ಆ್ಯಪ್ನಗರ

ಇತಿಹಾಸ ಅರಿತರೆ ಮಾತ್ರ ಇತಿಹಾಸ ಸೃಷ್ಠಿಸಬಹುದು

ಬಾಗಲಕೋಟೆ: ಕನ್ನಡ ಸಾಹಿತ್ಯಕ್ಕೆ ಹಾಗೂ ಇತಿಹಾಸಕ್ಕೆ ಅಭಿನಾಭಾವ ಸಂಬಂಧವಿದೆ, ಕನ್ನಡ ಸಾಹಿತ್ಯಕ್ಕೆ ಇತಿಹಾಸ ಮಿತ್ರನಂತೆ ಸಹಾಯ ಮಾಡುತ್ತದೆ ಎಂದು ಬವಿವ ಸಂಘದ ಅಕ್ಕಮಹಾದೇವಿ ಮಹಿಳಾ ಕಾಲೇಜ್‌ನ ಕನ್ನಡ ಪ್ರಾಧ್ಯಾಪಕ ಡಾ.ಜಿ.ಐ.ನಂದಿಕೋಲಮಠ ತಿಳಿಸಿದರು.

Vijaya Karnataka 7 Oct 2019, 5:00 am
ಬಾಗಲಕೋಟೆ: ಕನ್ನಡ ಸಾಹಿತ್ಯಕ್ಕೆ ಹಾಗೂ ಇತಿಹಾಸಕ್ಕೆ ಅಭಿನಾಭಾವ ಸಂಬಂಧವಿದೆ, ಕನ್ನಡ ಸಾಹಿತ್ಯಕ್ಕೆ ಇತಿಹಾಸ ಮಿತ್ರನಂತೆ ಸಹಾಯ ಮಾಡುತ್ತದೆ ಎಂದು ಬವಿವ ಸಂಘದ ಅಕ್ಕಮಹಾದೇವಿ ಮಹಿಳಾ ಕಾಲೇಜ್‌ನ ಕನ್ನಡ ಪ್ರಾಧ್ಯಾಪಕ ಡಾ.ಜಿ.ಐ.ನಂದಿಕೋಲಮಠ ತಿಳಿಸಿದರು.
Vijaya Karnataka Web history can be created only if history is realized
ಇತಿಹಾಸ ಅರಿತರೆ ಮಾತ್ರ ಇತಿಹಾಸ ಸೃಷ್ಠಿಸಬಹುದು


ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್‌.ಆರ್‌.ನರಸಾಪೂರ ಕಲಾ, ವಾಣಿಜ್ಯ ಹಾಗೂ ಇತಿಹಾಸ ಸ್ನಾತಕೋತ್ತರ ವಿಭಾಗದ ಸ್ವಾಗತ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಇತಿಹಾಸ ಯಾವಾಗಲೂ ಚಲನಶೀಲವಾಗಿದ್ದು ಬದುಕಿಗೆ ಮಾರ್ಗದರ್ಶಿಯಾಗಿದೆ. ಇತಿಹಾಸವನ್ನು ಅರಿತರೆ ಇತಿಹಾಸವನ್ನು ಸೃಷ್ಠಿ ಮಾಡಬಹುದು. ಅಂದರೆ ವಿದ್ಯಾರ್ಥಿಗಳು ಇತಿಹಾಸ, ನಮ್ಮ ಪರಂಪರೆ ಅರಿತರೆ ಉತ್ತಮ ಇತಿಹಾಸ ಅಥವಾ ದಾಖಲೆ ನಿರ್ಮಿಸಬಹುದೆಂದು ತಿಳಿಸಿದರು.

ಪ್ರಾಚಾರ್ಯ ಡಾ.ಜಿ.ಬಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಪಿ.ಆರ್‌.ಜೋಶಿ, ಡಾ.ಅತ್ತಾರ, ಡಾ.ವಿ.ಎಸ್‌.ಮಠ, ಪ್ರೋ.ಗುಮಾಸ್ತೆ ದೇಶಪಾಂಡೆ, ಬೊಮ್ಮಣ್ಣವರ, ಮಂಜುನಾಥ ಕೊರವಾರ, ಪುಂಡಲೀಕ ಪೂಜಾರ, ಮಂಜುಳಾ, ಪೂಜಾ, ಶಾರದಾ ಹೂಗಾರ, ವಿರೇಶ ಬಡಿಗೇರ, ಸಾವಿತ್ರಿ ಮುರನಾಳ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ