ಇನ್ನೊಂದ ಸಲ ನೀರು ಬಂದ್ರ ನೀರಾಗ ತೇಲಿ ಹೋಗ್ತೀವು'

Vijaya Karnataka 27 Aug 2019, 5:00 am
ಬಾದಾಮಿ: ಈಗ ಮೂರು ಸಲ ನೀರು ಬಂದು ನಮ್ಮ ಮನಿ, ಬೆಳಿ ಹಾಳಾಗಿ ಹೋಗ್ಯಾವು ನಮಗ ಶಾಶ್ವತ ಪರಿಹಾರ ಕೊಡ್ರಿ ಇಲ್ಲದಿದ್ದರ ಇನ್ನೊಂದ ಸಲ ನೀರು ಬಂದ್ರ ನೀರಾಗ ತೇಲಿ ಹೋಗ್ತೀವು'
Vijaya Karnataka Web go to water please permanent relief
ನೀರಾಗ ತೇಲಿ ಹೋಗ್ತೀವು: ಶಾಶ್ವತ ಪರಿಹಾರ ಕೊಡ್ರಿ


ಹೀಗೆ ಪಟ್ಟದಕಲ್ಲಗ್ರಾಮದ ಮಹಿಳೆಯರು ಕೇಂದ್ರ ಪ್ರವಾಹ ಅಧ್ಯಯನ ತಂಡದ ಅಧಿಧಿಕಾರಿಗಳ ಮುಂದೆ ಮನವಿ ಮಾಡಿದರು.

ಅಧ್ಯಯನ ತಂಡಕ್ಕೆ ಅಲ್ಲಿನ ಮಹಿಳೆಯೊಬ್ಬರು ತಮ್ಮ ಮನೆ ಬಿದ್ದು ಹೋಗಿರುವ ಬಗ್ಗೆ ಮತ್ತು ಮನೆ ಮಂದಿಯಲ್ಲಬೀದಿಯಲ್ಲಿರುವ ಬಗ್ಗೆ ಅಳುತ್ತ ಎಳೆ ಎಳೆಯಾಗಿ ಮನ ಮುಟ್ಟುಂವತೆ ತನ್ನ ಗೋಳು ತೋಡಿಕೊಂಡಳು. ಇದನ್ನು ಕಂಡ ಅಧಿಕಾರಿಗಳು ಆ ಮಹಿಳೆಗೆ ಸಾಂತ್ವನ ಹೇಳುವುದರ ಜೊತೆಗೆ ಬದುಕು ಕಟ್ಟಿಕೊಡುವ ಭರವಸೆ ನೀಡಿದರು.

ಪಟ್ಟದಕಲ್ಲಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಕೇವಲ 10ನಿಮಿಷಗಳಲ್ಲಿಸಂತ್ರಸ್ತರನ್ನು ಮಾತನಾಡಿಸಿ, ಪಕ್ಕದ ಸೇತುವೆ ಪರಿಶೀಲಿಸಿ, ಹೊರಟರು. ಇದಕ್ಕೆ ಸಂತ್ರಸ್ತರು ಅಸಮಾಧಾನಗೊಂಡು ರಸ್ತೆಯಲ್ಲಿಯೇ ಕುಳಿತರು. ಅಧಿಧಿಕಾರಿಗಳ ಪರವಾಗಿ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಮಾತನಾಡಿ ನೆರೆ ಪ್ರವಾಹದಿಂದ ಆದ ಹಾನಿ ಪರಿಶೀಲನೆ ಮಾಡಲಾಗಿದೆ. ಐತಿಹಾಸಿಕ ಪಟ್ಟದಕಲ್ಲಗ್ರಾಮವನ್ನು ಸಂಪೂರ್ಣ ಸ್ಥಳಾಂತರ ಮಾಡಲು ಸೂಕ್ತ ಜಾಗ ನಿಗದಿಪಡಿಸಲಾಗುವುದು. ಸರಕಾರದ ಆದೇಶದ ಪ್ರಕಾರ ಪ್ರತಿ ಮನೆಗೆ ರೂ.5 ಲಕ್ಷ ಹಣವನ್ನು ನಿಗದಿಪಡಿಸಿದ್ದು, ಇದರಂತೆ ಕುಟುಂಬದ ಮಾಲೀಕನ ಹೆಸರಿಗೆ ಜಮಾ ಮಾಡಲಾಗುತ್ತಿದೆ. ಸರಕಾರದಿಂದ ಮನೆ ನಿರ್ಮಿಸಿದರೆ ಗುಣಮಟ್ಟ ಸರಿ ಇಲ್ಲಎಂದು ಹೇಳುತ್ತಾರೆ. ಆದಕಾರಣ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗುವುದು. ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಯೋಜನಾ ನಿರ್ದೇಶಕ ಶಂಕರಲಿಂಗ ಗೂಗಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಸೇರಿದಂತೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ