ಬಾಗಲಕೋಟ : ಬಿಸಿಯೂಟಕ್ಕಾಗಿ ತರಿಸಿದ್ದ ಆಹಾರ ಮತ್ತು ಬೇಳೆ ಕಾಳುಗಳ ವಿಚಾರದಲ್ಲಿ ಅಕ್ರಮ, ಅವ್ಯವಹಾರ ನಡೆಯುವುದು ಗೊತ್ತೇ ಇದೆ. ಆದರೆ ಬಾಗಲಕೋಟ ಜಿಲ್ಲೆಯಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ಬಿಸಿಯೂಟಕ್ಕಾಗಿ ತರಿಸಿದ್ದ ಆಹಾರ ಮತ್ತು ಬೇಳೆ ಕಾಳುಗಳನ್ನು ಕದಿಯುವಾಗ ಮಕ್ಕಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ತೆಗ್ಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸುಮಾರು 20 ಕೆ.ಜಿಗೂ ಹೆಚ್ಚು ಬೆಳೆಕಾಳನ್ನು ಸ್ಟೀಲ್ ಪಾತ್ರೆಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಮುಖ್ಯ ಶಿಕ್ಷಕಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕು ಬಿದ್ದಿದ್ದಾರೆ.
ವಿಷಯ ಗ್ರಾಮದಲ್ಲಿ ಹರಡಿ, ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು. ಶಾಲೆಯ ಮುಖ್ಯಶಿಕ್ಷಕಿ, ಬೆಳೆ ಕಾಳು ಕದ್ದು, ಅಡುಗೆ ಸಹಾಯಕರ ಕೈ ಯಲ್ಲಿ ಮನೆಗೆ ಕಳುಹಿಸುತ್ತಿರುವ ಆರೋಪ ಕೇಳಿಬಂದಿದೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ತೆಗ್ಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸುಮಾರು 20 ಕೆ.ಜಿಗೂ ಹೆಚ್ಚು ಬೆಳೆಕಾಳನ್ನು ಸ್ಟೀಲ್ ಪಾತ್ರೆಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾಗ ಮುಖ್ಯ ಶಿಕ್ಷಕಿ ಗ್ರಾಮಸ್ಥರ ಕೈಯಲ್ಲಿ ಸಿಕ್ಕು ಬಿದ್ದಿದ್ದಾರೆ.
ವಿಷಯ ಗ್ರಾಮದಲ್ಲಿ ಹರಡಿ, ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು. ಶಾಲೆಯ ಮುಖ್ಯಶಿಕ್ಷಕಿ, ಬೆಳೆ ಕಾಳು ಕದ್ದು, ಅಡುಗೆ ಸಹಾಯಕರ ಕೈ ಯಲ್ಲಿ ಮನೆಗೆ ಕಳುಹಿಸುತ್ತಿರುವ ಆರೋಪ ಕೇಳಿಬಂದಿದೆ.