ವಿಕ ವಿಶೇಷ ಬಾಗಲಕೋಟ
'ಗದ್ದಿಗೌಡರ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಉದ್ಧಟತನ, ಅವರ ಸಾಧನೆ ಜನರ ಕಣ್ಣ ಮುಂದಿದೆ' ಎಂದು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಹೇಳಿದರು.
ಚುನಾವಣೆ ಪ್ರಚಾರದ ಬಗ್ಗೆ ವಿಜಯ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅವರು ಗದ್ದಿಗೌಡರ ಸಾಧನೆಯನ್ನು ಬಣ್ಣಿಸಿದರು.
'ಕಾಂಗ್ರೆಸ್ ಅಭ್ಯರ್ಥಿ ವೀಣಾ ಅವರು ಗದ್ದಿಗೌಡರ ಸಾಧನೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಸಂಸದರಾಗಿ ಗದ್ದಿಗೌಡರ ಅವರು ಮಾಡಿದ ಸಾಧನೆ ಕಣ್ಣೆದುರಿಗಿದೆ. ಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ, ಕೆ ಶಿಪ್ನಡಿ ರಸ್ತೆ, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ, ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಿಸಿದ್ದು ಕಾಂಗ್ರೆಸ್ನವರಿಗೆ ಕಾಣುತ್ತಿಲ್ಲ. 15 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಗದ್ದಿಗೌಡರ ಸಾಕಷ್ಟು ಕೊಡುಗೆ ನೀಡಿದ್ದಾರೆ'.
ಪ್ರಚಾರ ಪಡೆಯುವುದಿಲ್ಲ
'ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬರ ಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿದೆ. ಸರಕಾರದ ಪ್ರತಿನಿಧಿಗಳು ಬರೀ ಮಜಾ ಉಡಾಯಿಸಿದ್ದಾರೆ. ಆಲಮಟ್ಟಿ ಜಲಾಶಯದ ಯೋಜನೆಯ ಸಂತ್ರಸ್ತರ ಪುನರ್ವಸತಿ, ಸವಳು ಜವಳು ಜಮೀನಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ. ಜನರಲ್ಲಿ ಸಮ್ಮಿಶ್ರ ಸರಕಾರದ ಬಗ್ಗೆ ತೀವ್ರ ಆಕ್ರೋಶವಿದೆ. ಗದ್ದಿಗೌಡರ ಅವರು ತಾವು ಮಾಡಿದ್ದನ್ನು ಹೇಳಿಕೊಂಡು ತಿರುಗುವ ಜಾಯಮಾನದವರಲ್ಲ. ಬೇರೆಯವರಂತೆ ಅವರು ಪ್ರಚಾರ ಗಿಟ್ಟಿಸಲು ಪ್ರಯತ್ನ ನಡೆಸುವುದಿಲ್ಲ. ಸೈನಿಕನಿಗೆ ಗೌರವ ನೀಡಿದ, ದೇಶದ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟ ಮೋದಿಯವರ ಬಗ್ಗೆ ಜನರಿಗೆ ನಂಬಿಕೆಯಿದೆ. ಕ್ಷೇತ್ರದಲ್ಲಿ ಜನರು ಜಾತಿ ನೋಡಿ ಮತ ನೀಡುವುದಿಲ್ಲ, ದೇಶ ನೋಡಿ ವೋಟ್ ಮಾಡುತ್ತಾರೆ'.
ಅಧ್ಯಕ್ಷೆಯಿಂದ ಅಭಿವೃದ್ಧಿಯಿಲ್ಲ
'ಎರಡೂವರೆ ವರ್ಷ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ವೀಣಾ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿಲ್ಲ. ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿವ ನೀರಿಗಾಗಿ ಕೋಟ್ಯಂತರ ರೂ. ಅನುದಾನ ನೀಡಲಾಗುತ್ತದೆ. ಆದರೆ ಜಿಲ್ಲೆಯ ಇತರ ಕ್ಷೇತ್ರಗಳಿಗೆ ಅನುದಾನವಿಲ್ಲ. ಉಳಿದ ಕ್ಷೇತ್ರಗಳವರು ಏನು ಪಾಪ ಮಾಡಿದ್ದಾರೆ ?. ಅಭಿವೃದ್ಧಿ ಕುರಿತು ಕಾಂಗ್ರೆಸ್ ನಾಯಕರಿಗೆ ಮುಂದಾಲೋಚನೆಯಿಲ್ಲ'.
'ಬಿಜೆಪಿಯ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಿ ಮತ ಕೇಳಲಿದ್ದಾರೆ. ಮೋದಿಯಂತಹ ನಾಯಕರನ್ನು ಬಿಟ್ಟು ಚಿಕ್ಕ ಹುಡುಗನಂತೆ ವರ್ತಿಸುವ ರಾಹುಲ್ ಗಾಂಧಿಯವರನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿರುವ ಭಿನ್ನಾಭಿಪ್ರಾಯವೇ ನಮಗೆ ಅನುಕೂಲಕರವಾಗಲಿದೆ. ಚುನಾವಣೆಯ ಜಿಲ್ಲಾ ಉಸ್ತುವಾರಿ ಈಶ್ವರಪ್ಪ ಅವರು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಪ್ರಚಾರಕ್ಕಾಗಿ ಹುರಿದುಂಬಿಸಿದ್ದಾರೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು, ಮಾಜಿ ಶಾಸಕರು ಪಾದಯಾತ್ರೆ ಮೂಲಕ ಮತ ಕೇಳುತ್ತಿದ್ದಾರೆ. ಗದ್ದಿಗೌಡರ ಅವರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಲಿದ್ದಾರೆ'.
'ಗದ್ದಿಗೌಡರ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಉದ್ಧಟತನ, ಅವರ ಸಾಧನೆ ಜನರ ಕಣ್ಣ ಮುಂದಿದೆ' ಎಂದು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಹೇಳಿದರು.
ಚುನಾವಣೆ ಪ್ರಚಾರದ ಬಗ್ಗೆ ವಿಜಯ ಕರ್ನಾಟಕಕ್ಕೆ ವಿಶೇಷ ಸಂದರ್ಶನ ನೀಡಿದ ಅವರು ಗದ್ದಿಗೌಡರ ಸಾಧನೆಯನ್ನು ಬಣ್ಣಿಸಿದರು.
'ಕಾಂಗ್ರೆಸ್ ಅಭ್ಯರ್ಥಿ ವೀಣಾ ಅವರು ಗದ್ದಿಗೌಡರ ಸಾಧನೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ, ಸಂಸದರಾಗಿ ಗದ್ದಿಗೌಡರ ಅವರು ಮಾಡಿದ ಸಾಧನೆ ಕಣ್ಣೆದುರಿಗಿದೆ. ಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ, ಕೆ ಶಿಪ್ನಡಿ ರಸ್ತೆ, ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ, ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ಮಿಸಿದ್ದು ಕಾಂಗ್ರೆಸ್ನವರಿಗೆ ಕಾಣುತ್ತಿಲ್ಲ. 15 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಗದ್ದಿಗೌಡರ ಸಾಕಷ್ಟು ಕೊಡುಗೆ ನೀಡಿದ್ದಾರೆ'.
ಪ್ರಚಾರ ಪಡೆಯುವುದಿಲ್ಲ
'ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬರ ಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿದೆ. ಸರಕಾರದ ಪ್ರತಿನಿಧಿಗಳು ಬರೀ ಮಜಾ ಉಡಾಯಿಸಿದ್ದಾರೆ. ಆಲಮಟ್ಟಿ ಜಲಾಶಯದ ಯೋಜನೆಯ ಸಂತ್ರಸ್ತರ ಪುನರ್ವಸತಿ, ಸವಳು ಜವಳು ಜಮೀನಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿಲ್ಲ. ಜನರಲ್ಲಿ ಸಮ್ಮಿಶ್ರ ಸರಕಾರದ ಬಗ್ಗೆ ತೀವ್ರ ಆಕ್ರೋಶವಿದೆ. ಗದ್ದಿಗೌಡರ ಅವರು ತಾವು ಮಾಡಿದ್ದನ್ನು ಹೇಳಿಕೊಂಡು ತಿರುಗುವ ಜಾಯಮಾನದವರಲ್ಲ. ಬೇರೆಯವರಂತೆ ಅವರು ಪ್ರಚಾರ ಗಿಟ್ಟಿಸಲು ಪ್ರಯತ್ನ ನಡೆಸುವುದಿಲ್ಲ. ಸೈನಿಕನಿಗೆ ಗೌರವ ನೀಡಿದ, ದೇಶದ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟ ಮೋದಿಯವರ ಬಗ್ಗೆ ಜನರಿಗೆ ನಂಬಿಕೆಯಿದೆ. ಕ್ಷೇತ್ರದಲ್ಲಿ ಜನರು ಜಾತಿ ನೋಡಿ ಮತ ನೀಡುವುದಿಲ್ಲ, ದೇಶ ನೋಡಿ ವೋಟ್ ಮಾಡುತ್ತಾರೆ'.
ಅಧ್ಯಕ್ಷೆಯಿಂದ ಅಭಿವೃದ್ಧಿಯಿಲ್ಲ
'ಎರಡೂವರೆ ವರ್ಷ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ವೀಣಾ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿಲ್ಲ. ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿವ ನೀರಿಗಾಗಿ ಕೋಟ್ಯಂತರ ರೂ. ಅನುದಾನ ನೀಡಲಾಗುತ್ತದೆ. ಆದರೆ ಜಿಲ್ಲೆಯ ಇತರ ಕ್ಷೇತ್ರಗಳಿಗೆ ಅನುದಾನವಿಲ್ಲ. ಉಳಿದ ಕ್ಷೇತ್ರಗಳವರು ಏನು ಪಾಪ ಮಾಡಿದ್ದಾರೆ ?. ಅಭಿವೃದ್ಧಿ ಕುರಿತು ಕಾಂಗ್ರೆಸ್ ನಾಯಕರಿಗೆ ಮುಂದಾಲೋಚನೆಯಿಲ್ಲ'.
'ಬಿಜೆಪಿಯ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಿ ಮತ ಕೇಳಲಿದ್ದಾರೆ. ಮೋದಿಯಂತಹ ನಾಯಕರನ್ನು ಬಿಟ್ಟು ಚಿಕ್ಕ ಹುಡುಗನಂತೆ ವರ್ತಿಸುವ ರಾಹುಲ್ ಗಾಂಧಿಯವರನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿರುವ ಭಿನ್ನಾಭಿಪ್ರಾಯವೇ ನಮಗೆ ಅನುಕೂಲಕರವಾಗಲಿದೆ. ಚುನಾವಣೆಯ ಜಿಲ್ಲಾ ಉಸ್ತುವಾರಿ ಈಶ್ವರಪ್ಪ ಅವರು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಪ್ರಚಾರಕ್ಕಾಗಿ ಹುರಿದುಂಬಿಸಿದ್ದಾರೆ. ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರು, ಮಾಜಿ ಶಾಸಕರು ಪಾದಯಾತ್ರೆ ಮೂಲಕ ಮತ ಕೇಳುತ್ತಿದ್ದಾರೆ. ಗದ್ದಿಗೌಡರ ಅವರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಲಿದ್ದಾರೆ'.