ಆ್ಯಪ್ನಗರ

ಸರಕಾರ ಮದ್ಯಪಾನ ನಿಷೇಧಿಸಲಿ

ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇದ ಮಾಡಬೇಕು ಎಂದು ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರವರೆಗೆ ಪಾದಯಾತ್ರೆ ಹೋಗುತ್ತಿದ್ದು ಎಲ್ಲ ಪ್ರಜ್ಞಾವಂತರು ಈ ಯಾತ್ರೆಯನ್ನು ಬೆಂಬಲಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕೋರಿದ್ದಾರೆ.

Vijaya Karnataka 30 Jan 2019, 5:00 am
ಕೂಡಲಸಂಗಮ: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇದ ಮಾಡಬೇಕು ಎಂದು ಒತ್ತಾಯಿಸಿ ಚಿತ್ರದುರ್ಗದಿಂದ ಬೆಂಗಳೂರವರೆಗೆ ಪಾದಯಾತ್ರೆ ಹೋಗುತ್ತಿದ್ದು ಎಲ್ಲ ಪ್ರಜ್ಞಾವಂತರು ಈ ಯಾತ್ರೆಯನ್ನು ಬೆಂಬಲಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕೋರಿದ್ದಾರೆ.
Vijaya Karnataka Web government should ban alcohol use
ಸರಕಾರ ಮದ್ಯಪಾನ ನಿಷೇಧಿಸಲಿ


ಪ್ರಕಟಣೆ ನೀಡಿರುವ ಅವರು, ಮುಖ್ಯವಾಗಿ ಗಂಡಸರು, ಕೂಲಿ ಕಾರ್ಮಿಕರು ಕುಡಿದು ತಮ್ಮ ಆರೋಗ್ಯ ಕೆಡಿಸಿಕೊಳ್ಳುವುದರ ಜೊತೆಗೆ ಹೆಂಡತಿ ಮಕ್ಕಳಿಗೆ ಹಿಂಸೆ ಕೊಡುವರು, ಇನ್ನೂ ಕೆಲವರು ಕುಡಿತದ ದಾಸರಾಗಿ ಬೇಗನೆ ಮರಣ ಹೊಂದುವರು. ಇದರಿಂದ ಅವರ ಮಕ್ಕಳು ಅನಾಥರಾಗುತ್ತಾರೆ.

ಸರಕಾರ ಮದ್ಯಪಾನ ನಿಷೇಧ ಮಾಡಬೇಕು. ಸರಕಾರಕ್ಕೆ ಮದ್ಯಪಾನದಿಂದ ಆದಾಯ ಬರುತ್ತದೆ ಎಂದು ಜನರ ಆರೋಗ್ಯ ಕೆಡಿಸುವುದು ತಪ್ಪು. ಸರಕಾರ ಜನಸಾಮಾನ್ಯರ ಹಿತವನ್ನು ಬಯಸಬೇಕು ಹೊರತು ಹಣವನಲ್ಲ. ಬೇರೆ ಮೂಲದಿಂದ ಹಣ ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿ ಮದ್ಯಪಾನ ನಿಷೇಧದಿಂದ ಸರಕಾರಕ್ಕೆ ಆಗುವ ನಷ್ಟಕ್ಕೆ ಬೇರೆ ಮಾರ್ಗ ಕಂಡು ಹಿಡಿಯಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಜನಸಾಮಾನ್ಯರ ಜೀವನಕ್ಕೆ ಆಘಾತ ಉಂಟು ಮಾಡಿ ಸರಕಾರ ಆದಾಯಗಳಿಸುತ್ತದೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಮಹಿಳೆಯರು ತಮ್ಮ ಹಕ್ಕಿಗಾಗಿ ಜಾಗೃತಿ ಹೊಂದುತ್ತಿರುವುದು ಸಮಾಧಾನದ ಸಂಗತಿ. ಗ್ರಾಮೀಣ ಪ್ರದೇಶದ ಮಹಿಳೆಯರು ಈ ರೀತಿ ಜಾಗೃತಿ ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ