ಆ್ಯಪ್ನಗರ

ಬಾಗಲಕೋಟೆ: ಪತಿಯ ಕೊಲೆ, ಪತ್ನಿ ಮತ್ತು ಪ್ರಿಯಕರ ಬಂಧನ

ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೆ ಕೊಲೆ ಮಾಡಿದ ಘಟನೆಯ ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka Web 20 May 2020, 8:14 am
ಮಹಾಲಿಂಗಪುರ: ಇತ್ತೀಚೆಗೆ ನಿಗೂಢವಾಗಿ ಕಾಣೆಯಾಗಿ, ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ಸ್ಥಳೀಯ ಜ್ಯುವೆಲರಿ ವರ್ತಕ ಪ್ರವೀಣ ನಾನಪ್ಪ ಬಟ್ಟಲ (33)ಎಂಬುವರ ಕೊಲೆ ಪ್ರಕರಣವನ್ನು ಮಹಾಲಿಂಗಪುರ ಪೊಲೀಸರು ಒಂದೇ ವಾರದಲ್ಲಿ ಪತ್ತೆಹಚ್ಚಿದ್ದಾರೆ.
Vijaya Karnataka Web -


ಹಣದಾಸೆ ಮತ್ತು ಅನೈತಿಕ ಸಂಬಂಧಕ್ಕಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಪತಿಯನ್ನೆ ಕೊಲೆ ಮಾಡಿದ ಘಟನೆಯ ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಮಲ್ಲಪ್ಪ ಸಿದ್ದಪ್ಪ ನಾಶಿ (24) ಈಗ ಜೈಲು ಸೇರಿದ್ದಾರೆ.

ಪ್ರವೀಣ ಕಾಣೆಯಾದಾಗ ಠಾಣೆಯಲ್ಲಿ ಮಿಸ್ಸಿಂಗ್‌ ಮತ್ತು ಕಿಡ್ನಾಪ್‌ ಕೇಸ್‌ ದಾಖಲಿಸಲಾಗಿತ್ತು. ನಂದಗಾಂವ ರಸ್ತೆಯ ತೋಟದ ಬಾವಿಯೊಳಗೆ ಶವ ಸಿಕ್ಕಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮೃತನ ಪತ್ನಿ, ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇಬ್ಬರೂ ಸೇರಿ ಪ್ಲ್ಯಾನ್‌ ಮಾಡಿ ಆತನ ಕೊಲೆ ಮಾಡಿರುವುದಾಗಿ ತನಿಖೆಯಿಂದ ಬಯಲಾಗಿದೆ.

ಮಲ್ಲಪ್ಪ ನಾಶಿ ಕಂಪ್ಯೂಟರ್ಸ್ ಅಂಗಡಿ ನಡೆಸುತ್ತಿದ್ದು, ಅದೇ ಅಂಗಡಿಯಲ್ಲಿ ಮಲಗಿದ್ದ ಪ್ರವೀಣನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಗೋಣಿ ಚೀಲದಲ್ಲಿ ತುಂಬಿ ರಾತ್ರಿ ಬೈಕ್‌ ಮೇಲೆ ಸಾಗಿಸಿ ಬಾವಿಯಲ್ಲಿ ಎಸೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಾದ 8 ದಿನದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳಿಂದ 2 ಮೋಟರ್‌ ಸೈಕಲ್‌, 3 ಮೊಬೈಲ್‌ ಮತ್ತು ಮೃತನ ಕೊರಳಲ್ಲಿದ್ದ 22.5 ಗ್ರಾಂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.

ಸಿಪಿಐ ಎಚ್‌.ಆರ್‌.ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್ ಐ ಜಿ.ಎಸ್‌.ಉಪ್ಪಾರ ಮತ್ತತ್ತಿತರರ ತಂಡ ಕರ್ತವ್ಯ ನಿರ್ವಹಿಸಿದ್ದು, ಇವರಿಗೆ ಎಸ್ ಪಿ ಅವರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ