ಆ್ಯಪ್ನಗರ

ನೀಗಿತು ಒಂದೂವರೆ ದಶಕ ನೀರಡಿಕೆ

ಇಳಕಲ್‌: ನಗರದ ಹೊರವಲಯದ ನೀಲಕಂಠೇಶ್ವರ ಬಡಾವಣೆಗೆ ದಶಕದ ಹೋರಾಟದ ಬಳಿಕವಾದರೂ ಅಂತೂ ಬಂತು 24/7 ಕುಡಿವ ನೀರು ಬಡಾವಣೆ ಜನತೆಯ ಕಣ್ಣಂಚಿನಲ್ಲಿಹರಿಯಿತು ಆನಂದ ಭಾಷ್ಪ.

Vijaya Karnataka 24 Sep 2019, 5:00 am
ಇಳಕಲ್‌: ನಗರದ ಹೊರವಲಯದ ನೀಲಕಂಠೇಶ್ವರ ಬಡಾವಣೆಗೆ ದಶಕದ ಹೋರಾಟದ ಬಳಿಕವಾದರೂ ಅಂತೂ ಬಂತು 24/7 ಕುಡಿವ ನೀರು ಬಡಾವಣೆ ಜನತೆಯ ಕಣ್ಣಂಚಿನಲ್ಲಿಹರಿಯಿತು ಆನಂದ ಭಾಷ್ಪ.
Vijaya Karnataka Web it also had 247 drinking water
ನೀಗಿತು ಒಂದೂವರೆ ದಶಕ ನೀರಡಿಕೆ


ಬಡಾವಣೆಯಲ್ಲಿನಿವೇಶನ ಹುಟ್ಟಿ ಒಂದೂವರೆ ದಶಕ ಕಳೆದರೂ, ನಿವೇಶನ ಖರೀದಿಸಿದ ಜನತೆ ಹೋರಾಟ ದಶಕ ಮೀರುವ ಮುನ್ನವೇ ಮನೆ ಬಾಗಿಲಿಗೆ ಬಂದ, ಅವರ ಹೋರಾಟಕ್ಕೆ ಸಂದ, ಹಾಗೂ ನಾಗರಿಕರ ಮನವಿಗೆ ಸ್ಪಂದಿಸಿದ ನಗರಸಭೆ ಅಂತೂ ತಂತು ತಡವಾಗಿಯಾದರೂ ನೀರು ತಂದಿತು.

ಶಾಸಕ ದೊಡ್ಡನಗೌಡ ಪಾಟೀಲ ಬಡಾವಣೆಯಲ್ಲಿಯೋಜನೆಗೆ ನಲ್ಲಿಗಳಿಂದ ನೀರು ಬಿಟ್ಟು ಚಾಲನೆ ನೀಡಿ, ಮಹಿಳೆ ತಲೆ ಮೇಲೆ ಕೊಡ ಹೊರಿಸಿ, ಇನ್ಮುಂದೆ ಇಂತಹ ಕೊಡ ಹೊತ್ತು ನೀರು ತರುವುದು ಬೇಡ, ಮನೆಬಾಗಿಲಿಗೇ ಬರುವ ನೀರನ್ನು ಮನೊಯೊಳಗೇ ಪೈಪ್‌ ಹಚ್ಚಿ ಬಳಸಿಕೊಳ್ಳಿ ಹೊತ್ತು ತರುವ ಭಾರ ಕಡಿಮೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿ, ಮನದ ಭಾರ ಇಳಿಸಿದರು. ನಾನಾ ಬೇಡಿಕೆಗಳ ಮನವಿ ಸ್ವೀಕರಿಸಿ ಆದಷ್ಟು ಬೇಗ ಸರಿಪಡಿಸುವುದಾಗಿ ಭರವಸೆ ನೀಡಿದರು.

ನಗರಸಭೆ ಹಿರಿಯ ಸದಸ್ಯ ಲಕ್ಷತ್ರ್ಮಣ ಗುರಂ, ಸದಸ್ಯರಾದ ಚೋಳಪ್ಪ ಇಂಡಿ, ದತ್ತಾತ್ರೇಯ ಗುಳೇದ, ಸುಗುರೇಶ ನಾಗಲೋಟಿ, ಮಂಜುನಾಥ ಶೆಟ್ಟರ ಹಾಗೂ ಚಂದ್ರಶೇಖರ ಏಕಬೋಟೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ