ಬಾಗಲಕೋಟೆ: ಜಿಲ್ಲೆಯಾದ್ಯಂತ ಲಾಕ್ಡೌನ್ ಆಗಿದ್ದರೂ ವಿದ್ಯುತ್ ವಿತರಣೆಗೆ ಮಾತ್ರ ತೊಂದರೆಯಾಗಿಲ್ಲ, ಬೇಸಿಗೆಯಲ್ಲೂಜಿಲ್ಲೆಯಲ್ಲಿವಿದ್ಯುತ್ ಪೂರೈಕೆ ನಿರಂತರವಾಗಿದೆ.
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕರೆಂಟ್ ಆಗಾಗ ಮಾಯವಾಗುತ್ತದೆ, ಹಲವು ಬಾರಿ ಗಂಟೆಗಟ್ಟಲೇ ಪುನರ್ ಸಂಪರ್ಕ ಸಾಧ್ಯವಾಗುವುದಿಲ್ಲ. ಆದರೆ ಈ ಬಾರಿ ವಿದ್ಯುತ್ ಪೂರೈಕೆ ಬೇಡಿಕೆಗಿಂತ ಹೆಚ್ಚಾಗಿರುವುದರಿಂದ ವಿದ್ಯುತ್ ವ್ಯತ್ಯಯ ಕಾಣಿಸಿಕೊಂಡಿಲ್ಲ. ಮೇ ತಿಂಗಳಿನಲ್ಲೂವಿದ್ಯುತ್ ಸೌಲಭ್ಯದ ಕೊರತೆಯಾಗುವ ಸಾಧ್ಯತೆ ಕಡಿಮೆ.
ಬಳಕೆ ಅತ್ಯಧಿಕ
ಬೇಸಿಗೆ ಅವಧಿಯಲ್ಲಿಜಿಲ್ಲೆಯಲ್ಲಿಉಷ್ಣಾಂಶ 40 ಡಿಗ್ರಿ ತಲುಪುವುದರಿಂದ ಜನರು ಕೂಲರ್, ಎಸಿ ಹಾಗೂ ಫ್ರಿಡ್ಜ್ ಹೆಚ್ಚು ಬಳಸುತ್ತಾರೆ. ಪರಿಣಾಮ ವಿದ್ಯುತ್ಗೆ ಬೇಡಿಕೆಯೂ ಹೆಚ್ಚಾಗುತ್ತದೆ, ಇನ್ನು ಹೊಲಗಳಿಗೆ ನೀರು ಹಾಯಿಸಲು ಹೆಚ್ಚಿನ ವಿದ್ಯುತ್ ಅವಶ್ಯಕತೆಯಿರುತ್ತದೆ. ಸದ್ಯ ಜಿಲ್ಲೆಗೆ ನಾನಾ ಮೂಲಗಳಿಂದ ಪ್ರತಿ ದಿನ 600 ಮೆ.ವ್ಯಾ.ವಿದ್ಯುತ್ ಹರಿದು ಬರುತ್ತಿದೆ. ಜಿಲ್ಲೆಯ ಬೇಡಿಕೆಯಿರುವುದು ಪ್ರತಿ ದಿನ 347 ಮೆ.ವ್ಯಾ.ಮಾತ್ರ. ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಸರಕಾರ ಲಾಕ್ ಡೌನ್ ಕರೆ ನೀಡಿದ್ದರಿಂದ ಜನರು ಮನೆಗಳಲ್ಲಿಯೇ ಇರುತ್ತಾರೆ. ಇದರಿಂದಾಗಿ ನಿರಂತರವಾಗಿ ವಿದ್ಯುತ್ ಪೂರೈಕೆಯಾಗಲೇಬೇಕು. ಕ್ವಾರಂಟೈನ್ನಿಂದಾಗಿ ಜನರು ಮನೆಗಳಲ್ಲಿರುವ ಕಾರಣ ಟಿವಿ, ಎಸಿ ಹಾಗೂ ಕೂಲರ್ಗಳ ಬಳಕೆ ಅತ್ಯಧಿಕ. ವಿದ್ಯುತ್ ಕೇಂದ್ರಗಳಲ್ಲಿಒತ್ತಡ ಜಾಸ್ತಿಯಾದಾಗ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಬಿಟ್ಟರೆ ಕರೆಂಟ್ ಕೈಕೊಟ್ಟ ಉದಾಹರಣೆಗಳಿಲ್ಲ.
ನಾನಾ ಮೂಲ
ಜಿಲ್ಲೆಗೆ ಪೂರೈಕೆಯಾಗುವ ವಿದ್ಯುತ್ ಪೈಕಿ ಇಳಕಲ್ ಬಳಿ ಸ್ಥಾಪಿಸಲಾಗಿರುವ ಪವನ ಯಂತ್ರಗಳು, ವಿಜಯಪುರದ ರೋಣಿಹಾಳ ಬಳಿಯ ಯಂತ್ರಗಳ ಮೂಲಕ ಪ್ರತಿ ದಿನ ಅಂದಾಜು 200 ಮೆ.ವ್ಯಾ.ವಿದ್ಯುತ್ ಹರಿದುಬರುತ್ತದೆ. ಜಮಖಂಡಿ ತಾಲೂಕಿನ ಆಲಬಾಳ ಬಳಿ ಸೋಲಾರ್ ಘಟಕದಿಂದ 40 ಮೆ.ವ್ಯಾ., ಆಲಮಟ್ಟಿ ಡ್ಯಾಂ ವಿದ್ಯುತ್ ಘಟಕದಿಂದ ಅಂದಾಜು 195 ಮೆ.ವ್ಯಾ. ವಿದ್ಯುತ್ ಲಭ್ಯವಾಗುತ್ತದೆ. ಇನ್ನು ಕೂಡಗಿ ಥರ್ಮಲ್ ವಿದ್ಯುತ್ ಸ್ಥಾವರದಿಂದ ರಾಷ್ಟ್ರೀಯ ಗ್ರಿಡ್ಗೆ ವಿದ್ಯುತ್ ಪ್ರಸರಣವಾಗುತ್ತದೆ, ಈ ಪೈಕಿ ಜಿಲ್ಲೆಗೂ ಪಾಲು ದೊರೆಯುತ್ತದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ನುರಿಸುವ ಹಂಗಾಮಿನಲ್ಲಿಅಂದಾಜು 200 ಮೆ.ವ್ಯಾ.ನಷ್ಟು ಕರೆಂಟ್ ಲಭ್ಯವಾಗುತ್ತದೆ.
ವಿದ್ಯುತ್ ಪಂಪ್ಸೆಟ್ಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ7 ಗಂಟೆ, ನಗರ ಪ್ರದೇಶದಲ್ಲಿ24 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ. ನಿರಂತರ ಜ್ಯೋತಿ ಸೌಲಭ್ಯವಿರುವ ಎಲ್ಲಗ್ರಾಮಗಳಲ್ಲಿವಿದ್ಯುತ್ ನಿರಂತರವಾಗಿ ಪ್ರವಹಿಸುತ್ತದೆ. ಆದರೆ ಕೆಲವೆಡೆ ಟ್ರಿಪ್ನಿಂದಾಗಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡ ಉದಾಹರಣೆಗಳಿವೆ. ಜಿಲ್ಲೆಯ ಬಹುತೇಕ ವಿದ್ಯುತ್ ಸಮಸ್ಯೆ ಬೇಸಿಗೆಯಲ್ಲಿಕಾಡುತ್ತಿಲ್ಲ.
ಜಿಲ್ಲೆಯಲ್ಲಿಬೇಡಿಕೆಗಿಂತ ಪೂರೈಕೆ ಹೆಚ್ಚಾಗಿರುವುದರಿಂದ ವ್ಯತ್ಯಯವಾಗಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಸಾರ್ವಜನಿಕರು ತಕ್ಷಣ 1912 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏ.5 ರಂದು ರಾತ್ರಿ 9ಕ್ಕೆ ಸಾರ್ವಜನಿಕರು ವಿದ್ಯುತ್ ಬಲ್ಬ್ಗಳನ್ನು ಮಾತ್ರ ಆಫ್ ಮಾಡಬೇಕು. ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಬಾರದು.
-ಕೆ.ಜಿ.ಹಿರೇಮಠ, ಸೂಪರಿಡೆಂಟ್ ಎಂಜಿನಿಯರ್, ಹೆಸ್ಕಾಂ
ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕರೆಂಟ್ ಆಗಾಗ ಮಾಯವಾಗುತ್ತದೆ, ಹಲವು ಬಾರಿ ಗಂಟೆಗಟ್ಟಲೇ ಪುನರ್ ಸಂಪರ್ಕ ಸಾಧ್ಯವಾಗುವುದಿಲ್ಲ. ಆದರೆ ಈ ಬಾರಿ ವಿದ್ಯುತ್ ಪೂರೈಕೆ ಬೇಡಿಕೆಗಿಂತ ಹೆಚ್ಚಾಗಿರುವುದರಿಂದ ವಿದ್ಯುತ್ ವ್ಯತ್ಯಯ ಕಾಣಿಸಿಕೊಂಡಿಲ್ಲ. ಮೇ ತಿಂಗಳಿನಲ್ಲೂವಿದ್ಯುತ್ ಸೌಲಭ್ಯದ ಕೊರತೆಯಾಗುವ ಸಾಧ್ಯತೆ ಕಡಿಮೆ.
ಬಳಕೆ ಅತ್ಯಧಿಕ
ಬೇಸಿಗೆ ಅವಧಿಯಲ್ಲಿಜಿಲ್ಲೆಯಲ್ಲಿಉಷ್ಣಾಂಶ 40 ಡಿಗ್ರಿ ತಲುಪುವುದರಿಂದ ಜನರು ಕೂಲರ್, ಎಸಿ ಹಾಗೂ ಫ್ರಿಡ್ಜ್ ಹೆಚ್ಚು ಬಳಸುತ್ತಾರೆ. ಪರಿಣಾಮ ವಿದ್ಯುತ್ಗೆ ಬೇಡಿಕೆಯೂ ಹೆಚ್ಚಾಗುತ್ತದೆ, ಇನ್ನು ಹೊಲಗಳಿಗೆ ನೀರು ಹಾಯಿಸಲು ಹೆಚ್ಚಿನ ವಿದ್ಯುತ್ ಅವಶ್ಯಕತೆಯಿರುತ್ತದೆ. ಸದ್ಯ ಜಿಲ್ಲೆಗೆ ನಾನಾ ಮೂಲಗಳಿಂದ ಪ್ರತಿ ದಿನ 600 ಮೆ.ವ್ಯಾ.ವಿದ್ಯುತ್ ಹರಿದು ಬರುತ್ತಿದೆ. ಜಿಲ್ಲೆಯ ಬೇಡಿಕೆಯಿರುವುದು ಪ್ರತಿ ದಿನ 347 ಮೆ.ವ್ಯಾ.ಮಾತ್ರ. ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಸರಕಾರ ಲಾಕ್ ಡೌನ್ ಕರೆ ನೀಡಿದ್ದರಿಂದ ಜನರು ಮನೆಗಳಲ್ಲಿಯೇ ಇರುತ್ತಾರೆ. ಇದರಿಂದಾಗಿ ನಿರಂತರವಾಗಿ ವಿದ್ಯುತ್ ಪೂರೈಕೆಯಾಗಲೇಬೇಕು. ಕ್ವಾರಂಟೈನ್ನಿಂದಾಗಿ ಜನರು ಮನೆಗಳಲ್ಲಿರುವ ಕಾರಣ ಟಿವಿ, ಎಸಿ ಹಾಗೂ ಕೂಲರ್ಗಳ ಬಳಕೆ ಅತ್ಯಧಿಕ. ವಿದ್ಯುತ್ ಕೇಂದ್ರಗಳಲ್ಲಿಒತ್ತಡ ಜಾಸ್ತಿಯಾದಾಗ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಬಿಟ್ಟರೆ ಕರೆಂಟ್ ಕೈಕೊಟ್ಟ ಉದಾಹರಣೆಗಳಿಲ್ಲ.
ನಾನಾ ಮೂಲ
ಜಿಲ್ಲೆಗೆ ಪೂರೈಕೆಯಾಗುವ ವಿದ್ಯುತ್ ಪೈಕಿ ಇಳಕಲ್ ಬಳಿ ಸ್ಥಾಪಿಸಲಾಗಿರುವ ಪವನ ಯಂತ್ರಗಳು, ವಿಜಯಪುರದ ರೋಣಿಹಾಳ ಬಳಿಯ ಯಂತ್ರಗಳ ಮೂಲಕ ಪ್ರತಿ ದಿನ ಅಂದಾಜು 200 ಮೆ.ವ್ಯಾ.ವಿದ್ಯುತ್ ಹರಿದುಬರುತ್ತದೆ. ಜಮಖಂಡಿ ತಾಲೂಕಿನ ಆಲಬಾಳ ಬಳಿ ಸೋಲಾರ್ ಘಟಕದಿಂದ 40 ಮೆ.ವ್ಯಾ., ಆಲಮಟ್ಟಿ ಡ್ಯಾಂ ವಿದ್ಯುತ್ ಘಟಕದಿಂದ ಅಂದಾಜು 195 ಮೆ.ವ್ಯಾ. ವಿದ್ಯುತ್ ಲಭ್ಯವಾಗುತ್ತದೆ. ಇನ್ನು ಕೂಡಗಿ ಥರ್ಮಲ್ ವಿದ್ಯುತ್ ಸ್ಥಾವರದಿಂದ ರಾಷ್ಟ್ರೀಯ ಗ್ರಿಡ್ಗೆ ವಿದ್ಯುತ್ ಪ್ರಸರಣವಾಗುತ್ತದೆ, ಈ ಪೈಕಿ ಜಿಲ್ಲೆಗೂ ಪಾಲು ದೊರೆಯುತ್ತದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ನುರಿಸುವ ಹಂಗಾಮಿನಲ್ಲಿಅಂದಾಜು 200 ಮೆ.ವ್ಯಾ.ನಷ್ಟು ಕರೆಂಟ್ ಲಭ್ಯವಾಗುತ್ತದೆ.
ವಿದ್ಯುತ್ ಪಂಪ್ಸೆಟ್ಗಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ7 ಗಂಟೆ, ನಗರ ಪ್ರದೇಶದಲ್ಲಿ24 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ. ನಿರಂತರ ಜ್ಯೋತಿ ಸೌಲಭ್ಯವಿರುವ ಎಲ್ಲಗ್ರಾಮಗಳಲ್ಲಿವಿದ್ಯುತ್ ನಿರಂತರವಾಗಿ ಪ್ರವಹಿಸುತ್ತದೆ. ಆದರೆ ಕೆಲವೆಡೆ ಟ್ರಿಪ್ನಿಂದಾಗಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡ ಉದಾಹರಣೆಗಳಿವೆ. ಜಿಲ್ಲೆಯ ಬಹುತೇಕ ವಿದ್ಯುತ್ ಸಮಸ್ಯೆ ಬೇಸಿಗೆಯಲ್ಲಿಕಾಡುತ್ತಿಲ್ಲ.
ಜಿಲ್ಲೆಯಲ್ಲಿಬೇಡಿಕೆಗಿಂತ ಪೂರೈಕೆ ಹೆಚ್ಚಾಗಿರುವುದರಿಂದ ವ್ಯತ್ಯಯವಾಗಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಸಾರ್ವಜನಿಕರು ತಕ್ಷಣ 1912 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏ.5 ರಂದು ರಾತ್ರಿ 9ಕ್ಕೆ ಸಾರ್ವಜನಿಕರು ವಿದ್ಯುತ್ ಬಲ್ಬ್ಗಳನ್ನು ಮಾತ್ರ ಆಫ್ ಮಾಡಬೇಕು. ವಿದ್ಯುತ್ ಉಪಕರಣಗಳನ್ನು ಬಂದ್ ಮಾಡಬಾರದು.
-ಕೆ.ಜಿ.ಹಿರೇಮಠ, ಸೂಪರಿಡೆಂಟ್ ಎಂಜಿನಿಯರ್, ಹೆಸ್ಕಾಂ