ಆ್ಯಪ್ನಗರ

ಬಾಗಲಕೋಟೆ: ರಾಯರ ಆರಾಧನೆಗೆ ಚಾಲನೆ

ಮೂರು ದಿನಗಳ ಉತ್ಸವ | ಜಿಲ್ಲಾದ್ಯಂತ ಆಚರಣೆ ರಾಯರ ಆರಾಧನೆಗೆ ಚಾಲನೆ ವಿಕ ಸುದ್ದಿಲೋಕ ಬಾಗಲಕೋಟೆ ಜಿಲ್ಲಾದ್ಯಂತ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಚಾಲನೆ ದೊರೆತಿದ್ದು, ...

Vijaya Karnataka 17 Aug 2019, 5:00 am
ಬಾಗಲಕೋಟೆ: ಜಿಲ್ಲಾದ್ಯಂತ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಚಾಲನೆ ದೊರೆತಿದ್ದು, ಇನ್ನೂ ಎರಡು ದಿನಗಳ ಕಾಲ ವೈಭವದಿಂದ ನಡೆಯಲಿದೆ.
Vijaya Karnataka Web in bagalkot dist rayara aradhane start
ಬಾಗಲಕೋಟೆ: ರಾಯರ ಆರಾಧನೆಗೆ ಚಾಲನೆ


ಕಲಿಯುಗದ ಕಲ್ಪವೃಕ್ಷ ಎಂದೇ ಹೆಸರಾಗಿರುವ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಾವಿರಾರು ಜನರು ಭಾಗವಹಿಸಿ ದರ್ಶನ ಪಡೆದರು. ಬಾಗಲಕೋಟೆ ಸೇರಿದಂತೆ ಮುಧೋಳ, ಜಮಖಂಡಿ, ಕಮತಗಿ, ಗಲಗಲಿ, ಕೆರೂರಗಳಲ್ಲಿ ಆರಾಧನೆ ನೆರವೇರಿತು. ಆರಾಧನೆ ನಿಮಿತ್ತ ವಿಶೇಷ ಪೂಜೆ, ತೀರ್ಥ ಪ್ರಸಾದ ಹಮ್ಮಿಕೊಳ್ಳಲಾಗಿತ್ತು.

ಬಾಗಲಕೋಟೆಯ ಕಿಲ್ಲಾ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಪೂರ್ವಾರಾಧನೆಯಲ್ಲಿ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಗ್ರಾಮ ಪ್ರದಕ್ಷಿಣೆ ನೆರವೇರಿತು. ಕಿಲ್ಲಾದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಶ್ರೀಗಳ ಮಠ, ವಿದ್ಯಾಗಿರಿಯ ಪಂ.ರಘೂತ್ತಮಾಚಾರ್ಯ ನಾಗಸಂಪಿಗೆಯವರ ರಾಯರ ಮಠ, ನವನಗರದ ಶ್ಯಾಮನ ಮಠಗಳಲ್ಲಿ ಆರಾಧನೆ ನಿಮಿತ್ತ ವೃಂದಾವನಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಸಂಜೆ ಶ್ರೀಗಳ ಕುರಿತು ದಾಸವಾಣಿ, ಪಲ್ಲಕ್ಕಿ ಉತ್ಸವ ನೆರವೇರಿತು.

ಕಿಲ್ಲಾ ರಾಯರ ಮಠದಲ್ಲಿ ವ್ಯವಸ್ಥಾಪಕ ನಾರಾಯಣ ತಾಸಗಾಂವ, ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ಮಠದಲ್ಲಿ ಅಧ್ಯಕ್ಷ ಎ.ಕೆ.ಸರಾಫ್‌, ಎಂ.ಎಸ್‌.ಪರಾಂಡೆ, ವಿಕಾಸ ದೇಶಪಾಂಡೆ, ಹರಿ ಪಾಟೀಲ ಸೇರಿದಂತೆ ಗಣ್ಯರು ಆರಾಧನೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ