ಆ್ಯಪ್ನಗರ

ಕಳ್ಳಭಟ್ಟಿ ಸಾರಾಯಿ ನಾಶ

ಇಳಕಲ್‌: ಸಮೀಪದ ಬಲಕುಂದಿ ತಾಂಡಾದಲ್ಲಿಅವ್ಯಾಹತವಾಗಿ ಮರುಕಳಿಸಿದ ಕಳ್ಳಭಟ್ಟಿ ಸಾರಾಯಿ ಉತ್ಪಾದಿಸುವ ಅಡ್ಡೆ ಮೇಲೆ ಅಬಕಾರಿ ಪೊಲೀಸ್‌ರು ಗುರುವಾರ ಬೆಳಗ್ಗೆ ಮಿಂಚಿನ ದಾಳಿ ನಡೆಸಿ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.

Vijaya Karnataka 1 May 2020, 5:00 am
ಇಳಕಲ್‌: ಸಮೀಪದ ಬಲಕುಂದಿ ತಾಂಡಾದಲ್ಲಿಅವ್ಯಾಹತವಾಗಿ ಮರುಕಳಿಸಿದ ಕಳ್ಳಭಟ್ಟಿ ಸಾರಾಯಿ ಉತ್ಪಾದಿಸುವ ಅಡ್ಡೆ ಮೇಲೆ ಅಬಕಾರಿ ಪೊಲೀಸ್‌ರು ಗುರುವಾರ ಬೆಳಗ್ಗೆ ಮಿಂಚಿನ ದಾಳಿ ನಡೆಸಿ ಕಳ್ಳಭಟ್ಟಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web 30-ILK-2_41


ಕೊಪ್ಪಳ ಹಾಗೂ ಬಾಗಲಕೋಟ ಎರಡೂ ಜಿಲ್ಲೆಯ ಅಬಕಾರಿ ಡಿ.ಸಿ. ಕೆ.ಅರುಣಕುಮಾರ, ಶಾಂತೇಶ ಕಮತರ, ಬಾಗಲಕೋಟ ಜಿಲ್ಲಾಅಬಕಾರಿ ಡಿವೈಎಸ್ಪಿ ಪ್ರಭುಗೌಡ, ಸಿಪಿಐ ವಜ್ರಮಟ್ಟಿ, ಮಂಜುನಾಥ ಎಸೈ. ಸಿಂಗರೆಡ್ಡಿ, ಹಾಗೂ ಸಿಬ್ಬಂದಿ ಜತೆಗೆ ಇಲ್ಲಿನ ಗ್ರಾಮೀಣ ಠಾಣೆಯ ಎಸೈ. ಬಿವ್ಹಿ. ನ್ಯಾಮಗೌಡ ಹಾಗೂ ಸಿಬ್ಬಂದಿಯೊಂದಿಗೆ 4-6 ವಾಹನಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಕೊಳಚೆ ಬೆಲ್ಲ, ಸುಮಾರು 70 ಸಾವಿರ ರೂ.ಮೊತ್ತದ 1000 ಲೀಟರ್‌ ಕಚ್ಚಾ ಕಳ್ಳಭಟ್ಟಿ ನಾಶಪಡಿಸಿದರಲ್ಲದೇ ತಯಾರಿ ಮಾಡಿಟ್ಟ 20ಲೀಟರ್‌ ಕಳ್ಳಭಟ್ಟಿ ಸಹ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಗ್ರಾಮೀಣ ಠಾಣೆ ಎಸೈ. ಬಿ.ವಿ. ನ್ಯಾಮಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆತ್ತದ ರುಚಿ: ಗ್ರಾಮದಲ್ಲಿವೃದ್ಧೆ ಮೃತಪಟ್ಟಿದ್ದರಿಂದ ಅಲ್ಲಿನೆರೆದ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ್ದಕ್ಕೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಎಚ್ಚರಿಸಿದಾಗ್ಯೂ ತಿಳಿದುಕೊಳ್ಳದ ಜನರನ್ನು ಚದುರಿಸಲು ಅನಿವಾರ್ಯವಾಗಿ ಬೆತ್ತದ ರುಚಿ ತೋರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ