ಆ್ಯಪ್ನಗರ

ಕಮತಗಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ ! ಆ್ಯಂಕರ್‌

ಕಮತಗಿ : ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಚಿಕಿತ್ಸೆಗೆಂದು ಸ್ಥಳೀಯ ಪ್ರಾಥ''ುಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರ ಕೊರತೆ ಕಂಡು ಬಂದಿತು. ಇದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾುತು.

Vijaya Karnataka 22 Dec 2018, 5:00 am
ವಿಜಯ ಸಿಂಗದ್‌ ಕಮತಗಿ
Vijaya Karnataka Web news/bagalkot/hospital
ಕಮತಗಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ ! ಆ್ಯಂಕರ್‌


ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಚಿಕಿತ್ಸೆಗೆಂದು ಸ್ಥಳೀಯ ಪ್ರಾಥ''ುಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ವೈದ್ಯರ ಕೊರತೆ ಕಂಡು ಬಂದಿತು. ಇದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾುತು.

ವೈದ್ಯರು ಇರುತ್ತಾರೆಂದು ನಂಬಿ ಸರ್ಕಾರಿ ಆಸ್ಪತ್ರೆಗೆ ಬಂದರೆ ವೈದ್ಯರೇ ಇರುವುದಿಲ್ಲ ಎಂಬ ಕೂಗೂ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ತೊಂದರೆಯಾ ಗುತ್ತಿದೆ.

6 ಬೆಡ್‌ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಗೆ ಖಾಯಂ ವೈದ್ಯರ ಕೊರತೆ ಇದೆ. ಸುಮಾರು ಒಂದು ವರ್ಷದಿಂದ ವೈದ್ಯರ ಕೊರತೆ ಇದ್ದು, ಇದ್ದೊಬ್ಬ ಸಹಾಯಕ ವೈದ್ಯರು 6 ತಿಂಗಳಿನಿಂದ ಅಲಭ್ಯವಾಗಿದ್ದಾರೆ. ಹಾಗಾಗಿ ಸುಮಾರು 25ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಮತಗಿಗೆ ಸುಸಜ್ಜಿತವಾದ ಆಸ್ಪತ್ರೆಯೂ ಇಲ್ಲ, ವೈದ್ಯರು ಇಲ್ಲ. ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಗ್ರಾಮ ಪಂಚಾಯತಿ ಆಗಿದ್ದ ಕಮತಗಿ ಈಗ ಪಟ್ಟಣ ಪಂಚಾಯತ ಆಗಿ ಪರಿವರ್ತನೆಯಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಈ ಮೂಲಕ ಕಮತಗಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಬಡವರಿಗೆ ಅನುಕೂಲ ಮಾಡಿಕೊ ಡಬೇಕಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕಾಗಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ವೈದ್ಯರ ಕೊರತೆಯ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ ಸದಸ್ಯರಾದ ಪ್ರಕಾಶ ಗುಳೇದಗುಡ್ಡ, ಸಂಗಣ್ಣ ಗಾಣಗೇರ, ರಮೇಶ ಲಮಾಣಿ ಅವರು, ಕಮತಗಿ ದೊಡ್ಡ ಪಟ್ಟಣವಾಗಿದ್ದು ಆಸ್ಪತ್ರಗೆ ಖಾಯಂ ವೈದ್ಯರನ್ನು ನೇಮಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನಂತ ದೇಸಾಯಿ ಮತ್ತು ತಾಲೂಕಾ ವೈದ್ಯಾಧಿಕಾರಿ ಕುಸುಮಾ ಮಾಗಿ ಅವರನ್ನು ಮಕ್ಕಳು ಹಲ್ಲಿ ಬಿದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದದನ್ನು ಗಮನಿಸಲು ಬಂದಾಗ ತರಾಟೆಗೆ ತೆಗೆದುಕೊಂಡರು.

ತಕ್ಷ ಣ ಸ್ಪಂದಿಸಿದ ಡಿಎಚ್‌ಓ ಅನಂತ ದೇಸಾು ಅವರು, ಐಹೊಳೆ ಆಸ್ಪತ್ರೆಯ ವೈದ್ಯ ಡಾ.ರಾಘವೇಂದ್ರ ಸವದತ್ತಿ ಅವರನ್ನು ಕಮತಗಿ ಆಸ್ಪತ್ರೆಯಲ್ಲಿ ಇಲ್ಲಿಯೇ ಇರುತ್ತಾರೆ. ನಂತರ ಕಮತಗಿಗೆ ಖಾಯಂ ವೈದ್ಯರನ್ನು ನಿಯೋಜಿಸಲಾಗುವುದು ಎಂದರು.

ವೈದ್ಯರೇ ಇರಲಿಲ್ಲ

ಹಲ್ಲಿ ಬಿದ್ದ ಮಧ್ಯಾಹ್ನದ ಬಿಸಿಯೂಟವನ್ನು ಸೇವಿಸಿ ಅಸ್ವಸ್ಥಗೊಂಡ ಮಕ್ಕಳನ್ನು ಚಿಕಿತ್ಸೆಗೆಂದು ಕರೆ ತಂದಾಗ ಕಮತಗಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರಲಿಲ್ಲ, ಸಿಬ್ಬಂದಿಯೇ ಎಲ್ಲ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದರು.

ಆಸ್ಪತ್ರೆಯಲ್ಲಿದ್ದ ನರ್ಸಗಳು, ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಕೆಲವು ಆಶಾ ಕಾರ್ಯಕರ್ತೆಯರು ಚಿಕಿತ್ಸೆ ನೀಡುವಲ್ಲಿ ನೆರವಾದರು. ಘಟನೆಯ ಸುದ್ದಿ ತಿಳಿದು ಆಸ್ಪತ್ರಗೆ ಬಂದ ಪ್ರಭಾರ ವೈದ್ಯ ರಾಘವೇಂದ್ರ ಸವದತ್ತಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರು.

ಧಿಕೋಟ್‌-

ಕಮತಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು 20 ದಿನದೊಳಗಾಗಿ ನಿಯೋಜನೆ ಮಾಡಲಾಗುವುದು. ಅಲ್ಲಿಯ ವರೆಗೆ ಐಹೊಳೆ ಸರ್ಕಾರಿ ಆಸ್ಪತ್ರೆ ವೈದ್ಯರು ಇಲ್ಲಿಯೇ ಇದ್ದು ರೋಗಿಗಳ ಆರೋಗ್ಯವನ್ನು ನೋಡಿಕೊಳ್ಳುವರು.

-ಡಾ.ಅನಂತ ದೇಸಾಯಿ , ಡಿಎಚ್‌ಒ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ