ಆ್ಯಪ್ನಗರ

ಬೆಂಗಳೂರು ಬಸ್‌ಗೆ ಭಾರಿ ಬೇಡಿಕೆ

ಜಿಲ್ಲೆಯಿಂದ ಬೆಂಗಳೂರಿಗೆ ಬಸ್‌ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಿಂದ ಭಾರಿ ಬೇಡಿಕೆ ಕಂಡುಬಂದಿದೆ.

Vijaya Karnataka Web 21 May 2020, 5:00 am
ಬಾಗಲಕೋಟೆ : ಜಿಲ್ಲೆಯಿಂದ ಬೆಂಗಳೂರಿಗೆ ಬಸ್‌ ಸಂಚಾರ ಆರಂಭಗೊಂಡಿದ್ದು, ಪ್ರಯಾಣಿಕರಿಂದ ಭಾರಿ ಬೇಡಿಕೆ ಕಂಡುಬಂದಿದೆ.
Vijaya Karnataka Web heavy demand for bangalore bus
ಬೆಂಗಳೂರು ಬಸ್‌ಗೆ ಭಾರಿ ಬೇಡಿಕೆ


ದೂರದ ಊರುಗಳಿಗೆ ಸಂಜೆಯೂ ಬಸ್‌ ಸಂಚರಿಸಬಹುದು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿಜಿಲ್ಲೆಯಿಂದ ಬೆಂಗಳೂರಿಗೆ ಬಸ್‌ ಸಂಚರಿಸುತ್ತಿವೆ. ಬುಧವಾರ ಬಾಗಲಕೋಟೆ, ಜಮಖಂಡಿ ಹಾಗೂ ಮುಧೋಳಗಳಿಂದ ಬೆಂಗಳೂರಿಗೆ 6 ಬಸ್‌ ತೆರಳಿದವು. ಎಲ್ಲಬಸ್‌ಗಳೂ ಭರ್ತಿಯಾಗಿದ್ದು, ರಾಜಹಂಸ ಬಸ್‌ನಲ್ಲಿ20 ಪ್ರಯಾಣಿಕರಿಗೆ ಅವಕಾಶವಿತ್ತು.

ಜಿಲ್ಲೆಯ ಪ್ರಮುಖ ಸ್ಥಳಗಳಿಂದ ಸಂಜೆ 6.45ಕ್ಕೆ ಕೊನೆಯ ಬಸ್‌ ಬೆಂಗಳೂರಿಗೆ ತೆರಳಲಿವೆ. ಆನ್‌ಲೈನ್‌ ಹಾಗೂ ಬಸ್‌ ನಿಲ್ದಾಣದಲ್ಲಿಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಈಗಾಗಲೇ ಗುರುವಾರದ ಪ್ರಯಾಣಕ್ಕಾಗಿ ಜಮಖಂಡಿಯಿಂದ ಬಸ್‌ ಪೂರ್ತಿಯಾಗಿ ಬುಕ್‌ ಆಗಿದೆ. ಬಸ್‌ ಸಂಚಾರ ಆರಂಭದ ಮೊದಲ ದಿನ ಮಂಗಳವಾರ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ಎದುರಾಗಿತ್ತು. ಬುಧವಾರ ಸ್ಥಿತಿ ಸುಧಾರಿಸಿದ್ದು, ನಿಲ್ದಾಣಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿಪ್ರಯಾಣಿಕರು ಕಂಡುಬಂದರು. 200 ಬಸ್‌ಗಳ ಪೈಕಿ ಬುಧವಾರ 80 ಬಸ್‌ಗಳು ಸಂಚರಿಸಿವೆ.

ಮಂಗಳವಾರದ ಬಸ್‌ ಸಂಚಾರದಿಂದ ವಾಕರಸಾ ಸಂಸ್ಥೆಗೆ 1 ಲಕ್ಷ 20 ಸಾವಿರ ರೂ. ಆದಾಯ ದೊರೆತಿದೆ. 'ಬೆಂಗಳೂರಿಗೆ ತೆರಳಲು ಬಸ್‌ಗಾಗಿ ಬೇಡಿಕೆ ಬಂದಿದೆ, ಬುಕ್ಕಿಂಗ್‌ ಆಧರಿಸಿ ಹೆಚ್ಚುವರಿ ಬಸ್‌ ಓಡಿಸಲಾಗುತ್ತದೆ. ಆನ್‌ಲೈನ್‌ನಲ್ಲಿಬುಕ್‌ ಮಾಡಲು ಅವಕಾಶವಿದೆ' ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣವರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ