ಆ್ಯಪ್ನಗರ

ಬಿಎಸ್‌ವೈ ಗೋಗರೆದು ಸಿಎಂ ಆಗಿದ್ದಾರೆ, ಸ್ವಯಂಕೃತ ಅಪರಾಧದಿಂದಲೇ ಸರಕಾರ ಬಿದ್ದು ಹೋಗತ್ತೆ: ಸಿದ್ದರಾಮಯ್ಯ

ಯಡಿಯೂರಪ್ಪನವರು ಕಾಡಿ ಬೇಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Vijaya Karnataka Web 27 Aug 2019, 12:00 pm
ಬಾಗಲಕೋಟೆ: ಯಡಿಯೂರಪ್ಪ ಗೋಗರೆದುಕೊಂಡು ಸಿಎಂ ಆಗಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.
Vijaya Karnataka Web Siddaramaiah 111


ಜಮಖಂಡಿಯಲ್ಲಿ ಮಾತನಾಡುತ್ತಿದ್ದ ಅವರು, ಎಷ್ಟು ದಿನ ಸರ್ಕಾರ ಇರುತ್ತೆ ಅಂತ ಹೇಳೋಕೆ ಆಗೋಲ್ಲ. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಬಿಜೆಪಿ ಸರ್ಕಾರಕ್ಕೆ ಆಯುಷ್ಯ ಇಲ್ಲ. ನಾವೇನು ಕೈಹಾಕೋಕೆ ಹೋಗಲ್ಲ, ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತೆ. ಈ ಬಾರಿ ಯಡಿಯೂರಪ್ಪರನ್ನು ಸಿಎಂ ಮಾಡೋಕೆ ಹೈಕಮಾಂಡ್‌ಗೆ ಇಷ್ಟವಿರಲಿಲ್ಲ, ಅವರು ಚುನಾವಣೆಗೆ ಹೋಗಬೇಕೆಂದುಕೊಂಡಿದ್ದರು, ಆದರೆ ಯಡಿಯೂರಪ್ಪ ಕಾಡಿ ಬೇಡಿ ಸಿಎಂ ಆಗಿದ್ದಾರೆ, ಎಂದರು.

ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಬೆಲೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಅಶೋಕ್, ಈಶ್ವರಪ್ಪ ಡಿಸಿಎಂ ಆಗಿದ್ದವರು. ಅವರನ್ನು ಈ ಬಾರಿ ಡಿಸಿಎಂ ಮಾಡಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದವರು ಅವರನ್ನೂ ಡಿಸಿಎಂ ಮಾಡಿಲ್ಲ. ಎಂಎಲ್ಎ ಆಗದಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದಾರೆ. ಕಾರಜೋಳ ಜನತಾದಳದಿಂದ ಹೋಗಿದ್ದವರು, ಅವರೇನು ಅರ್.ಎಸ್.ಎಸ್ ನವರಲ್ಲ , ಅವರನ್ನ ಡಿಸಿಎಂ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರಲ್ಲಿ ಅಸಮಾಧಾನ ಹುಟ್ಟುತ್ತದೆ, ಎಂದರು.

ಡಿಸಿಎಂ ಹುದ್ದೆ ಸಂವಿಧಾನಿಕವಾದುದಲ್ಲ. ಈ ರೀತಿ ಯಾರ ಕಾಲದಲ್ಲೂ ಇರಲಿಲ್ಲ. ಎಲ್ಲರನ್ನೂ ಸಮಾಧಾನ ಮಾಡೋಕೆ 3 ಡಿಸಿಎಂ ಹುದ್ದೆ ಸೃಷ್ಟಿಸಿದ್ದಾರೆ. ಕಾರಜೋಳ ಆರ್‌ಎಸ್‌ಎಸ್‌ನವರಲ್ಲ, ನಮ್ಮಲ್ಲಿದ್ದವರು. ಹಾಗಾಗಿ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ ಆಗಿಯೇ ಆಗುತ್ತೆ ಎಂದು ಒತ್ತಿ ಹೇಳಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸುಳಿವು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಇಬ್ಬರು ಡಿಸಿಎಂ ಮಾಡಿದ್ದವರೂ ಇವ್ರೆ. ಈಗ ಮೂರು ಡಿಸಿಎಂ ಹುದ್ದೆ ಮಾಡಿರೋರು ಇವ್ರೆ. ಯಡಿಯೂರಪ್ಪರನ್ನು ಕಟ್ಪಿಹಾಕೋಕೆ ಈ ರೀತಿ ಮಾಡಿದ್ದಾರೆ ಅನ್ಸುತ್ತೆ. ಹೈಕಮಾಂಡ್ ಮಾಡಿರೋದು ಇದು, ಬಿಎಸ್‌ವೈ ಅವರಿಗೆ ಇಷ್ಟವಿಲ್ಲ. ಹೈಕಮಾಂಡ್ ಹೇಳಿ ಬಿಎಸ್‌ವೈ ಮೇಲೆ ಒತ್ತಡ ಹಾಕ್ಸಿ ಡಿಸಿಎಂ ಮಾಡಿಸಿದ್ದಾರೆ. ಇದರ ಹಿಂದೆ ಯಡಿಯೂರಪ್ಪರನ್ನು ಕಾರ್ನರ್ ಮಾಡೋ ಉದ್ದೇಶವಿದೆ, ಎಂದು ಅವರು ಹೇಳಿದ್ದಾರೆ.

ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡದ ಬಿಜೆಪಿ ಸಚಿವರಿಂದ ನಿತ್ಯ ದಿಲ್ಲಿ ಟೂರ್: ಸಿದ್ದರಾಮಯ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ