ಆ್ಯಪ್ನಗರ

ಇಳಕಲ್‌ಲ್ಲಿ ಅಕ್ರಮ ಮರಳು ವಶ

ಇಳಕಲ್‌ : ಅಕ್ರಮ ಮರಳು ಸಾಗಣೆ ಕುರಿತು ಸಾರ್ವಜನಿಕರು ಕಂದಾಯ ಇಲಾಖೆಗೆ ನೀಡಿದ ದೂರಿನನ್ವಯ ತೀವ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಇಳಕಲ್‌ ಹಿರೇಹಳ್ಳ ಹಾಗೂ ಗೋನಾಳ ಎಸ್‌.ಬಿ. ಹಳ್ಳದ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ 52 ಕ್ಯೂಬಿಕ್‌ ಮೀ.ಮರಳನ್ನು ವಶಪಡಿಸಿಕೊಂಡಿತು.

Vijaya Karnataka 21 Jun 2019, 5:00 am
ಇಳಕಲ್‌ : ಅಕ್ರಮ ಮರಳು ಸಾಗಣೆ ಕುರಿತು ಸಾರ್ವಜನಿಕರು ಕಂದಾಯ ಇಲಾಖೆಗೆ ನೀಡಿದ ದೂರಿನನ್ವಯ ತೀವ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಇಳಕಲ್‌ ಹಿರೇಹಳ್ಳ ಹಾಗೂ ಗೋನಾಳ ಎಸ್‌.ಬಿ. ಹಳ್ಳದ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಶೇಖರಣೆ ಮಾಡಿದ್ದ 52 ಕ್ಯೂಬಿಕ್‌ ಮೀ.ಮರಳನ್ನು ವಶಪಡಿಸಿಕೊಂಡಿತು.
Vijaya Karnataka Web illegal sand dumping
ಇಳಕಲ್‌ಲ್ಲಿ ಅಕ್ರಮ ಮರಳು ವಶ


ಜತೆಗೆ ಅಕ್ರಮ ಮರಳು ಸಾಗಣೆಗೆ ಬೀಡುಬಿಟ್ಟಿದ್ದ 2 ಪಂಪ್‌ಸೆಟ್‌, ಮರಳನ್ನು ತೊಳೆಯಲು ಬಳಸುತ್ತಿದ್ದ ಹಳ್ಳದಲ್ಲಿನ ಪೈಪು ಹಾಗೂ ಇನ್ನಿತರ ಸಾಮಗ್ರಿಗಳನ್ನೂ ವಶಪಡಿಸಿಕೊಂಡರಲ್ಲದೇ ಅಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದವರನ್ನು ಬಂಧಿಸುವಷ್ಟರಲ್ಲಿ ಅವರೆಲ್ಲ ಅಲ್ಲಿಂದ ಪರಾರಿಯಾದರು ಎನ್ನಲಾಗಿದೆ.

ತಹಸೀಲ್ದಾರ್‌ ವೇದವ್ಯಾಸ ಮುತಾಲಿಕ್‌, ಎಸೈ. ಅನಿಲ ರಾಠೋಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶಿವಕುಮಾರ, ಕಂದಾಯ ನಿರೀಕ್ಷ ಕ ನವೀನ ಬಲಕುಂದಿ, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ ವಿಶ್ವಕರ್ಮ, ಶ್ರೀಮತಿ ಮೋದಿನಾಬಿ ಕುಂಟೋಜಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ