ಆ್ಯಪ್ನಗರ

ಕರೋನಾ ಭೀತಿ, ಪ್ರಯಾಣಿಕರಿಗೆ ತಂದ ಫಜೀತಿ

ದೇಶ ವಿದೇಶಗಳುದ್ದಕ್ಕೂ ಹರಡಿದ ಕೊರೊನಾ ವೈರಸ್‌ ಭೀತಿಗೆ ಜನ ತತ್ತರಿಸಿ ಹೋಗಿದ್ದು ನಾಗರಿಕರ ನೆಮ್ಮದಿ ಹಾಳು ಮಾಡಿ, ನಿದ್ದೆಗೆಡಿಸುವ ಜತೆಗೆ ಮನೆಯಿಂದ ಹೊರಬರುವುದೂ ಕಠಿಣವಾದಂತಾಗಿದೆ.

Vijaya Karnataka Web 17 Mar 2020, 5:00 am
ಇಳಕಲ್‌: ದೇಶ ವಿದೇಶಗಳುದ್ದಕ್ಕೂ ಹರಡಿದ ಕೊರೊನಾ ವೈರಸ್‌ ಭೀತಿಗೆ ಜನ ತತ್ತರಿಸಿ ಹೋಗಿದ್ದು ನಾಗರಿಕರ ನೆಮ್ಮದಿ ಹಾಳು ಮಾಡಿ, ನಿದ್ದೆಗೆಡಿಸುವ ಜತೆಗೆ ಮನೆಯಿಂದ ಹೊರಬರುವುದೂ ಕಠಿಣವಾದಂತಾಗಿದೆ.
Vijaya Karnataka Web karn bhti prayikarige tanda phajti corona horror fajiti brought to travelers
ಕರೋನಾ ಭೀತಿ, ಪ್ರಯಾಣಿಕರಿಗೆ ತಂದ ಫಜೀತಿ


ಕದ್ದ ಮಾಲಲ್ಲ, ಕದ್ದ ರೋಗ
ಎಲ್ಲಿಂದಲೋ ಏನಾದರೂ ಕದ್ದ ವಸ್ತುಗಳನ್ನು ಸಾಗಿಸುತ್ತಿದ್ದರೆ, ತೆರಿಗೆ ವಂಚನೆ ಮಾಡಿ ವಸ್ತುಗಳನ್ನು ಸಾಗಿಸುತ್ತಿದ್ದರೆ, ಇಲ್ಲವೇ ನಂ.2 ಹಣವನ್ನು ಸಾಗಿಸುತ್ತಿದ್ದರೆ ಚೆಕ್‌ ಪೋಸ್ಟ ದಲ್ಲಿತಪಾಸಣೆ ಮಾಡಿ ಹಿಡಿಯುತ್ತಿದ್ದರು.

ಆದರೀಗ ಕಂದಾಯ ಇಲಾಖೆ ಹಾಗೂ ಆರಕ್ಷಕ ಇಲಾಖೆ ನಗರದ ಹೊರವಲಯದಲ್ಲಿಹಗಲಿರುಳೆನ್ನದೇ ಕೊರೊನಾ ಚೆಕ್‌ ಪೋಸ್ಟ ತೆರೆದು ಪರಿಶೀಲನೆ ಮಾಡುತ್ತಿರುವುದು ಕದ್ದು ಸಾಗಿಸುತ್ತಿರುವ ವಸ್ತುಗಳನ್ನಲ್ಲ. ಎಲ್ಲಿಂದಾದರೂ, ಯಾರ ಸಂಪರ್ಕದಿಂದಾದರೂ ಕೊರೊನಾ ರೋಗದ ಸೋಂಕು ಕದ್ದು ತಂದಿರುವರೇ ಎಂಬ ಶಂಖೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಬಸ್‌ಗಳಲ್ಲಿಪ್ರಯಾಣಿಕರಿಲ್ಲ
ಎಷ್ಟೊಂದು ಬಸ್‌ಗಳು ಬರುವುದೇ ವಿಳವಾಗಿರುವಾದ ಬರುವ ಕೆಲ ಬಸ್‌ ಗಳಲ್ಲಿಯೂ ಪ್ರಯಾಣಿಸುವ ಪ್ರಯಾಣಿಕರೇ ಇಲ್ಲದಾಗಿದೆ. ಆದಾಗ್ಯೂ ಇದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಅವರ ಆರೋಗ್ಯ ಪರಿಶೀಲಿಸುವುದು ಅನಿವಾರ್ಯವಾಗಿದೆ.

ಕೊರೊನಾ ವೈರಸ್‌ ತಪಾಸಣಾ ಕಳೆದೆರಡು ದಿನಗಳಿಂದ ನಡೆಸುತ್ತಿರುವ ತಪಾಸಣೆಯಲ್ಲಿಬಸ್‌ ಸೇರಿದಂತೆ ಒಟ್ಟು 635 ವಾಹನಗಳ ಪ್ರಯಾಣಿಕರನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಗಾಗಿ ಮಾರ್ಗದರ್ಶನ ನೀಡಲಾಯಿತು. ತಪಾಸಣೆಯಲ್ಲಿಕಂದಾಯ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಆರಕ್ಷಕ ಇಲಾಖೆ ಜತೆಗೆ ಸಂಬಂಧಪಟ್ಟ ಗ್ರಾ.ಪಂ. ಸಿಬ್ಬಂದಿಯೂ ಕಾರ್ಯ ನಿರ್ವಹಿಸುತ್ತಿದೆ.

ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಕೊರೊನಾ ಚೆಕ್‌ ಪೋಸ್ಟ್‌ ಉದ್ಘಾಟನೆ ಮಾಡಿ ಕಾರ್ಯಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್‌ ವೇದವ್ಯಾಸ ಮುತಾಲಿಕ, ಕಂದಾಯ ನಿರೀಕ್ಷಕ ನವೀನ ಬಲಕುಂದಿ, ಗ್ರಾ.ಲೆಕ್ಕಾಧಿಕಾರಿ ಬಿ.ಎಂ.ಪಾಟೀಲ,ಶ್ರೀಧರ ವಿಶ್ವಕರ್ಮ, ನಗರ ಠಾಣೆಯ ಎಸೈ. ಆರ್‌.ವೈ.ಜಲಗೇರಿ ಮತ್ತಿತರರು ಸಹ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ