ಆ್ಯಪ್ನಗರ

ಜಮಖಂಡಿ ಕ್ಯಾಂಟೀನ್‌ ಬಡವರು, ವಿದ್ಯಾರ್ಥಿಗಳಿಗೆ ವರದಾನ !

ಗುರುರಾಜ ಅರಕೇರಿ ಜಮಖಂಡಿ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಮಂಜೂರಾತಿಯಾಗಿದ್ದ ಇಂದಿರಾ ಕ್ಯಾಂಟೀನ್‌ ಕಳೆದ ಮೂರು ತಿಂಗಳದಿಂದಲೂ ಆರಂಭಗೊಂಡಿದೆ.

Vijaya Karnataka 29 Jun 2019, 5:00 am
ಗುರುರಾಜ ಅರಕೇರಿ ಜಮಖಂಡಿ
Vijaya Karnataka Web jamakhandi canteen is a boon for the poor and students
ಜಮಖಂಡಿ ಕ್ಯಾಂಟೀನ್‌ ಬಡವರು, ವಿದ್ಯಾರ್ಥಿಗಳಿಗೆ ವರದಾನ !


ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಮಂಜೂರಾತಿಯಾಗಿದ್ದ ಇಂದಿರಾ ಕ್ಯಾಂಟೀನ್‌ ಕಳೆದ ಮೂರು ತಿಂಗಳದಿಂದಲೂ ಆರಂಭಗೊಂಡಿದೆ.

ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸುಲಭವಾಗಿ ಕಡಿಮೆ ಬೆಲೆಯಲ್ಲಿ ಉಪಹಾರ 5 ರೂ. ಊಟ 10 ರೂ.ದರದಲ್ಲಿ ನೀಡಲಾಗುತ್ತಿದೆ. ಇದನ್ನು ದಿನನಿತ್ಯ ನೂರಾರು ಜನರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಮೂಲ ಸೌಲಭ್ಯಗಳನ್ನು ಹೊರತುಪಡಿಸಿ ಉಳಿದಂತೆ ಇಂದಿರಾ ಕ್ಯಾಂಟೀನ್‌ದಲ್ಲಿ ಬೆಳಗ್ಗೆ ಇಡ್ಲಿ ದೊರೆಯುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳುತ್ತಾ ಬಂದಿದೆ.

ಇಂದಿರಾ ಕ್ಯಾಂಟೀನ್‌ದಲ್ಲಿ ಶುದ್ಧ ನೀರು ಇದೆ. ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಹಂತದಲ್ಲಿದೆ. ಇದನ್ನು ನಗರಸಭೆಗೆ ನಿರ್ವಹಿಸಲು ಅವಕಾಶವಿದೆ. ಕ್ಯಾಂಟೀನ್‌ಗೆ ಸೂಕ್ತ ಕಂಪೌಂಡ್‌ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಂಡು ಬೇಕಾದಷ್ಟು ಜನರಿಗೆ ಗುಣಮಟ್ಟದ ಉಪಹಾರ, ಊಟವೂ ನೀಡಬಹುದಾಗಿದೆ ಎನ್ನುತ್ತಾರೆ ಗ್ರಾಹಕರು.

ಕಾಲೇಜ್‌ ವಿದ್ಯಾರ್ಥಿಗಳಿಗೆ ಆಪ್ತ

ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟವು ಸುಲಭವಾಗಿ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ಸಾಮಾನ್ಯ ಬಡ ಕುಟುಂಬದ ವಿದ್ಯಾರ್ಥಿಗಳಿಗೊಂದು ವರದಾನವಾಗಿದೆ. ನಸುಕಿನ ಜಾವ ಗ್ರಾಮಾಂತರ ಭಾಗಗಳಿಂದ ಮನೆಯಿಂದ ಬರುವ ವಿದ್ಯಾರ್ಥಿಗಳ ಪಾಲಿಗೆ ಇಂದಿರಾ ಕ್ಯಾಂಟೀನ್‌ ಉಪಯುಕ್ತವಾಗಿದೆ. ಇದನ್ನು ಇನ್ನಷ್ಟು ಗುಣಮಟ್ಟದ ರೀತಿಯಲ್ಲಿ ದೊರಕಬೇಕಾಗಿದೆ.

ಇಡ್ಲಿ ಹೊರತುಪಡಿಸಿ ಉಪ್ಪಿಟ್ಟು, ಭಾನುವಾರ ಉಪ್ಪಿಟ್ಟು ಸಿರಾ, ತರಕಾರಿ ಸಾಂಬಾರು ಅನ್ನ, ಪುಳಿಯೊಗರೆ,ವಾಂಗಿಬಾತ್‌, ಮೊಸರನ್ನವನ್ನು ಎರಡು ಹೊತ್ತು ನೀಡಲಾಗುತ್ತಿದೆ. ಇದು ವಾರಕ್ಕೊಮ್ಮೆಯಾದರೂ ಬದಲಾವಣೆಯಾಗಬೇಕೆಂದು ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.

ಕ್ಯಾಂಟೀನ್‌ದಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಕುಳಿತುಕೊಳ್ಳಲು ಅವಕಾಶವಿದೆ. ಇತರರಿಗೆ ಸ್ವ ಸಹಾಯ ಮೂಲಕ ಪಡೆದುಕೊಂಡು ನಿಂತೆ ಊಟ,ಉಪಹಾರ ಮಾಡಲಾಗುತ್ತಿದೆ. ಸಣ್ಣಪುಟ್ಟ ಉಪಹಾರ ಸೇವಿಸಲು ಹೆಚ್ಚಿನ ಬೆಲೆ ತೆತ್ತು ಸೇವನೆ ಮಾಡುವ ದಿನಗಳಲ್ಲಿ ಬಡವರಿಗೂ, ಮಧ್ಯಮ ವರ್ಗದವರ ಪಾಲಿಗೆ ಇದು ಸ್ವಲ್ಪ ಪ್ರಮಾಣದಲ್ಲಿ ಬಳಕೆಯಾಗಿದೆ ಎಂದು ಉಪಹಾರ ಸೇವಿಸಿದವರು ಅಭಿಪ್ರಾಯಪಡುತ್ತಿದ್ದಾರೆ. ಊಟ, ಉಪಹಾರಕ್ಕೆ ಆ ರುಚಿ, ಹೀಗಾಗಬೇಕಾಗಿತ್ತು ಹಾಗಾಗಬೇಕಾಗಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದವು.

ನಸುಕಿನ ಜಾವ ಗ್ರಾಮೀಣ ಭಾಗದಿಂದ ಬಂದು ಕಾಲೇಜ್‌ಗೆ ತೆರಳುವಾಗ, ಮಧ್ಯಾಹ್ನ ಊಟ ಮಾಡಿಕೊಂಡು ಮನೆಗೆ ತೆರಳುವಾಗಲೂ ಹಸಿದು ಬರುವ ನಮಗೆ ಇದೊಂದು ವರದಾನವಾಗಿದೆ.
ಸುಭದ್ರಾ ನವಲಿ, ವಿದ್ಯಾರ್ಥಿನಿ, ಗೋಠೆ

ದೂರದ ರೂಟ್‌ದಲ್ಲಿ ವಾಹನ ನಡೆಸುವಾಗ ಸಿಕ್ಕಸಿಕ್ಕಲಿ ಊಟ ಮಾಡಿ ಹೊಟ್ಟೆ ಕೆಡಿಸಿಕೊಂಡು ತಿರುಗಾಡುವ ನಮ್ಮಂತವರಿಗೆ ಇದೊಂದು ಉಪಯುಕ್ತವಾಗಿದೆ.
ಆರ್‌.ಎಸ್‌.ಬಾಳಿಕಾಯಿ, ಚಾಲಕ, ವಿಜಯಪುರ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ