ಆ್ಯಪ್ನಗರ

ಬಾಗಲಕೋಟೆ: ಮಲಪ್ರಭಾ ನದಿಗೆ ಒಳಹರಿವು ಹೆಚ್ಚಳ, ಸೇತುವೆಗಳು ಜಲಾವೃತ, ಗ್ರಾಮದ ಜನರಿಗೆ ಆತಂಕ

ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಮಲಪ್ರಭೆ ಪ್ರವಾಹ ಗಣೇಶನ ಹಬ್ಬದ ದಿನದಂದೇ ಮತ್ತೆ ಹೆಚ್ಚಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಸೇತುವೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.

Vijaya Karnataka Web 22 Aug 2020, 7:35 pm
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ ನದಿಗೆ ನೀರಿನ ಒಳ ಹರಿವು ಹೆಚ್ಚಾಗಿದೆ. ಇದರಿಂದ ನದಿ ತೀರದ ಪ್ರದೇಶದಲ್ಲಿರುವ ಗ್ರಾಮಗಳಿಗೆ ತೀವ್ರ ಆತಂಕ ಉಂಟಾಗಿದೆ.
Vijaya Karnataka Web ಮಲಪ್ರಭಾಕ್ಕೆ ಹರಿವು
ಮಲಪ್ರಭಾಕ್ಕೆ ಹರಿವು


ನವಿಲು ತೀಥ೯ ಜಲಾಶಯದಿಂದ 11 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಇದರಿಂದ ಗೋವಿನಕೊಪ್ಪ ಚಿಕ್ಕ ಸೇತುವೆ ಮತ್ತೆ ಜಲಾವೃತಗೊಂಡಿದೆ.

ಗೋವಿನಕೊಪ್ಪದಿಂದ ಕೊಣ್ಣೂರ ಸಂಪರ್ಕಿಸುವ ರಸ್ತೆ ಬಂದ್‌ ಆಗಿದೆ. ಹೊಸ ಸೇತುವೆ ಮೂಲಕ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿ ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರೋ ಗೋವಿನಕೊಪ್ಪ ಸೇತುವೆ ಈಗ ಜಲಾವೃತಗೊಂಡಿದೆ. ಬಾದಾಮಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಆತಂಕ ಶುರುವಾಗಿದೆ. ನದಿ ತೀರದ ಅಕ್ಕಪಕ್ಕದ ಹೊಲಗದ್ದೆಗಳಿಗೆ ಮಲಪ್ರಭಾ ನದಿ ನೀರು ಹರಿದಿದ್ದು, ಬೆಳೆ ನಷ್ಟವಾಗಿದೆ.

ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಮಲಪ್ರಭೆ ಪ್ರವಾಹ ಗಣೇಶನ ಹಬ್ಬದ ದಿನದಂದೇ ಮತ್ತೆ ಹೆಚ್ಚಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಸೇತುವೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ