ಆ್ಯಪ್ನಗರ

ಮಾಧ್ವ ಮಂಡಳಕ್ಕೆ ಅನುದಾನದ ನೆರವು

ಬಾಗಲಕೋಟೆ: ​ ನವನಗರದ 8ನೇ ಸೆಕ್ಟರ್‌ನಲ್ಲಿರುವ ಕೃಷ್ಣ ಮಠ, ಮಾಧ್ವ ಮಂಡಳದ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೆರವು ನೀಡುವುದಾಗಿ ಶಾಸಕ ಡಾ.ವೀರಣ್ಣ ಚರಂತಿಮಠ ಭರವಸೆ ನೀಡಿದರು.

Vijaya Karnataka 24 Aug 2019, 5:00 am
ಬಾಗಲಕೋಟೆ: ನವನಗರದ 8ನೇ ಸೆಕ್ಟರ್‌ನಲ್ಲಿರುವ ಕೃಷ್ಣ ಮಠ, ಮಾಧ್ವ ಮಂಡಳದ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನೆರವು ನೀಡುವುದಾಗಿ ಶಾಸಕ ಡಾ.ವೀರಣ್ಣ ಚರಂತಿಮಠ ಭರವಸೆ ನೀಡಿದರು.
Vijaya Karnataka Web grant aid to madhva mandala
ಮಾಧ್ವ ಮಂಡಳಕ್ಕೆ ಅನುದಾನದ ನೆರವು

ಅಖಿಲ ಭಾರತ ಮಾಧ್ವ ಮಹಾ ಮಂಡಳದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಮಂದಿರದಲ್ಲಿನ ಕೃಷ್ಣನ ದರ್ಶನ ಪಡೆದುಕೊಂಡ ಅವರು, 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿರುವ ವಸತಿ ನಿಲಯಕ್ಕೆ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಸಂಸದರ ನಿಧಿಯ ನೆರವಿಗೂ ಸಲಹೆ ಮಾಡುತ್ತೇನೆ ಎಂದು ಹೇಳಿದರು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಬೇಕೆಂಬುದು ನನ್ನ ಆಶಯ. ಅದಕ್ಕಾಗಿ ಈ ನೆರವು ನೀಡುವುದಾಗಿ ತಿಳಿಸಿದ ಅವರು, ಪೇಜಾವರ ಮಠಾಧೀಶರು ಸಾಮಾಜಿಕ ಕಳಕಳಿಯಲ್ಲಿಮಾಡುತ್ತಿರುವ ಸರ್ವ ಕಾರ್ಯ ಶ್ಲಾಘನೀಯ ಎಂದರು. ಚರಂತಿಮಠ ಅವರನ್ನು ಸನ್ಮಾನಿಸಿದ ಮಾಧ್ವ ಮಂಡಳದ ಗೌರವಾಧ್ಯಕ್ಷ ಸಿ.ಎನ್‌.ದಾಸ್‌ ಬಾಗಲಕೋಟೆ ನಗರದಲ್ಲಿಮಾಧ್ವ ಮಹಾ ಮಂಡಳ ಮುಳಗಡೆಯಾದಾಗ ನಿವೇಶನ ಕೊಡಿಸಿದ್ದಲ್ಲದೇ ಎಲ್ಲನೆರವೂ ನೀಡಿದ್ದನ್ನು ಸ್ಮರಿಸಿದರು. ಪಂ.ನವೀನಾಚಾರ‍್ಯ, ಪಂ.ಪ್ರಮೋದಾಚಾರ‍್ಯ ಆಲೂರ, ಸಂತೋಷ ಗದ್ದನಕೇರಿ, ನಿಲಯದ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ