ಆ್ಯಪ್ನಗರ

ಶ್ರೀಗಳಿಂದ ಕಾಲೇಜು ಕಟ್ಟಡ ಉದ್ಘಾಟನೆ

ಲೋಕಾಪುರ : ಪಟ್ಟಣದ ಮುಧೋಳ ರಸ್ತೆಗೆ ಹೊಂದಿಕೊಂಡ ಬವಿವಿ ಸಂಘದ ನೂತನ ಕಾಲೇಜು ಕಟ್ಟಡದ ಉದ್ಘಾಟನೆ ಗಣ್ಯರ ಸಮುಖದಲ್ಲಿನೆರವೇರಿಸಲಾಯಿ

Vijaya Karnataka 12 Feb 2020, 5:00 am
ಲೋಕಾಪುರ : ಪಟ್ಟಣದ ಮುಧೋಳ ರಸ್ತೆಗೆ ಹೊಂದಿಕೊಂಡ ಬವಿವಿ ಸಂಘದ ನೂತನ ಕಾಲೇಜು ಕಟ್ಟಡದ ಉದ್ಘಾಟನೆ ಗಣ್ಯರ ಸಮುಖದಲ್ಲಿನೆರವೇರಿಸಲಾಯಿತು.
Vijaya Karnataka Web inauguration of the college building by shree
ಶ್ರೀಗಳಿಂದ ಕಾಲೇಜು ಕಟ್ಟಡ ಉದ್ಘಾಟನೆ


ವಿಜಯಪುರದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ, ಎಂ.ಎಂ.ವಿರಕ್ತಮಠ ಉಪಸ್ಥಿತರಿದ್ದರು.

ಮುಧೋಳದಲ್ಲಿಉದ್ಘಾಟನೆ ಸಮಾರಂಭ ನಿಮಿತ್ತ ಯಾವುದೇ ಕಾರ್ಯಕ್ರಮ ಜರುಗಲಿಲ್ಲ. ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಉಪಮುಖ್ಯಮಂತ್ರಿಗಳಿಗೆ ಮಾತನಾಡುತ್ತ ನಿಂತಾಗ ಮುಂದಿನ ಶೈಕ್ಷಣಿಕ ವರ್ಷದಿಂದ ಲೋಕಾಪುರದಲ್ಲಿಸಿಬಿಎಸ್‌ಇ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು. ಸ್ಥಳದ ಅಭಾವವಿದೆ ಸ್ಥಳೀಯರು ಸಹಕಾರ ನೀಡಿದರೆ ಅದನ್ನು ಪ್ರಾರಂಭಿಸಲಾಗುವುದು ಎಂದರು.

ಈ ವೇಳೆ ಸ್ಥಳೀಯರಾದ ಜಿಪಂ ಭೀಮನಗೌಡ ಪಾಟೀಲ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಎಂ.ಎಂ.ವಿರಕ್ತಮಠ, ಬಿ.ಎಲ್‌.ಬಬಲಾದಿ, ಎಪಿಎಂಸಿ ನಿರ್ದೇಶಕ ಬಿ.ಸಿ.ಮಾಳಿ, ವೆಂಕಣ್ಣ ಗಿಡ್ಡಪ್ಪನವರ, ಜಾಕೀರ ಅತ್ತಾರ, ಆನಂದ ಹವಳಖೋಡ, ವೆಂಕಣ್ಣ ಕಮಕೇರಿ, ವಿನೋದ ಘೋರ್ಪಡೆ, ಹೊಳಬಸು ದಂಡಿನ, ಕೃಷ್ಣಾ ಸಾಳುಂಕಿ, ಯಮನಪ್ಪ ಬುದ್ನಿ ಪ್ರಾಚಾರ್ಯ ಪಿ.ಬಿ.ಬಡಿಗೇರ ಹಾಗೂ ಬಿವಿವಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ