ಆ್ಯಪ್ನಗರ

ಕೂಡಲಸಂಗಮದಲ್ಲಿ ಪುಣ್ಯ ಸ್ಥಾನಕ್ಕೆ ನಿಷೇಧ ಬಿಕೋ ಎಂದ ತ್ರೀವೇಣಿ ಸಂಗಮ

​​ಆರೋಗ್ಯಕರವಾಗಿ ಇರುತ್ತಾರೆ ಎಂಬ ದೃಷ್ಟಿಯಿಂದ ಈ ದಿನ ನದಿಗಳಲ್ಲಿ ಪುಣ್ಯ ಸ್ಥಾನ ಮಾಡುತ್ತಾರೆ. ಹೀಗಾಗಿ ಮಹಾರಾಷ್ಟ್ರ, ಆಂಧ್ರ ‌ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು‌.

Lipi 14 Jan 2022, 7:16 pm
ಬಾಗಲಕೋಟೆ: ಪ್ರತಿ ವರ್ಷ ಸಂಕ್ರಾಂತಿ ದಿನದಂದು ‌ಕೂಡಲಸಂಗಮದಲ್ಲಿ ಪುಣ್ಯ ಸ್ಥಾನ ಎಂದು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಸೇರುತ್ತಿದ್ದರು .ಆದರೆ ಈ ಭಾರಿ ಕೊರೊನಾ ಹಿನ್ನಲೆ ಪುಣ್ಯ ಸ್ಥಾನ ನಿಷೇಧ ಮಾಡಿದ್ದರಿಂದ ತ್ರೀವೇಣಿ ಸಂಗಮ ದಲ್ಲಿ ಬಣಬಣವಾಗಿದೆ.
Vijaya Karnataka Web ಕೂಡಲ ಸಂಗಮ
ಕೂಡಲ ಸಂಗಮ


ಸಂಕ್ರಾಂತಿ ಅಂಗವಾಗಿ ರಾಜ್ಯದ ವಿವಿಧ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು, ತ್ರೀವೇಣಿ ಸಂಗಮ ಪುಣ್ಯ ಸ್ಥಾನ ಮಾಡುತ್ತಿದ್ದರು, ಮಕರ ಸಂಕ್ರಮಣ ದಿನದಂದು ಸೂರ್ಯ ತನ್ನ ಪಥ ಬದಲಾವಣೆ ಮಾಡುತ್ತಿರುವ ಹಿನ್ನೆಲೆ ನದಿ ಸ್ಥಾನ ಮಾಡಿದರೆ, ಪಾಪ ಕರ್ಮಗಳು ಹೋಗುತ್ತದೆ.

ಬಾಗಲಕೋಟೆಯಲ್ಲಿ ಕೋವಿಡ್‌ ನಿಯಮದೊಂದಿಗೆ ಸರಳವಾಗಿ ವೈಕುಂಠ ಏಕಾದಶಿ ಆಚರಣೆ

ಆರೋಗ್ಯಕರವಾಗಿ ಇರುತ್ತಾರೆ ಎಂಬ ದೃಷ್ಟಿಯಿಂದ ಈ ದಿನ ನದಿಗಳಲ್ಲಿ ಪುಣ್ಯ ಸ್ಥಾನ ಮಾಡುತ್ತಾರೆ. ಹೀಗಾಗಿ ಮಹಾರಾಷ್ಟ್ರ, ಆಂಧ್ರ ‌ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು‌. ಜಾತ್ರೆಯಂತೆ ಜನಸ್ತೋಮ ಕಂಡು ಬರುತ್ತಿತ್ತು. ಆದರೆ ಈಗ ಎಲ್ಲವೂ ಸ್ತಬ್ದವಾಗಿದೆ.

ಇಡೀ ಸಂಗಮನಾಥ ಬಿಕೋ ಎನ್ನುವಂತಾಗಿದೆ. ಕೂಡಲಸಂಗಮ ರಾಷ್ಟ್ರೀಯ ಹೆದ್ದಾರಿ ವೃತ್ತದ ಬಳಿ ಪೊಲೀಸರು ಈಗ ಬಿಗಿ ಭದ್ರತೆ ಏರ್ಪಡಿಸಿದ್ದು, ಯಾರಿಗೂ ಒಳಗೆ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಬಂದ ಜನರಿಗೆ ವಾಪಸ್‌ ಕಳಿಸಲಾಗುತ್ತಿದೆ. ಕೊರೊನಾ ಹಿನ್ನಲೆ, ಪುಣ್ಯ ಸ್ಥಾನಕ್ಕೆ ಜಿಲ್ಲಾಡಳಿತ ನಿಷೇಧ ಮಾಡಿದೆ. ಈ ಹಿನ್ನಲೆ ಎಲ್ಲವೂ ಬಂದ್ ಮಾಡಲಾಗಿದೆ.

ಸಂಕ್ರಾಂತಿ ದಿನ ನದಿ ಸ್ನಾನಕ್ಕೆ ಇದೆ ಭಾರೀ ಮಹತ್ವ: ಈ ದಿನ ಸಂಪತ್ತು ವೃಧ್ದಿಗೆ ಏನು ಮಾಡಬೇಕು?

ಸಂಗಮನಾಥಗೆ ವಿಶೇಷ ಪೂಜೆ ಪುರಸ್ಕಾರ ನೇರವೇರಿಸಲಾಗುತ್ತದೆ. ಆದರೆ ಭಕ್ತರಿಗೆ ಮಾತ್ರ ಅವಕಾಶ ಇಲ್ಲ.ಪುಣ್ಯ ಸ್ಥಾನ ಹಾಗೂ ಸಂಗಮನಾಥನ ದರ್ಶನ ಇಲ್ಲದೆ ಈ ಭಾರಿ ಭಕ್ತರ ನಿರಾಶೆ ಮೂಡಿಸಿದೆ. ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಆಗುತ್ತಿತ್ತು. ವ್ಯಾಪ್ಯಾರಸ್ಥರಿಗೂ ಈಗ ಸಂಕಷ್ಟ ಎದುರಾಗಿದೆ. ಪ್ರತಿ ವರ್ಷ ಕೊರೊನಾದಿಂದ ವ್ಯಾಪಾರ ವಹಿವಾಟು ಇಲ್ಲದೆ,ಉಪ ಜೀವನಕ್ಕೆ ತೊಂದರೆ ಉಂಟಾಗಿದೆ. ಈಗ ಮತ್ತಷ್ಟು ಸಂಕಷ್ಟವಾಗಿದ್ದು, ವ್ಯಾಪಾರ ಪರದಾಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ