ಆ್ಯಪ್ನಗರ

ಕೊರೊನಾ ಸೋಂಕಿತ ವೃದ್ಧ ಸಾವಿನ ಹಿನ್ನೆಲೆ, ಬಾಗಲಕೋಟೆಯಲ್ಲಿ ಹೈ ಅಲರ್ಟ್‌

ಬಾಗಲಕೋಟೆಯಲ್ಲಿ ಆರೋಗ್ಯ ಇಲಾಖೆ ಸರ್ವೆ ಕಾರ್ಯದ ವೇಳೆ ಪತ್ತೆಯಾದ ಅನಾರೋಗ್ಯ ಪೀಡಿತ 9 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇವರ ಪೈಕಿ ಮೂರು ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Vijaya Karnataka 4 Apr 2020, 4:19 pm

ಬಾಗಲಕೋಟೆ: ಕೊರೊನಾ ಸೋಂಕಿನಿಂದ ವೃದ್ದ ಮೃತಪಟ್ಟ ಬೆನ್ನಲ್ಲೆ ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಸರ್ವೆ ಕಾರ್ಯ, ಶಂಕಿತರ ಸ್ಯಾಂಪಲ್‌ ಕಳುಹಿಸುವ ಕೆಲಸಗಳಲ್ಲಿ ಬಿರುಸಿನಿಂದ ತೊಡಗಿಸಿಕೊಂಡಿದ್ದಾರೆ.
Vijaya Karnataka Web coronavirus-11
ಸಾಂದರ್ಭಿಕ ಚಿತ್ರ


ಆರೋಗ್ಯ ಇಲಾಖೆಯಿಂದ ಹಳೇ ಬಾಗಲಕೋಟೆ ನಗರದಾದ್ಯಂತ ಸವೆ೯ ಕಾರ್ಯ ಭರದಿಂದ ಸಾಗಿದೆ. ಒಂದೇ ದಿನಕ್ಕೆ 6,300 ಜನರನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸರ್ವೆ ಮಾಡಿದ್ದಾರೆ. 50 ತಂಡಗಳ ಮೂಲಕ ನಗರದಾದ್ಯಂತ ಸರ್ವೆ ಕಾರ್ಯ ನಡೆಯುತ್ತಿದೆ.

ಸರ್ವೆ ಕಾರ್ಯದ ವೇಳೆ ಪತ್ತೆಯಾದ ಅನಾರೋಗ್ಯ ಪೀಡಿತ 9 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇವರ ಪೈಕಿ ಮೂರು ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಕೊರೊನಾಗೆ 4 ನೇ ಬಲಿ, ಬಾಗಲಕೋಟೆಯ ಸೋಂಕಿತ ವೃದ್ಧ ಸಾವು

ಇಬ್ಬರು ಸದಸ್ಯರ ಒಟ್ಟು ತಂಡಗಳು ಸರ್ವೆ ನಡೆಸುತ್ತಿದ್ದರೆ, ಈ ತಂಡಗಳ ಉಸ್ತುವಾರಿಗೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಎಪ್ರಿಲ್ 15ರವರೆಗೂ ಈ ಸರ್ವೆ ಕಾರ್ಯವನ್ನು ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇಂದು ಮತ್ತೆ 7 ಜನರ ಗಂಟಲು ದ್ರವವನ್ನುಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿದೆ. ಇವರಲ್ಲಿ ಮೂರು ಜನರು ಮೃತ ಸೋಂಕಿತ ವೃದ್ಧರ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ. ಇವರ ಜೊತೆಗೆ ಇನ್ನೂ ನಾಲ್ವರ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬಾಗಲಕೋಟೆಯಲ್ಲಿ ಮೊದಲ ಕೊರೊನಾ ಪ್ರಕರಣ; ವೃದ್ಧರಿಗೆ ಸೋಂಕು, ಎಲ್ಲೆಡೆ ಕಟ್ಟೆಚ್ಚರ

ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯಿಂದ 28 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 17 ಜನರ ರಿಪೋರ್ಟ್‌ ನೆಗೆಟಿವ್‌ ಬಂದಿದೆ. ಸಾವಿಗೀಡಾದ ವೃದ್ಧರೊಬ್ಬರ ವರದಿ ಮಾತ್ರ ಪಾಸಿಟಿವ್‌ ಬಂದಿತ್ತು. ಆದರೆ ಇನ್ನೂ 9 ಜನರ ವರದಿ ಬರಬೇಕಿದೆ. ಇನ್ನು ಒಬ್ಬರ ಸ್ಯಾಂಪಲ್‌ ರಿಜೆಕ್ಟ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ