ಆ್ಯಪ್ನಗರ

ಮಕ್ಕಳ ಕಲಿಕೆಗೆ ಜಗದಾಳ ಎಕ್ಸ್‌ಪ್ರೆಸ್‌ ಟ್ರೇನ್‌

ರಬಕವಿ/ಬನಹಟ್ಟಿ: ಕುಡಚಿ-ಬಾಗಲಕೋಟ ರೈಲಿಗೆ ಹಲವು ದಶಕಗಳಿಂದ ಹೋರಾಟ ನಡೆದಿದೆ. ಆದರೆ ರೈಲು ಹಳಿ ಕೂಡ ಇನ್ನೂ ಬಂದಿಲ್ಲ. ಬನಹಟ್ಟಿಗೆ ಧಿರೈಲು ಯಾವಾಗ ಬರುತ್ತದೋ ಗೊತ್ತಿಲ್ಲ, ಆದರೆ, ಸಮೀಪದ ಜಗದಾಳಕ್ಕೆ ಗ್ರಾಮಕ್ಕೆ ಮಾತ್ರ ಹಳಿ ಇಲ್ಲದಿದ್ದರೂ ಧರೈಲು ಬಂದಿದೆ.

Vijaya Karnataka 29 Nov 2018, 5:00 am
ರಬಕವಿ/ಬನಹಟ್ಟಿ: ಕುಡಚಿ-ಬಾಗಲಕೋಟ ರೈಲಿಗೆ ಹಲವು ದಶಕಗಳಿಂದ ಹೋರಾಟ ನಡೆದಿದೆ. ಆದರೆ ರೈಲು ಹಳಿ ಕೂಡ ಇನ್ನೂ ಬಂದಿಲ್ಲ. ಬನಹಟ್ಟಿಗೆ ಧಿರೈಲು ಯಾವಾಗ ಬರುತ್ತದೋ ಗೊತ್ತಿಲ್ಲ, ಆದರೆ, ಸಮೀಪದ ಜಗದಾಳಕ್ಕೆ ಗ್ರಾಮಕ್ಕೆ ಮಾತ್ರ ಹಳಿ ಇಲ್ಲದಿದ್ದರೂ ಧರೈಲು ಬಂದಿದೆ.
Vijaya Karnataka Web jagadala express train for childrens learning
ಮಕ್ಕಳ ಕಲಿಕೆಗೆ ಜಗದಾಳ ಎಕ್ಸ್‌ಪ್ರೆಸ್‌ ಟ್ರೇನ್‌


ಇದೇನಿದು? ಹಳಿ ಇಲ್ಲದೇ ರೈಲು ಬರಲು ಹೇಗೆ ಸಾಧ್ಯ ಅಂತೀರಾ? ಹಾಗಂತ ನಾವೇನೂ ಸುಮ್ನೆ ಧಿರೈಲು ಬಿಡುತ್ತಿಲ್ಲ ಕಣ್ರೀ ನಿಜಕ್ಕೂ ಜಗದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹರಿಜನ ಕೇರಿಯಲ್ಲಿ ಉದ್ದನೆ ರೈಲು ಬೋಗಿ ಬಂದು ನಿಂತಿದೆ.

ಜಗದಾಳ ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ ಹಾಗೂ ಎಸ್ಡಿಎಂಸಿ ಪದಾಧಿಕಾರಿ ಸೇರಿ ತಮ್ಮೂರಿಗೆ ಉಗಿ ಬಂಡಿ ಬರದಿದ್ದರೇನಂತೆ ಜ್ಞಾನದ ಬಂಡಿ ತರೋಣ ಎಂದು ಇಲ್ಲಿನ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹರಿಜನ ಕೇರಿಗೆ ರೈಲಿನ ಬಣ್ಣ ಬಳಿದು ಉಗಿಬಂಡಿ ಮಾದರಿಯಲ್ಲಿ ಜ್ಞಾನದ ಬಂಡಿ ಸಿದ್ಧಪಡಿಸಿದ್ದಾರೆ.

ರೈಲು ಆಟ ಮಕ್ಕಳ ನೋಟ:

ರೈಲು ಕಂಡರೆ ಮಕ್ಕಳಿಗೆ ಇಷ್ಟ. ಕುತೂಹಲ. ಇದನ್ನು ಮನಗಂಡು ಇಧಿಲ್ಲಿಯ ಶಿಧಿಕ್ಷಧಿಕರು ಈ ಶಾಲೆಗೆ ಬರುವ ಮಕ್ಕಳಿಗೆ ಆಕರ್ಷಕವಾಗುವಂತೆ ರೈಲು ಮಾಡಿದ್ದಾರೆ.

ಈಗ ಈ ಶಾಲೆಗೆ ಬರುತ್ತಿರುವ ಮಕ್ಕಳು ನಿತ್ಯ ಕುಣಿದು ಕುಪ್ಪಳಿಸಿ ರೈಲಿನಲ್ಲಿ ಹತ್ತವುದು ಇಳಿಯುವುದು ಹೇಗೆ ಮಾಡುತ್ತಾರೆ. ಹಾಗೆ ಶಾಲೆ ಗಂಟೆ ಬಾರಿಸಿದಾಗ ರೈಲಿನಲ್ಲಿ ಒಳ ಹೋದಂತೆ ಮಾಡುವುದು, ವಿರಾಮದ ಗಂಟೆ ಬಾರಿಸಿದಾಗ ರೈಲು ನಿಲ್ದಾಣ ಬಂದಂತೆ ಭಾಸವಾಗಿ ಹೊರಬರುವುದು. ಹೀಗಾಗಿ ಮಕ್ಕಳಿಗೆ ಶಿಕ್ಷ ಣ ಕಲಿಯಲು ಇದೊಂದು ಆಸಕ್ತಿದಾಯಕ ವಾತಾವರಣವಾಗಿದೆ .

ಬೇರೆ ಯಾರಾದರೂ ಈ ರೈಲಿನ ಬಳಿ ಬರುತ್ತಲೇ ಒಂದು ಸೆಲ್ಪಿ ತೆಗೆಸಿಕೊಳ್ಳುವಂತೆ ಮಾಡುತ್ತಿದೆ. ಈ ಶಾಲೆಯಲ್ಲಿ ಹಿಂದೆ ಕೇವಲ ಮೂರು ಜನ ಶಿಕ್ಷ ಕರು ಕಾರ್ಯ ನಿರ್ವಹಿಸುತ್ತಿದ್ದರು. ಎಸ್‌ಡಿಎಂಸಿ, ಶಿಕ್ಷ ಣ ಪ್ರೇಮಿಗಳು ಸೇರಿ ಇಲಾಖೆಯನ್ನು ಒತ್ತಾಯಿಸಿದ್ದರಿಂದ ಈಗ 8 ಜನ ಶಿಕ್ಷ ಕರಿದ್ದಾರೆ. ಮುಖ್ಯ ಗುರುಮಾತೆಯರಾಗಿ ಜೆ.ಎಸ್‌.ಕಟ್ಟಿಮನಿ, ಸಹ ಶಿಕ್ಷ ಕರುಗಳಾಗಿ ಎಸ್‌.ಎಂ.ಹಳ್ಳಿ, ಆರ್‌.ಎಸ್‌.ಹೂಗಾರ, ಪ್ರೇಮಾ ಆರ್‌.ತಡಸಲೂರು, ಅರ್ಪಿತಾ ಎಸ್‌, ಸಂತೋಷ ಎಸ್‌.ಬುದ್ನಿ, ಎಂ.ಎಂ.ಸೋರಗಾಂವಿ, ಬಿ.ಎಲ್‌.ಬೆಲ್ಲನವರ ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೈಹಿಕ ಶಿಕ್ಷ ಕರ ಕೊರತೆ ಇದೆ. ಈ ಶಾಲೆ 1 ರಿಂದ 7 ನೇ ತರಗತಿವರೆಗೂ ಇದ್ದು 164 ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ.

ಹಸಿರು ಮಿತ್ರ ಶಿಕ್ಷಕ:
ಪರಿಸರ ಮಿತ್ರ ಶಿಕ್ಷ ಕ ಆರ್‌.ಎಸ್‌.ಹೂಗಾರ ಉಳಿದ ಶಿಕ್ಷ ಕರ ಸಹಾಯದೊಂದಿಗೆ ವಿಷಯ ಬೋಧನೆ ಜೊತೆಗೆ ಶಾಲಾ ಪರಿಸರವನ್ನು ವನಸಿರಿಯಾಗಿ ಮಾಡುವಲ್ಲಿ ಮುತುವರ್ಜಿವಹಿಸಿದ್ದಾರೆ. ಮಕ್ಕಳಿಗೆ ಪರಿಸರ ಕಾಳಜಿ ಬೆಳೆಸುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಈ ಶಿಕ್ಷ ಕರ ಸಸಿಗಳಿಗೆ ನೀರುಣಿಸುವುದರ ಜೊತೆಗೆ ನೀರಿನ ಟ್ಯಾಂಕ್‌ ತುಂಬಿ ಹೊರಸೂಸುವ ನೀರೂ ಪೋಧಿಲಾಧಿಗಧಿದೆ ಸಸಿಗಳಿಗೆ ಹೋಗುವಂತೆ ಧಿಮಾಧಿಡಿದ್ದು ಮಾಧಿದಧಿರಿಧಿಯಾಧಿಗಿಧಿದೆ. ಮಕ್ಕಳು ಊಟ ಮಾಡಿದ ನಂತರ ಕೈ ತೊಳೆಯುವಾಗ ಕೂಡ ನೀರನ್ನು ಎಲ್ಲೆಂದರಲ್ಲಿ ಚೆಲ್ಲದೆ ಅದು ಸಸಿಗಳಿಗೆ ಜೀವ ಚೈಧಿತಧಿನ್ಯಧಿವಾಧಿಗುಧಿವಂತಹ ಕಾರ್ಯ ಮಾಡುತ್ತಿದ್ದಾಧಿರೆ. ಜ್ಞಾನದ ಕಣಜಗಳಾದ ಈ ಶಾಲೆಯಲ್ಲಿ ಕಣ್ಮನ ಸೆಳೆಯುವ ನಲಿಕಲಿ ಕೊಠಡಿ, ಸುಂದರ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಾಮಗ್ರಿಗಳು ವ್ಯವಸ್ಥಿತವಾಗಿ ಉಪಯೋಗವಾಗುತ್ತಿದೆ.

ಮಕ್ಕಳಲ್ಲಿ ಹೊಸತನ ಮೂಡಲಿ, ಆಕರ್ಷಣೀಯವಾಗಲಿ, ಮಕ್ಕಳು ಶಾಲೆಗೆ ನಿಯಮಿತವಾಗಿ ಬರುವಂತಾಗಲಿ, ಶಿಸ್ತು ಕಂಡುಕೊಳ್ಳಬೇಕು ಎಂಬ ಕಾರಣದಿಂದ ಎಲ್ಲ ಶಿಕ್ಷ ಕರ ಎಸ್‌ಡಿಎಂಸಿಯವರ ಸಹಕಾರ ಪಡೆದು ರೈಧಿಲು ಬಣ ್ಣಬಳಿದಿದ್ದೇವೆ. ಇದು ಈಗ ಮಕ್ಕಳ ಗಮನವನ್ನಷ್ಟೇ ಅಲ್ಲ ನೋಡುಗರ ಗಮನ ಸೆಳೆಯುತ್ತಿದೆ.
ಮುಖ್ಯ ಗುರುಮಾತೆ ಜೆ.ಎಸ್‌.ಕಟ್ಟಿಮನಿ.

ಶಾಲಾ ಶಿಕ್ಷ ಕರು ಗ್ರಾಮಸ್ಥರ ನೆರವಿನಿಂದ ಶಾಲಾ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದೇವೆ , ಶಿಕ್ಷ ಕರು ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳುವುದರಿಂದ ಗ್ರಾಮಕ್ಕೆ ಹೆಸರು ಬಂದಂತಾಗುವುದು.
ಎಸ್‌ಡಿಎಂಸಿ ಅಧ್ಯಕ್ಷ ಕಾಡಪ್ಪ ಸೋನಾವಣೆ

ವಿನೂತನ ಪ್ರಯೋಗದೊಂದಿಗೆ ಮಕ್ಕಳ ಸುಂದರ ಭವಿಷ್ಯ ನಿರ್ಮಾಣ ಮಾಡಲು ಹೊರಟಿರುವ ಶಿಕ್ಷ ಕರ ಕಾರ್ಯ ಪ್ರಶಂಶನೀಯವಾದುದು ಇನ್ನೊಂದು ಶಾಲೆಗೆ ಮಾದರಿಯಾಗಲಿ.
ಶಿಕ್ಷ ಣ ಸಂಯೋಜಕ ಶ್ರೀಶೈಲ ಬುರ್ಲಿ


ಶಾಲೆಗಾಗಿ ನಾನು ಎಂಬ ಯೋಜನೆ ಮೂಲಕ ಶಾಲೆಯ ಅಭಿವೃದ್ಧಿಗಾಗಿ ಸಮುದಾಯದ ಎಲ್ಲ ವರ್ಗದ ಜನರು ಪಾಲ್ಗೊಂಡು, ಈಶಾಲೆ ಮಾದರಿಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾವತಿಯಿಂದ ಅನೇಕ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತೇವೆ/
ಬಸವರಾಜ ಮುನವಳ್ಳಿ ಜಗದಾಳ ಪಿಡಿಓ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ