ಆ್ಯಪ್ನಗರ

ವೇಗ ನಿಯಂತ್ರಣಕ್ಕೆ ಬಂತು ಇಂಟರ್‌ಸೆಪ್ಟರ್‌

ಬಾಗಲಕೋಟ : ಸಿಮೆಂಟ್‌ ಕ್ವಾರಿ ರಸ್ತೆಯಲ್ಲಿ ವೇಗದ ವಾಹನಗಳಿಗೆ ಕಡಿವಾಣ ಹೇರಲು ಇಂಟರ್‌ಸೆಪ್ಟರ್‌ ವಾಹನ ಬಂದು ನಿಂತಿದೆ.

Vijaya Karnataka 21 Jun 2018, 5:00 am
ಬಾಗಲಕೋಟ : ಸಿಮೆಂಟ್‌ ಕ್ವಾರಿ ರಸ್ತೆಯಲ್ಲಿ ವೇಗದ ವಾಹನಗಳಿಗೆ ಕಡಿವಾಣ ಹೇರಲು ಇಂಟರ್‌ಸೆಪ್ಟರ್‌ ವಾಹನ ಬಂದು ನಿಂತಿದೆ.
Vijaya Karnataka Web interceptor came to speed control
ವೇಗ ನಿಯಂತ್ರಣಕ್ಕೆ ಬಂತು ಇಂಟರ್‌ಸೆಪ್ಟರ್‌


ಬೆಳಗಾವಿ-ರಾಯಚೂರು ಹೆದ್ದಾರಿಯ ಸಿಮೆಂಟ್‌ ಕ್ವಾರಿ ರಸ್ತೆಯಲ್ಲಿ ಸುರಕ್ಷತೆ ಕೊರತೆ ಬಗ್ಗೆ ವಿಜಯ ಕರ್ನಾಟಕ ಮಂಗಳವಾರ 'ಆಘಾತ ಇಲ್ಲ ಜಾಗೃತಿ' ಎಂಬ ರಿಯಾಲಿಟಿ ಚೆಕ್‌ ವರದಿ ಪ್ರಕಟಿಸಿತ್ತು. ಜೂ.4 ರಂದು ಕ್ವಾರಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ನಗರದಲ್ಲಿ ಭಾರಿ ಆತಂಕ ವ್ಯಕ್ತವಾಗಿತ್ತು. ಅಪಘಾತ ನಡೆದ 15 ದಿನಗಳ ನಂತರವೂ ಕ್ವಾರಿ ರಸ್ತೆಯಲ್ಲಿ ಸುರಕ್ಷತೆ ಕಂಡುಬಂದಿರಲಿಲ್ಲ. ಶರವೇಗ ವಾಹನ ಚಾಲಕರಿಗೆ ಕಡಿವಾಣ ಹೇರಲು ಇಂಟರ್‌ಸೆಪ್ಟರ್‌ ವಾಹನ, ಭಾರಿ ವಾಹನಗಳ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವಿಕ ಬೆಳಕು ಚೆಲ್ಲಿತ್ತು.

ವೇಗದ ವಾಹನಗಳಿಗೆ ಕಡಿವಾಣ ಹೇರಲು ಇಂಟರ್‌ಸೆಪ್ಟರ್‌ ಸ್ಥಳದಲ್ಲಿರಬೇಕು ಎಂಬ ಸಾರ್ವಜನಿಕರ ಆಶಯಕ್ಕೆ ಈಗ ಸ್ಪಂದನೆ ದೊರೆತಿದೆ. ವಿಕ ವರದಿ ನೋಡಿದ ಎಸ್‌ಪಿ ರಿಷ್ಯಂತ ಇಂಟರ್‌ಸೆಪ್ಟರ್‌ ವಾಹನದ ಮೂಲಕ ದಂಡ ವಿಧಿಸಲು ಸೂಚಿಸಿದ್ದಾರೆ. ಕ್ವಾರಿ ರಸ್ತೆಯಲ್ಲಿ ಬುಧವಾರ ಬೆಳಗ್ಗೆಯಿಂದ ಕಾರ್ಯಾಚರಣೆಗಿಳಿದ ಇಂಟರ್‌ಸೆಪ್ಟರ್‌ ವಾಹನದ ಮೂಲಕ ಪೊಲೀಸರು ದಂಡ ವಿಧಿಸಿದರು. ಅತಿ ವೇಗದಿಂದ ಹೊರಟಿದ್ದ ವಾಹನಗಳ ಚಾಲಕರಿಗೆ 300 ರೂ. ವರೆಗೆ ದಂಡ ವಿಧಿಸಲಾಗಿದೆ. ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ 35 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕ್ವಾರಿ ರಸ್ತೆ ಮೂಲಕ ಭಾರಿ ವಾಹನಗಳ ಸಂಚಾರಕ್ಕೆ ಬ್ರೆಕ್‌ ಹಾಕಲು ಎಸ್‌ಪಿ ಚಿಂತನೆ ನಡೆಸಿದ್ದಾರೆ.
ಕಾರ್ಯಾಚರಣೆಗಿಳಿದ ಇಂಟರ್‌ಸೆಪ್ಟರ್‌ ವಾಹನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ