ಆ್ಯಪ್ನಗರ

ಭಾರತ ಸರ್ವಶ್ರೇಷ್ಠವಾಗು ಕಾಲ ಸನ್ನಿಹಿತ

ಜಮಖಂಡಿ: ಸ್ವಾತಂತ್ರ್ಯಾನಂತರ ಭಾರತದ ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣ ಮಾಡಲು ನಮಗೆ 7 ದಶಕ ಬೇಕಾಯಿತು. ಅದೂ ಒಬ್ಬ ಸ್ವಯಂ ಸೇವಕ ಪ್ರಧಾನಿಯಾದ ಮೇಲೆ ಈ ಕಾರ್ಯ ಸಾಧಕವಾಯಿತು ಎಂದು ಧರ್ಮ ಜಾಗರಣ ಸಮನ್ವಯ ಪ್ರಾಂತ ಸಂಯೋಜಕ ದಿಲೀಪ ವೆರ್ಣೇಕರ ಹೇಳಿದರು.

Vijaya Karnataka 18 Oct 2019, 5:00 am
ಜಮಖಂಡಿ: ಸ್ವಾತಂತ್ರ್ಯಾನಂತರ ಭಾರತದ ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣ ಮಾಡಲು ನಮಗೆ 7 ದಶಕ ಬೇಕಾಯಿತು. ಅದೂ ಒಬ್ಬ ಸ್ವಯಂ ಸೇವಕ ಪ್ರಧಾನಿಯಾದ ಮೇಲೆ ಈ ಕಾರ್ಯ ಸಾಧಕವಾಯಿತು ಎಂದು ಧರ್ಮ ಜಾಗರಣ ಸಮನ್ವಯ ಪ್ರಾಂತ ಸಂಯೋಜಕ ದಿಲೀಪ ವೆರ್ಣೇಕರ ಹೇಳಿದರು.
Vijaya Karnataka Web india is about to become pervasive
ಭಾರತ ಸರ್ವಶ್ರೇಷ್ಠವಾಗು ಕಾಲ ಸನ್ನಿಹಿತ


ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂ ಮೈದಾನದಲ್ಲಿಗುರುವಾರ ಏರ್ಪಡಿಸಿದ್ದ ಪ್ರಾಥಮಿಕ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು ಸಂಘದ ಶಿಬಿರದಲ್ಲಿಸ್ವಯಂ ಸೇವಕರಿಗೆ ದೇಶ ಭಕ್ತಿಯ ಜೊತೆಗೆ ಶಾರೀರಿಕ ಕ್ಷಮತೆ ನೀಡುತ್ತದೆ. ಅದಕ್ಕಾಗಿ 1925ರಲ್ಲಿಡಾ ಕೇಶವ ಹೆಡಗೇವಾರರು ಹೆಸರಿಡದ ಸಂಘದ ಸ್ಥಾಪನೆ ಮಾಡಿದರು. ಅದು ಇಂದು ಬೆಳೆದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರಿನಲ್ಲಿವಿಶ್ವವ್ಯಾಪಿಯಾಗಿದೆ ಬೆಳೆದಿದೆ ಎಂದರು.

ಓರ್ವ ಸ್ವಯಂ ಸೇವಕ ಪ್ರಧಾನಿಯಾದರೆ ಏನಗುತ್ತದೆಂದು ತಿಳಿಯಲು ಈಗ ಕಾಲ ಪಕ್ವವಾಗಿದೆ, ಇಲ್ಲದ ತಗಾದೆ ತೆಗೆಯುತ್ತದ್ದ ಪಾಕ್‌ ಮೂಲೆಗುಂಪಾಗಿದೆ. ಅದರ ಜೊತೆಗೆ ಚೀನಾ ಸಹ ತೆಪ್ಪಾಗಿದೆ. ಭಾರತ ಸರ್ವ ಶ್ರೇಷ್ಠ ದೇಶವಾಗಲು ಕಾಲ ಸನ್ನಿಹಿತವಾಗಿದೆ ಎಂದರು

ಭಾರತ ದೇಶದ ಹಿಂದೂಗಳು ಎಂದೂ ಹೇಡಿಗಳಲ್ಲ, ನಮ್ಮ ದೇಶದ ಮಹಾತ್ಮರು ಹಿಂದೂಗಳನ್ನು ಹೇಡಿಗಳೆಂದು ಸಂಬೋಧಿಸಿದ್ದು ಖಂಡನೀಯ ಛತ್ರಪತಿ ಶಿವಾಜಿ ಮಹಾರಾಜರಲ್ಲಿಅಲ್ಪಪ್ರಮಾಣದ ಸೈನ್ಯವಿದ್ದರೂ ಘಟಾನುಘಟಿ ರಾಜರನ್ನು ಸೋಲಿಸಿ ಹಿಂದುತ್ವ ಉಳಿಸಿದ ಧೀಮಂತ ನಾಯಕನಾಗಿದ್ದ ಎಂದರು.

ನಾವೆಲ್ಲಡಾ ಅಂಬೇಡ್ಕರ್‌ ಅವರನ್ನು ಕೇವಲ ಸಂವಿಧಾನಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಆದರೆ ಅವರ ಕೆಲಸವನ್ನು ನಾವು ನೋಡುತ್ತಿಲ್ಲ. 1939ರಲ್ಲಿಪುಣೆಯ ಸಂಘದ ಶಿಬಿರಕ್ಕೆ ಆಗಮಿಸಿ ಸಂಘದ ಶಿಸ್ತು ಸಭ್ಯತೆ ಜಾತಿ ಕ್ಲೇಶವಿಲ್ಲದ್ದನ್ನು ನೋಡಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿದ್ದು ಸಹ ಇದೆ. ಆದರೆ ಇಂದು ಕೆಲ ಪಟ್ಟಭದ್ರರು ಸಂಘವನ್ನು ಹೀಯಾಳಿಸುತ್ತಾರೆ. ಅವರು ಎಷ್ಟು ಹೀಯಾಳಿಸಿದರೂ ಸಂಘ ತನ್ನ ಬೆಳವಣಿಗೆ ನಿಲ್ಲಿಸುವುದಿಲ್ಲಸಂಘವು ಈಗ ವಿಶ್ವವ್ಯಾಪಿಯಾಗಿ ಹೆಮ್ಮರವಾಗಿ ಬೆಳೆದಿದೆ ಎಂದರು.

ವರಣ ಸಿಂಚನ:

ಸಮಾರೋಪ ಸಮಾರಂಭ ಪ್ರಾರಂಭವಾಗುತ್ತಿದ್ದಂತೆ ವರುಣ ದೇವ ತನ್ನ ಕೃಪೆಯನ್ನು ಸ್ವಯಂ ಸೇವರ ಮೇಲೆ ಸಿಂಚನಗೈದರೂ ಸಹ ಅಲ್ಲಿಯ ಸ್ವಯಂ ಸೇವಕರು ಕದಲದೇ ಕಾರ‍್ಯಕ್ರಮದಲ್ಲಿಭಾಗವಹಿಸಿದ್ದು ವೀಷೇಶವಾಗಿತ್ತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉದ್ಯಮಿ ಜಗದೀಶ ಗುಡಗುಂಟಿ ಗಣವೇಷ ಧರಿಸಿ ಪಥಸಂಚಲನದಲ್ಲಿಭಾಗವಹಿಸಿದ್ದರು. ಜಿಲ್ಲಾಸಂಘಚಾಲಕ ಬಿ.ಎಸ್‌.ಕುಲಕರ್ಣಿ, ಉಮೇಶ ಮುರಗೋಡ ಮತ್ತಿತರರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ