ಆ್ಯಪ್ನಗರ

ಸಿಎಂ ಆಗಲು ನಾನು ಸಿದ್, ಶಾಸಕ ಮುರಗೇಶ ನಿರಾಣಿ

ಸಿಎಂ ಆಗಲು ನಾನು ಸಿದ್ಧ ವಿಕ ಸುದ್ದಿಲೋಕ ಬಾಗಲಕೋಟೆ 'ಸಿಎಂ ಆಗುವ ಅವಕಾಶ ಸಿಕ್ಕರೆ ಯಾರೂ ಬೇಡ ಎನ್ನುವುದಿಲ್ಲ, ನನಗೆ ಅವಕಾಶ ದೊರೆತರೆ ನಾನು ...

Vijaya Karnataka 2 Nov 2019, 5:00 am
ಬಾಗಲಕೋಟೆ : 'ಸಿಎಂ ಆಗುವ ಅವಕಾಶ ಸಿಕ್ಕರೆ ಯಾರೂ ಬೇಡ ಎನ್ನುವುದಿಲ್ಲ, ನನಗೆ ಅವಕಾಶ ದೊರೆತರೆ ನಾನು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತೇನೆ' ಎಂದು ಶಾಸಕ ಮುರಗೇಶ ನಿರಾಣಿ ಆಶಾಭಾವ ವ್ಯಕ್ತಪಡಿಸಿದರು.
Vijaya Karnataka Web i am sid mla muragesha nirani to become cm
ಸಿಎಂ ಆಗಲು ನಾನು ಸಿದ್, ಶಾಸಕ ಮುರಗೇಶ ನಿರಾಣಿ


ಜಿಲ್ಲೆಯ ಕಲ್ಲಾಪುರ ಎಸ್‌.ಕೆ.ಗ್ರಾಮದಲ್ಲಿಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ, ಡಿಸಿಎಂ ಹುದ್ದೆಗಳ ಬೆನ್ನು ಬೀಳುವ ಜಾಯಮಾನ ನನ್ನದಲ್ಲ. ಸಿಎಂ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ದೊರೆತರೂ ನಿಭಾಯಿಸುವ ಶಕ್ತಿ ನನಗಿದೆ. ನಾನೊಬ್ಬ ಹಿರಿಯ ನಾಯಕನಾಗಿದ್ದು, ಟಿಕೆಟ್‌ ನೀಡದಿದ್ದರೂ ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ. ರೈತ ಕುಟುಂಬದ ನಾನು ಉದ್ಯಮ ಕ್ಷೇತ್ರದಲ್ಲಿಸಾಧನೆ ಮಾಡಿದ್ದೇನೆ. ಏನೂ ಇಲ್ಲದೇ ಇರುವವರು ಏನೇನೋ ಆಗಿದ್ದಾರೆ. ಪಕ್ಷ ಯಾವ ಹುದ್ದೆ ನೀಡಿದರೂ ನಿಭಾಯಿಸುತ್ತೇನೆ, ನೀಡದಿದ್ದರೆ ಸುಮ್ಮನಿರುತ್ತೇನೆ' ಎಂದು ಉತ್ತರಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ 'ಸರಕಾರ ಸತ್ತು ಹೋಗಿದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇ ಕಾಂಗ್ರೆಸ್‌ ಬಿಟ್ಟು ಬಂದರೆ ಆಶ್ಚರ್ಯವಿಲ್ಲ. ಸಿದ್ದರಾಮಯ್ಯ ಹಿರಿಯರಾಗಿದ್ದಾರೆ, ಅವರ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ. ಕಾಂಗ್ರೆಸ್‌ನಲ್ಲಿಹಲವರು ಪಕ್ಷ ತೊರೆಯುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಕಾಂಗ್ರೆಸ್‌ ತೊರೆಯಲಿದ್ದಾರೆ. ಉಪ ಚುನಾವಣೆಯಲ್ಲಿಬಿಜೆಪಿ 12 ಸ್ಥಾನಗಳಲ್ಲಿಗೆಲುವು ಸಾಧಿಸಲಿದೆ' ಎಂದರು.

ಸಚಿವ ಸ್ಥಾನ ದೊರೆಯದ ಬಗ್ಗೆ ಉತ್ತರಿಸಿದ ಅವರು 'ಮೊದಲ ಬಾರಿ ಆಯ್ಕೆಯಾದಾಗ ಪಕ್ಷ ಸಚಿವನಾಗುವ ಅವಕಾಶ ನೀಡಿದೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಯಾವುದೇ ಅಸಮಾಧಾನವಿಲ್ಲ. ಟಿಪ್ಪು ವಿವಾದದ ಬಗ್ಗೆ ಗೊತ್ತಿಲ್ಲ, ಪಕ್ಷದ ನಿರ್ಧಾರ ಅಂತಿಮ' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ