ಆ್ಯಪ್ನಗರ

ನಮ್ಮ ಯುವಕರು ವಿಶ್ವಕ್ಕೆ ತಾಂತ್ರಿಕ ರಾಯಭಾರಿಗಳಾಗಲಿ

ಮಹಾಲಿಂಗಪುರ : ಸನಾತನ ಭಾರತ ವಿಶ್ವಗುರುವಾಗಿದ್ದು ಇತಿಹಾಸವಾದರೂ ಆಧುನಿಕ ಯುಗದಲ್ಲೂ ಭಾರತೀಯ ಯುವಕರು ವಿಶ್ವಕ್ಕೆ ತಾಂತ್ರಿಕ ರಾಯಭಾರಿಯಾಗಿ ಬೆಳೆಯುವ ಮೂಲಕ ಮತ್ತೆ ವಿಶ್ವಗುರು ಸ್ಥಾನ ಸಿಗುವಂತಾಗಲಿ ಎಂದು ಯಾದವಾಡದ ಶಿಕ್ಷ ಕ ಸಮರ್ಥ ಖಾಸನಿಸ್‌ ಹೇಳಿದರು.

Vijaya Karnataka 15 Feb 2019, 5:00 am
ಮಹಾಲಿಂಗಪುರ : ಸನಾತನ ಭಾರತ ವಿಶ್ವಗುರುವಾಗಿದ್ದು ಇತಿಹಾಸವಾದರೂ ಆಧುನಿಕ ಯುಗದಲ್ಲೂ ಭಾರತೀಯ ಯುವಕರು ವಿಶ್ವಕ್ಕೆ ತಾಂತ್ರಿಕ ರಾಯಭಾರಿಯಾಗಿ ಬೆಳೆಯುವ ಮೂಲಕ ಮತ್ತೆ ವಿಶ್ವಗುರು ಸ್ಥಾನ ಸಿಗುವಂತಾಗಲಿ ಎಂದು ಯಾದವಾಡದ ಶಿಕ್ಷ ಕ ಸಮರ್ಥ ಖಾಸನಿಸ್‌ ಹೇಳಿದರು.
Vijaya Karnataka Web let our youth become technical ambassadors to the world
ನಮ್ಮ ಯುವಕರು ವಿಶ್ವಕ್ಕೆ ತಾಂತ್ರಿಕ ರಾಯಭಾರಿಗಳಾಗಲಿ


ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗ ಹಮ್ಮಿಕೊಂಡಿದ್ದ ಟೆಕ್ನಿಕಲ್‌ ಫೆಸ್ಟ್‌-ಸೈಫರ್‌ 2ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂತ್ರಜ್ಞಾನಕ್ಕೆ ಇತಿಮಿತಿಯಿಲ್ಲ, ಸಾಧನೆಗೆ ಆಕಾಶದಷ್ಟು ಅವಕಾಶವಿದೆ. ಕ್ರಿಯಾಶೀಲ ವಿದ್ಯಾರ್ಥಿಗಳು ಅವಕಾಶಗಳಿಗೆ ಕಾಯದೇ ಅವಕಾಶ ಸೃಷ್ಠಿಸಿಕೊಳ್ಳುವ ಸೃಜನಶೀಲತೆ ಮೆರೆಯಬೇಕು. ಭಾರತದ ಭವಿತವ್ಯದ ವಿಜ್ಞಾನಿಗಳಾಗಿ ಬೆಳಗಬೇಕು ಎಂದರು.

ಪ್ರೌಢಶಾಲೆ ಹಾಗೂ ಡಿಪೊ್ಲೕಮಾ ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಾಚಾರ್ಯ ಎಸ್‌.ಐ.ಕುಂದಗೋಳ, ಉಪನ್ಯಾಸಕ ನವೀನ ಕಡ್ಲಿಬುಡ್ಡಿ, ಪುಷ್ಪಾ ಮೋದಿ, ಸವಿತಾ ಗೊಂದಿ, ಸುಪ್ರಿಯಾ ಹಾಲಭಾವಿ, ಶ್ರೀದೇವಿ ಮುನವಳ್ಳಿ, ಸುಭಾಸ ಮೂಶಿ, ವಂದನಾ ಪಸಾರ,ಸವಿತಾ ಬೀಳಗಿ ಇದ್ದರು. ಶೈಲಾ ಹೊಸಕೋಟಿ ಸ್ವಾಗತಿಸಿದರು. ಸುಮಾ ಖೋತ ಪುಷ್ಪಾರ್ಪಣೆ ಮಾಡಿದರು. ಮಧು ಶಿಂಧೆ ಮತ್ತು ಸ್ಮೀತಾ ಜವಳಗಿ ನಿರೂಪಿಸಿದರು. ಆಲಿಯಾ ಕಾಗಜಿ ವಂದಿಸಿದರು.

ವಿದ್ಯಾರ್ಥಿಗಳಿಗೆ ನಾನಾ ಸ್ಪರ್ಧೆ:

ಪ್ರೌಢಶಾಲಾ ವಿಭಾಗಕ್ಕೆ ಏರ್ಪಡಿಸಲಾದ ಮೆಮೊರಿ ಮ್ಯಾನೇಜಮೆಂಟ್‌ ಸ್ಪರ್ಧೆಯಲ್ಲಿ ಎಸ್‌ಸಿಪಿ ಪ್ರೌಢಶಾಲೆಯ ವಿನಾಯಕ ಪಿ ಮತ್ತು ಸವಿತಾ ಕೆ ಪ್ರಥಮ, ಜೇಸಿ ಪ್ರೌಢಶಾಲೆಯ ರುಚಿತಾ ಎ ಮತ್ತು ಮೇಘಾ ಎಂ ದ್ವಿತೀಯ, ಡ್ರಾಯಿಂಗ್‌ ಮತ್ತು ಪೇಂಟಿಂಗ್‌ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆಯ ಪ್ರತಿಭಾ ಟಿರ್ಕಿ ಪ್ರಥಮ, ರಾಧಿಕಾ ಮಠಪತಿ ದ್ವಿತೀಯ ಬಹುಮಾನ ಪಡೆದರು. ಡಿಪೊ್ಲೕಮಾ ವಿಭಾಗಕ್ಕೆ ಏರ್ಪಡಿದ್ದ ಡಿಬಗ್ಗಿಂಗ್‌ ಸ್ಪರ್ಧೆಯಲ್ಲಿ ಬಾಗಲಕೋಟ ಬಿವಿವಿಎಸ್‌ ಪಾಲಿಟೆಕ್ನಿಕ್‌ನ ಪ್ರಭಾ ಮತ್ತು ನರಸಿಂಹ ಪ್ರಥಮ, ವೆಬ್‌ ಪೇಜ್‌ ಡಿಸೈನಿಂಗ್‌ನಲ್ಲಿ ಮಹಾಲಿಂಗಪುರ ಕೆಎಲ್‌ಇ ಪಾಲಿಟೆಕ್ನಿಕ್‌ನ ಶ್ರೀಧರ ಪತ್ತಾರ ಮತ್ತು ದರ್ಶನ ತೇರದಾಳ ಪ್ರಥಮ, ಬಾಗಲಕೋಟ ಬಿವಿವಿಎಸ್‌ ಪಾಲಿಟೆಕ್ನಿಕ್‌ನ ಶ್ರವಣ ಮತ್ತು ಮಲ್ಲಿಕಾರ್ಜುನ ದ್ವಿತೀಯ, ಫಾಸ್ಟ್‌ ಟೈಪಿಂಗ್‌ನಲ್ಲಿ ಬಾಗಲಕೋಟ ಬಿವಿವಿಎಸ್‌ ಪಾಲಿಟೆಕ್ನಿಕ್‌ನ ಮಲ್ಲಿಕಾರ್ಜುನ ಎಸ್‌.ಎ ಪ್ರಥಮ, ರಬಕವಿ ಸರಕಾರಿ ಪಾಲಿಟೆಕ್ನಿಕ್‌ನ ಚಿತ್ರಾ ಬಕರೆ ದ್ವಿತೀಯ ಬಹುಮಾನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ