ಆ್ಯಪ್ನಗರ

ಮಳೆಗಾಗಿ ಪ್ರಾರ್ಥನೆ

ಇಳಕಲ್‌: ಇಲ್ಲಿನ ಶರಣಬಸವೇಶ್ವರ ಕಮೀಟಿಯವರು ಲಕ್ಷ್ಮೀಗೌಡರ ಪೇಟೆಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಳೆಯ ಆಗಮನಕ್ಕಾಗಿ ಮಹಿಳೆಯರು ಕೊಡ ತಿರುಗಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

Vijaya Karnataka 18 Sep 2018, 5:00 am
ಇಳಕಲ್‌: ಇಲ್ಲಿನ ಶರಣಬಸವೇಶ್ವರ ಕಮೀಟಿಯವರು ಲಕ್ಷ್ಮೀಗೌಡರ ಪೇಟೆಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಳೆಯ ಆಗಮನಕ್ಕಾಗಿ ಮಹಿಳೆಯರು ಕೊಡ ತಿರುಗಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
Vijaya Karnataka Web ilkal pray for the rain
ಮಳೆಗಾಗಿ ಪ್ರಾರ್ಥನೆ


ಬಾಲ ಮಕ್ಕಳಿಂದ ಪೂಜೆ ಸಲ್ಲಿಸಿದ ನಂತರ ಮುತ್ತೈದೆಯರು ಉಡಿತುಂಬುವ ಕಾರ್ಯದ ನಂತರ ದೇವಸ್ಥಾನದ ಬಂಡೆಯ ಮೇಲೆ ಜೋಳ ಹಾಕಿ, ಹೂಗಳಿಂದ ಅಲಂಕರಿಸಿದ ನೀರು ತುಂಬಿದ ಕೊಡ ಇಟ್ಟು ಅದು ತಿರುಗುವ ಮೂಲಕ ಯಾವ ಯಾವ ಮಳೆ ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂಬುದನ್ನು ತಿಳಿಸಲಾಯಿತು. ಕೊಡ ಜೋರಾಗಿ ತಿರುಗಿದರೆ ಮಳೆಯು ಜೋರಾಗಿ ಬರುವದು, ನಿಧಾನವಾಗಿ ತಿರುಗಿದರೆ ಕಡಿಮೆ ಮಳೆ ಬರುತ್ತದೆ ಎಂಬ ವಾಡಿಕೆಯಾಗಿದೆ.

ಉತ್ತರ ಮಳೆಯ ಎರಡನೇ ಪಾದ ಸಾಧಾರಣವಾದರೆ ಕೊನೆಯ ಪಾದದಲ್ಲಿ ಜೋರಾಗಿ ಮಳೆಬೀಳುವ ಸಾಧ್ಯತೆಯಿದೆ. ಹಸ್ತ, ಚಿತ್ತ ಮತ್ತು ಸ್ವಾತಿ ಮಳೆಗಳ ಒಂದನೇ ಮತ್ತು ಎರಡನೇ ಪಾದದಲ್ಲಿ ಮಳೆಯು ಚೆನ್ನಾಗಿ ಬರುವ ನಿರೀಕ್ಷೆ ಕಂಡು ಬಂತ್ತು.

ಇದಾದ ನಂತರ ಆ ಭಾಗದ ಇಬ್ಬರು ರೈತರು ಸೀರೆ ಉಟ್ಟುಕೊಂಡು ಮನೆ ಮನೆಗಳಿಗೆ ಹೋಗಿ ಗುರಜಿ, ಗುರಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಬಾರೋ ಮಳೆಯೇ ಕಪಾಟ ಮಳೆಯೇ......ಎಂಬ ಹಾಡನ್ನು ಹಾಡುವ ಮೂಲಕ ನೀರು ಹಾಕಿಸಿಕೊಂಡು ಭಿಕ್ಷೆ ಬೇಡುವ ಮೂಲಕ ಮಹಿಳೆಯರು ಮತ್ತು ಪುರುಷರು ರೈತಾಪಿ ವರ್ಗದವರು ವರುಣ ದೇವರನ್ನು ಪ್ರಾರ್ಥಿಸಿದರು.

ಶರಣಬಸವೇಶ್ವರ ಕಮಿಟಿಯ ಅಧ್ಯಕ್ಷ ಮಹಾಂತಪ್ಪ ಕಡಿವಾಲ(ಹಾವರಗಿ) ರೈತರಾದ ಬಸವನಗೌಡ ಪಾಟೀಲ, ಬಸವಂತಪ್ಪ ಉಪನಾಳ, ಮಲ್ಲಪ್ಪ ಮುಳಗುಂದ, ಮಹಾಂತಪ್ಪ ಶಿವನಗುತ್ತಿ, ಶಿವಪುತ್ರಪ್ಪ ಮುಳಗುಂದ, ಮಲಪ್ಪ ತಂಗಡಗಿ, ನಿಂಗಪ್ಪ ಬಾರಿಗಿಡದ, ಅಮರೇಶ ವಂಕಲಕುಂಟಿ, ಶಿವಪುತ್ರಪ್ಪ ಪಾಗದ, ವಿನೋದ ಬಾರಿಗಿಡದ ಅಲ್ಲದೆ ಅಪಾರ ಸಂಖ್ಯೆಯ ಮಹಿಳೆಯರು ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ