ಆ್ಯಪ್ನಗರ

ಜೆಡಿಎಸ್‌ ಸಹವಾಸದಿಂದಲೇ ಸಿದ್ದರಾಮಯ್ಯ ಊರು ಬಿಡುವಂತಾಯ್ತು: ಗೋವಿಂದ ಕಾರಜೋಳ ಲೇವಡಿ

ಜೆಡಿಎಸ್ ಸಹವಾಸದಿಂದಲೇ ಸಿದ್ದರಾಮಯ್ಯ ಅವರಿಗೆ ಊರಿಂದ ಊರಿಗೆ ಬಂದು ನೆಲೆಕಂಡುಕೊಳ್ಳುವಂತಾಯಿತು. ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಬರಲು ಪ್ರಮುಖ ಕಾರಣವೇ ಜೆಡಿಎಸ್ ಸಹವಾಸ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದ್ದಾರೆ.

Vijaya Karnataka Web 25 Oct 2019, 5:41 pm
ಬಾಗಲಕೋಟೆ: ಜೆಡಿಎಸ್ ಸಹವಾಸ ಮಾಡಿದ್ದಕ್ಕಾಗಿಯೇ ಸಿದ್ದರಾಮಯ್ಯ ಊರು ಬಿಡುವಂತಾಯ್ತು ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಅವರು ಎಡಿಕುಮಾರ ಸ್ವಾಮಿ ಅವರ ಟ್ವೀಟ್‌ ಕುರಿತಂತೆ ಪ್ರತಿಕ್ರಿಯಿಸಿದರು.
Vijaya Karnataka Web govind karjol


ಸಿದ್ದರಾಮಯ್ಯ ಜೆಡಿಎಸ್ ಸಹವಾಸ ಮಾಡಿದ್ದೇ ತಪ್ಪಾಯ್ತು ಎಂಬ ಹೇಳಿಕೆಗೆ, ಎಚ್‌ಡಿಕೆ ಟ್ವೀಟ್ ಮೂಲಕ ಎದುರೇಟು ನೀಡಿದ್ದರು. ಇದೀಗ ಇವರಿಬ್ಬರ ವಾಗ್ವಾದಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ''ಯಾರು'' ಪ್ರಶ್ನೆಗಳ ಸವಾಲು

ಜೆಡಿಎಸ್ ಸಹವಾಸ ಕೆಟ್ಟಿದ್ದಕ್ಕೇ ಸಿದ್ದರಾಮಯ್ಯ ಊರು ಬಿಟ್ಟು ಬಂದಿದ್ದು. ಜೆಡಿಎಸ್ ಸಹವಾಸದಿಂದಲೇ ಸಿದ್ದರಾಮಯ್ಯ ಅವರಿಗೆ ಊರಿಂದ ಊರಿಗೆ ಬಂದು ನೆಲೆಕಂಡುಕೊಳ್ಳುವಂತಾಯಿತು. ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಬರಲು ಪ್ರಮುಖ ಕಾರಣವೇ ಜೆಡಿಎಸ್ ಸಹವಾಸ ಮಾಡಿ ಕೆಟ್ಟಿದ್ದು ಎಂದು ಲೇವಡಿ ಮಾಡಿದರು.

ಮಾಡೋಕ್ ಬೇರೆ ಕೆಲ್ಸಾ ಇಲ್ಲ, ಅದ್ಕೆ ಪಾದಯಾತ್ರೆ: ಸಿದ್ದುಗೆ ಡಿಸಿಎಂ ಕಾರಜೋಳ ಟಾಂಗ್

ಸಿ ಸಿ ಪಾಟೀಲ್ ಹೇಳಿಕೆ:
ಪ್ರವಾಹದಿಂದ ಹಾನಿಯಾದ ರಸ್ತೆಗೆ ಹಿಡಿಮಣ್ಣು ಹಾಕಲು ಸರ್ಕಾರದ ಬಳಿ ಹಣ ಇಲ್ಲ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದರು. ಆದರೆ, ರಾಜ್ಯ ಸರ್ಕಾರ ತಾತ್ಕಾಲಿಕ ರಸ್ತೆ ದುರಸ್ಥಿಗೆ 500 ಕೋಟಿ ರೂ. ಬಿಡುಗಡೆ ಮಾಡಿದೆ. ಸರ್ಕಾರದಲ್ಲಿ ಹಣ ಇಲ್ಲ ಅನ್ನೋದಕ್ಕೆ ಹೇಗೆ ಸಾಧ್ಯ ಎಂದರು.

ಕಾಂಗ್ರೆಸ್ ಕುಸಿದು ಹೋಗಿದೆ; ಇನ್ಮುಂದೆ ದೇಶದಲ್ಲಿ ಬಿಜೆಪಿಯದ್ದೇ ಆಡಳಿತ: ಗೋವಿಂದ ಕಾರಜೋಳ

ಸರ್ಕಾರದಲ್ಲಿ ಹಣವಿದೆ. ಶಾಶ್ವತ ರಸ್ತೆ ನಿರ್ಮಾಣಕ್ಕೆ 8 ಸಾವಿರ ಕೋಟಿ ಅಗತ್ಯವಿದೆ. ಆ ಹಣವನ್ನು ಹೊಂದಾಣಿಕೆ ಮಾಡಿ ರಸ್ತೆ ನಿರ್ಮಾಣ ಮಾಡ್ತೇವೆ. ಸಿ ಸಿ ಪಾಟೀಲ್ ಸಹಜವಾಗಿ ಮಾತನಾಡಿರಬಹುದು. ಜನರು ಬೇರೆ ಬೇರೆ ಏನೇನೋ ಕೇಳ್ತಿರ್ತಾರೆ. ಹೆಚ್ಚಿಗೆ ಕೇಳಿದಾಗ ಇಲ್ಲ ಅನ್ನೋದು ರೂಢಿ ಇರುತ್ತದೆ ಎಂದು ಹೇಳಿದರು.

ಟಿಪ್ಪು ಜಯಂತಿ ಮಾಡ್ತೇವೆ ಅಂತ ಶರತ್ ಬಚ್ಚೇಗೌಡ ಹೇಳಿಕೆ ಕುರಿತ ಪ್ರತಿಕ್ರಿಯೆ ಕೇಳಿದಾಗ, ಅವರು ನನಗೆ ಪರಿಚಯವಿಲ್ಲವೆಂದು ಜಾರಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ