ಆ್ಯಪ್ನಗರ

ಇಳಕಲ್‌ನಲ್ಲಿ ಜಾಗೃತಿ ಪಾದಯಾತ್ರೆ

ಇಳಕಲ್‌: ಇಲ್ಲಿನ ಬಸವಕೇಂದ್ರ, ವಿಜಯ ಮಹಾಂತೇಶ ಸಂಸ್ಥಾನಮಠ, ಅಕ್ಕನಬಳಗ, ತರುಣ ಸಂಘ, ಯುವ ಸೇವಾ ಬಳಗ ಹಾಗೂ ವಿಜಯ ಮಹಾಂತೇಶ ಕಲಾಲೋಕದ ಸಹಯೋಗದಡಿ ಜಂಟಿಯಾಗಿ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವದ ಜನಜಾಗೃತಿ ಪಾದಯಾತ್ರೆ ಅರ್ಥಪೂರ್ಣವಾಗಿ ಜರುಗಿತು.

Vijaya Karnataka 8 May 2019, 5:00 am
ಇಳಕಲ್‌: ಇಲ್ಲಿನ ಬಸವಕೇಂದ್ರ, ವಿಜಯ ಮಹಾಂತೇಶ ಸಂಸ್ಥಾನಮಠ, ಅಕ್ಕನಬಳಗ, ತರುಣ ಸಂಘ, ಯುವ ಸೇವಾ ಬಳಗ ಹಾಗೂ ವಿಜಯ ಮಹಾಂತೇಶ ಕಲಾಲೋಕದ ಸಹಯೋಗದಡಿ ಜಂಟಿಯಾಗಿ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವದ ಜನಜಾಗೃತಿ ಪಾದಯಾತ್ರೆ ಅರ್ಥಪೂರ್ಣವಾಗಿ ಜರುಗಿತು.
Vijaya Karnataka Web hike awakening in ilakal
ಇಳಕಲ್‌ನಲ್ಲಿ ಜಾಗೃತಿ ಪಾದಯಾತ್ರೆ


ಗುರುಮಹಾಂತಶ್ರೀ ಪಾದಯಾತ್ರೆ ನೇತೃತ್ವ ವಹಿಸಿದ್ದರು. ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಚಿತ್ತರಗಿ ವಿಜಯ ಮಹಾಂತೇಶ ಎಜ್ಯುಕೇಶನ್‌ ಸೊಸೈಟಿ ಹಾಗೂ ಅಂಗ ಸಂಸ್ಥೆಗಳು, ಎಲ್ಲ ಶಿಕ್ಷ ಣ ಸಂಸ್ಥೆಗಳ ಪ್ರಮುಖರು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಅಕ್ಕನಬಳಗದ ಮಾಜಿ ಅಧ್ಯಕ್ಷೆ ಡಾ.ಅರುಣಾ ಕೆ.ಅಕ್ಕಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಸಂಘದ ಚೇರಮನ್‌ ಎಂ.ಜಿ.ಪಟ್ಟಣಶೆಟ್ಟರ್‌,ಮಾಜಿ ಚೇರಮನ್‌ ಎಂ.ವಿ. ಪಾಟೀಲ, ಡಾ.ಕೆ.ವಿ.ಅಕ್ಕಿ, ಪ್ರ.ಕಾರ್ಯದರ್ಶಿ ದಿಲೀಪ ದೇವಗಿರಿಕರ ಮಹಾತ್ಮಾ ಗಾಂಧಿ, ಎಸ್‌.ಆರ್‌.ಕಂಠಿ, ಬಸವೇಶ್ವರ ಕಂಚಿನ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿದರು. ಪಾದಯಾತ್ರೆ ಗಾಂಧಿ ಚೌಕ್‌, ಹಳೆ ಮುನಸಿಪಾಲ್ಟಿ ರಸ್ತೆ, ಸಾಲಪೇಟೆ, ತರಕಾರಿ ಮಾರುಕಟ್ಟೆ ರಸ್ತೆ, ರಾಮಮಂದಿರ ರಸ್ತೆ, ಕೊಪ್ಪರದ ಪೇಟೆ, ಬನ್ನಿ ಕಟ್ಟಿ, ಹಳೇ ಪೊಲೀಸ್‌ ಮೈದಾನ, ಮಹಾಂತೇಶ ಚಿತ್ರಮಂದಿರ ರಸ್ತೆ, ನಗರಸಭೆ ರಸ್ತೆ, ಕಂಠಿ ವೃತ್ತ, ಬಸ್‌ ನಿಲ್ದಾಣ ರಸ್ತೆ ಮಾರ್ಗವಾಗಿ ನಗರದ ಹೊರವಲಯದ ಬಸವೇಶ್ವರ ವೃತ್ತ ತಲುಪಿತು. ಶಾಸಕ ದೊಡ್ಡನಗೌಡ ಪಾಟೀಲ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬಸವಕೇಂದ್ರದ ಅಧ್ಯಕ್ಷ ಶಿವಾನಂದ ರುಳಿ, ಸಂಗಣ್ಣ ಗದ್ದಿ ಮತ್ತಿತರರಿದ್ದರು. ಪಾದಯಾತ್ರೆಯುದ್ದಕ್ಕೂ ಗುರುಮಹಾಂತಶ್ರೀ, ಗುರುಬಸವ ದೇವರಿಗೆ ಮನೆ ಮೇಲಿಂದ ಹೂವಿನ ಸುರಿಮಳೆಗೈದರು. ಅಲ್ಲಲ್ಲಿ ಭಕ್ತರು ತಂಪು ಪಾನೀಯ, ನೀರು, ಮಜ್ಜಿಗೆ ವಿತರಿಸಿ ಸಾರ್ಥಕತೆ ಕಂಡುಕೊಂಡರು. ಬಸವೇಶ್ವರ ವೃತ್ತದಲ್ಲಿ ಪ್ರಸಾದ ವಿತರಣೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ