ಆ್ಯಪ್ನಗರ

ಅನುದಾನ ಬಳಸಿ ಯೋಜನೆ ಅನುಷ್ಠಾನಗೊಳಿಸಿ: ಡಿಸಿ

ಬಾಗಲಕೋಟೆ : ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆ¿åನ್ನಾಗಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದರು.

Vijaya Karnataka 16 Oct 2019, 5:00 am
ಬಾಗಲಕೋಟೆ : ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯಕ್ಕೆ ಮಾದರಿ ಜಿಲ್ಲೆ¿åನ್ನಾಗಿಸಲು ಶ್ರಮಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದರು.
Vijaya Karnataka Web implement plan using grants dc
ಅನುದಾನ ಬಳಸಿ ಯೋಜನೆ ಅನುಷ್ಠಾನಗೊಳಿಸಿ: ಡಿಸಿ


ಜಿಲ್ಲಾಧಿಕಾರಿ ಸಭಾಂಗಣದಲ್ಲಿಮಂಗಳವಾರ ಜರುಗಿದ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳ ಕಾರ್ಯಕ್ರಮಗಳ ಸೆಪ್ಟಂಬರ್‌ ತಿಂಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ ಡಿಸಿಎಂ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರೂ ಆಗಿರುವುದರಿಂದ ಎಲ್ಲಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಕಚೇರಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ತಕ್ಷಣವೇ ಸಂಪರ್ಕಿಸಿ ಕ್ರಮಕೈಗೊಂಡು ರಾಜ್ಯದಲ್ಲಿಯೇ ಮಾದರಿ ಜಿಲ್ಲೆ¿åನ್ನಾಗಿಸಲು ಶ್ರಮಿಸಬೇಕು ಎಂದರು.

ನಾನಾ ಇಲಾಖೆಯ ಎಸ್‌ಸಿಪಿ ಯೋಜನೆಯಡಿ 44.03 ಕೋಟಿ ರೂ.ಗಳ ಬಿಡುಗಡೆಯಾದ ಅನುದಾನದಲ್ಲಿಒಟ್ಟು 25.71 ಕೋಟಿ ರೂ. ಖರ್ಚು ಮಾಡಲಾಗಿದೆ. ಟಿಎಸ್‌ಪಿ ಯೋಜನೆಯಡಿ 15.34 ಕೋಟಿ ರೂ.ಗಳ ಬಿಡುಗಡೆಯಾದ ಅನುದಾನದಲ್ಲಿಒಟ್ಟು 9.09 ಕೋಟಿ ರೂ. ಖರ್ಚು ಮಾಡಲಾಗಿದೆ. ಬುಡಕಟ್ಟು ಅಭಿವೃದ್ದಿ ನಿಮಗದ ಪರಿಶಿಷ್ಟ ಪಂಗಡದವರ ಅಭಿವೃದ್ದಿಗೆ ಸಾಕಷ್ಟು ಅನುದಾನ ಲಭ್ಯವಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡ ಅಭಿವೃದ್ದಿಗೆ ವಿಶೇಷ ಪ್ರಸ್ತಾವನೆ ತಕ್ಷಣವೇ ಕಳುಹಿಸಲು ಡಿಸಿ ಸೂಚಿಸಿದರು.

ಹನಿ, ತುಂತುರು ನೀರಾವರಿಗಳ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಅಪೌಷ್ಠಿಕ ಮಕ್ಕಳ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ50 ಅಪೌಷ್ಠಿಕ ಮಕ್ಕಳಲ್ಲಿ12 ಮಕ್ಕಳು ಪೌಷ್ಠಿಕರನ್ನಾಗಿ ಮಾಡಲಾಗಿದೆ. ಆರೋಗ್ಯ ಇಲಾಖೆಯಲ್ಲಿಜಿಲ್ಲಾಮತ್ತು ತಾಲೂಕಾ ಕೇಂದ್ರಗಳಲ್ಲಿ5 ಬೆಡ್‌ಗಳನ್ನು ಅಪೌಷ್ಠಿಕ ಮಕ್ಕಳಿಗೆ ಮೀಸಲಿರಿಸಲಾಗಿದೆ. ಈಗಾಗಲೇ ಹುನಗುಂದ ಆರೋಗ್ಯ ಕೇಂದ್ರದಲ್ಲಿ12 ಹಾಗೂ ಜಿಲ್ಲಾಆಸ್ಪತ್ರೆಯಲ್ಲಿ20 ಮಕ್ಕಳು ದಾಖಲಾಗಿರುತ್ತಾರೆ ಎಂದರು ಸಭೆಯಲ್ಲಿಮಾಹಿತಿ ನೀಡಲಾಯಿತು.

ಎಲ್ಲಇಲಾಖೆಗಳು ಈ ಯೋಜನೆಗಳಡಿ ನೀಡಲಿರುವ ಸೌಲಭ್ಯಗಳ ಮಾಹಿತಿ ಪಟ್ಟಿ ನೀಡುವಂತೆ ಡಿಸಿ ಸೂಚನೆ ನೀಡಿದರು. ಅಂತರ್ಜಲ ಅಭಿವೃದ್ದಿಗೆ ಸಾಮೂಹಿಕ ಚೆಕ್‌ಡ್ಯಾಂ ನಿರ್ಮಿಸಬೇಕು. ನರೇಗಾ ಯೋಜನೆಗೆ ಕ್ರಮಕೈಗೊಳ್ಳಬೇಕು. ಎಲ್ಲಇಲಾಖೆ ಅಧಿಕಾರಿಗಳು ಪ್ರತಿ ಸಭೆ ನಡಾವಳಿಗಳನ್ನು ಎರಡು ದಿನಗಳಲ್ಲಿನೀಡಬೇಕು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲು ಸಭೆಯಲ್ಲಿಸೂಚಿಸಲಾಯಿತು. ನಾನಾ ಇಲಾಖೆಗಳ ಜಗದೀಶ ಹೆಬ್ಬಳ್ಳಿ, ರಾಜಶೇಖರ ಬಿಜಾಪೂರ, ಪ್ರಭುರಾಜ ಹಿರೇಮಠ, ಪ್ರಶಾಂತ, ವಿಜಯ ಮೆಕ್ಕಳಕಿ, ಯಲ್ಲಪ್ಪ ಪಡಸಾಲಿ, ಎ.ಕೆ.ಬಸಣ್ಣವರ, ಸವಿತಾ ಕಾಳೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ