ಆ್ಯಪ್ನಗರ

ಕಾಂಗ್ರೆಸ್ ಅಭ್ಯರ್ಥಿಗಳ ಹೆಸರಿನಲ್ಲಿ ವಾಮಾಚಾರ, ಗ್ರಾ.ಪಂ. ಚುನಾವಣೆ ಗೆಲ್ಲಲು ತಂತ್ರ!

ಗ್ರಾಪಂ ಚುನಾವಣೆಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ.. ಚುನಾವಣೆಯನ್ನು ಗೆಲ್ಲಲು ಪಕ್ಷಗಳು ಹಣ, ಹೆಂಡದ ಮಳೆ ಸುರಿದಿದ್ದಾರೆ.. ಕೆಲವೆಡೆ ಹರಾಜು ಮೂಲಕ ಚುನಾವಣೆ ಪ್ರಕ್ರಿಯೆ ನಡೆದಿದೆ.. ಇಂತಹ ಬಿಸಿ ಬಿಸಿ ಸುದ್ದಿಗಳ ಮಧ್ಯೆ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಹೆಸರು ಬರೆದು ವಾಮಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka Web 20 Dec 2020, 4:03 pm
ಬಾಗಲಕೋಟೆ : ಗ್ರಾಮ ಪಂಚಾಯತಿಗಳ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ದಿನಗಳ ಬಾಕಿ ಇರುವಾಗಲೇ ರಬಕವಿ-ಬನಹಟ್ಟಿ ತಾಲೂಕಿನಸಸಾಲಟ್ಟಿ ಗ್ರಾಮದಲ್ಲಿ ಚುನಾವಣೆಯಲ್ಲಿ ಗೆಲ್ಲಲು ಕೆಲವರು ವಾಮಾಚಾರ ಮಾಡುವ ಕೆಲಸ ಮಾಡಿದ್ದಾರೆ.
Vijaya Karnataka Web ವಾಮಾಚಾರ
ಸಾಂದರ್ಭಿಕ ಚಿತ್ರ


ಭಾನುವಾರ ನಸುಕಿನ ಜಾವ ಗ್ರಾಮದ ಹಲವು ಕಡೆಗಳಲ್ಲಿ ವಾಮಾಚಾರ ಮಾಡಿರುವ ಗೊಂಬಿ, ನಿಂಬೆಹಣ್ಣು, ಗುಲಾಲ, ಕುಂಬಳಕಾಯಿಯಲ್ಲಿ ಹಾಕಿ ರಸ್ತೆ ಮಧ್ಯೆ ಯಾರೋ ಇಟ್ಟು ಹೋಗಿದ್ದಾರೆ.
ಗ್ರಾ.ಪಂಚಾಯತ್‌ ಚುನಾವಣೆ: ಹಗಲು ಪ್ರಸಾದದ ಪರಿಮಳ, ರಾತ್ರಿ ಮದ್ಯದ ಘಮಲು; ಇದು ಎಲೆಕ್ಷನ್‌ನ ಇಂಟ್ರೆಸ್ಟಿಂಗ್‌ ಕಹಾನಿ!

ಇದನ್ನು ಕಂಡ ಅಭ್ಯರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೂ ವಾಮಾಚಾರದ ವಸ್ತುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಹೆಸರು ಬರೆದಿರುವುದು ಕಂಡು ಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ರಂಗತಾಲೀಮು: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಸಮಿತಿ ಸಭೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ