ಆ್ಯಪ್ನಗರ

ಲೋಕಲ್‌ ಪಾಲಿಟಿಕ್ಸ್‌ಗೆ ಸಿದ್ದರಾಮಯ್ಯ ಎಂಟ್ರಿ, 'ಕೈ'ಗೆ ಅಧಿಕಾರ ತಪ್ಪದಂತೆ ನೋಡಿಕೊಂಡ ಮಾಜಿ ಸಿಎಂ

​ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಕಳೆದೆರಡು ದಿನಗಳಿಂದ ಸ್ಥಳೀಯ ರಾಜಕಾರಣದಲ್ಲಿ ಬ್ಯುಸಿಯಾಗಿದ್ದರು. ಗುಳೇದಗುಡ್ಡ ಪುರಸಭೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌ ಪಕ್ಷದ ಕೈ ಸೇರುವಂತೆ ಮಾಡುವಲ್ಲಿ ಮಾಜಿ ಸಿಎಂ ಯಶಸ್ವಿಯಾಗಿದ್ದಾರೆ.

Vijaya Karnataka 9 Nov 2020, 8:02 pm
ಬಾಗಲಕೋಟೆ: ಈವರೆಗೆ ರಾಜ್ಯದ ರಾಜಕಾರಣದಲ್ಲಿ ತಮ್ಮ ಪಟ್ಟುಗಳ ಮೂಲಕ ಗಮನ ಸೆಳೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಲೋಕಲ್‌ ಪಾಲಿಟಿಕ್ಸ್‌ಗೂ ಎಂಟ್ರಿ ಕೊಟ್ಟಿದ್ದಾರೆ.
Vijaya Karnataka Web siddaramaiah


ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಭಾನುವಾರ ಹಾಗೂ ಸೋಮವಾರ ಲೋಕಲ್‌ ಪಾಲಿಟಿಕ್ಸ್‌ನಲ್ಲಿ ಬ್ಯುಸಿಯಾಗಿದ್ದರು. ಗುಳೇದಗುಡ್ಡ ಪುರಸಭೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌ ಕೈ ಸೇರುವಂತೆ ಮಾಡುವಲ್ಲಿ ಮಾಜಿ ಸಿಎಂ ಯಶಸ್ವಿಯಾಗಿದ್ದಾರೆ. 23 ಸ್ಥಾನ ಹೊಂದಿರುವ ಗುಳೇದಗುಡ್ಡ ಪುರಸಭೆಯಲ್ಲಿ ಕಾಂಗ್ರೆಸ್‌ 15 ಸ್ಥಾನದ ಮೂಲಕ ಬಹುಮತ ಹೊಂದಿದೆ. ಬಿಜೆಪಿ 2, ಜೆಡಿಎಸ್‌ 5 ಹಾಗೂ ಒಬ್ಬ ಪಕ್ಷೇತರರಿದ್ದಾರೆ. ಅಧ್ಯಕ್ಷ , ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್‌ ಕೈ ತಪ್ಪದಂತೆ ಎರಡು ದಿನ ಸಭೆ ನಡೆಸಿದ ಸಿದ್ದರಾಮಯ್ಯ ಸೋಮವಾರ ಗುಳೇದಗುಡ್ಡದಲ್ಲಿ ಆಯ್ಕೆ ಸಭೆಯಲ್ಲೂ ಇದ್ದರು.

ವಿನಯ್‌ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ - ಸಿದ್ದರಾಮಯ್ಯ ಆರೋಪ
ಕಾಂಗ್ರೆಸ್‌ನ ಸದಸ್ಯರು ಈ ಮೊದಲು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದರು. ಭಾನುವಾರ ಕೊನೆಯ ಹಂತದ ಸಭೆ ನಡೆಸಿದ ಸಿದ್ದರಾಮಯ್ಯ ಕೈ ಅಧಿಕಾರಕ್ಕೆ ತಂತ್ರ ರೂಪಿಸಿದರು. ಈ ಮಧ್ಯೆ ಚುನಾವಣೆ ನಡೆದು ಕಾಂಗ್ರೆಸ್‌ನ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆಯಾಗಿ ಷರೀಫಾ ಮಂಗಳೂರು ಆಯ್ಕೆಯಾದರು. ಆದರೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಷರೀಫಾ ಮುನಿಸಿಕೊಳ್ಳುತ್ತಿರುವಂತೆ ಸ್ಥಳಕ್ಕೆ ಕರೆಸಿದ ಸಿದ್ದರಾಮಯ್ಯ ಷರೀಫಾರನ್ನು ಸಮಾಧಾನಪಡಿಸಿದರು. ‘ಇನ್ನೂ 5 ವರ್ಷ ಅವಧಿಯಿದ್ದು ಚೆನ್ನಾಗಿ ಕೆಲಸ ಮಾಡು, ಅವಕಾಶ ನೀಡೋಣ’ ಎಂದರು.

ಬಾದಾಮಿ ಪುರಸಭೆ ಅಧ್ಯಕ್ಷ , ಉಪಾಧ್ಯಕ್ಷ ರ ಆಯ್ಕೆಗೆ ಮಂಗಳವಾರ ಚುನಾವಣೆ ನಡೆಯಲಿದೆ. 23 ಸ್ಥಾನಗಳ ಪೈಕಿ 13 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಬಹುಮತ ಪಡೆದಿದೆ. ಒಟ್ಟಿನಲ್ಲಿ ಈವರೆಗೆ ರಾಜ್ಯ, ಜಿಲ್ಲಾಮಟ್ಟದ ರಾಜಕಾರಣದಲ್ಲಿ ತಂತ್ರಗಾರಿಕೆ ತೋರಿಸಿದ್ದ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೂ ಅಧಿಕಾರ ಪಡೆಯಲು ಮುಖಂಡರಿಗೆ ಬೆನ್ನೆಲುಬಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ