ಆ್ಯಪ್ನಗರ

ಹೃದಯಾಘಾತ, ಜೆಡಿಎಸ್‌ ಕಾರ್ಯಕರ್ತ ಸಾವು

ಬಾಗಲಕೋಟ : ಹೃದಯಾಘಾತಕ್ಕೊಳಗಾಗಿದ್ದ ಜೆಡಿಎಸ್‌ ಕಾರ್ಯಕರ್ತನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸೋಮವಾರ ಮೃತಪಟ್ಟಿದ್ದಾನೆ.

Vijaya Karnataka 18 Jun 2019, 5:00 am
ಬಾಗಲಕೋಟ : ಹೃದಯಾಘಾತಕ್ಕೊಳಗಾಗಿದ್ದ ಜೆಡಿಎಸ್‌ ಕಾರ್ಯಕರ್ತನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಸೋಮವಾರ ಮೃತಪಟ್ಟಿದ್ದಾನೆ.
Vijaya Karnataka Web heart attack jds activist death
ಹೃದಯಾಘಾತ, ಜೆಡಿಎಸ್‌ ಕಾರ್ಯಕರ್ತ ಸಾವು


ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಗ್ರಾಮದ ದಾವಲ್‌ಸಾಬ್‌ ಕೊಣ್ಣೂರ (55) ಮೃತಪಟ್ಟವರು. ಕೆರೂರ ಗ್ರಾಮದಲ್ಲಿದ್ದ ದಾವಲ್‌ಸಾಬ್‌ ಅವರಿಗೆ ಹೃದಯದಲ್ಲಿ ತೀವ್ರ ನೋವು ಕಾಣಿಸಿಕೊಂಡ ಕಾರಣ ಸಂಬಂಧಿಕರು ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿದ್ದ ಕಾರಣ ಬಾಗಲಕೋಟದ ಜಿಲ್ಲಾಸ್ಪತ್ರೆಗೆ ಕರೆತಂದರು. ಅಷ್ಟರಲ್ಲಿ ದಾವಲ್‌ಸಾಬ್‌ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅಸ್ತಮಾ, ಕಫದಿಂದ ಬಳಲುತ್ತಿದ್ದ ದಾವಲ್‌ಸಾಬ್‌ ಎರಡು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದರು. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ದಾವಲ್‌ಸಾಬ್‌ ಮೃತಪಟ್ಟಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಆದರೆ ಕುಟುಂಬ ವರ್ಗದವರು ಈ ಆರೋಪವನ್ನು ಖಚಿತಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ