ಆ್ಯಪ್ನಗರ

ಲಿಂಗಾಯತ ಸ್ವತಂತ್ರ ಧರ್ಮವೇ ಅಲ್ಲ: ಸ್ವಾಮೀಜಿ

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ರ‍್ಯಾಲಿ ಮಾಡಿ, 50 ಸಾವಿರ ಓಟಿನಿಂದ ಗೆಲ್ಲುತ್ತೇನೆ ಎನ್ನುವದು ಅಸಾಧ್ಯದ ಮಾತು, ರಾಜಕೀಯದ ಮೂಲಕ ಧರ್ಮವನ್ನು ಒಡೆದು ಆಳೋದು ಸ್ವಾರ್ಥಕ್ಕೆ ಬಳಸಿಕೊಳ್ಳೋದು ಸರಿಯಲ್ಲ

Vijaya Karnataka Web 11 Dec 2017, 1:29 pm
ಬಾಗಲಕೋಟ: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ರ‍್ಯಾಲಿ ಮಾಡಿ, 50 ಸಾವಿರ ಓಟಿನಿಂದ ಗೆಲ್ಲುತ್ತೇನೆ ಎನ್ನುವದು ಅಸಾಧ್ಯದ ಮಾತು, ರಾಜಕೀಯದ ಮೂಲಕ ಧರ್ಮವನ್ನು ಒಡೆದು ಆಳೋದು ಸ್ವಾರ್ಥಕ್ಕೆ ಬಳಸಿಕೊಳ್ಳೋದು ಸರಿಯಲ್ಲ ಎಂದು ಹೇಳುವ ಮೂಲಕ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಸಚಿವ ಎಂ.ಬಿ ಪಾಟೀಲ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Vijaya Karnataka Web lingayat is not a religion says swamiji
ಲಿಂಗಾಯತ ಸ್ವತಂತ್ರ ಧರ್ಮವೇ ಅಲ್ಲ: ಸ್ವಾಮೀಜಿ


ಬಾಗಲಕೋಟೆಯಲ್ಲಿ ಮಾತನಾಡಿದ ಸ್ವಾಮೀಜಿ, ಬೇಕಿದ್ದರೆ ತಮ್ಮ ಪಕ್ಷದ ಪ್ರಚಾರ ಮಾಡಲಿ ಅಥವಾ ತಮ್ಮ ಕಾರ್ಯವೈಖರಿ ಬಗ್ಗೆ ತಿಳಿಸಿಕೊಡಲಿ, ಅದು ಬಿಟ್ಟು ರಾಜಕಾರಣಕ್ಕಾಗಿ ಧರ್ಮ ಒಡೆಯೋದು ಸರಿಯಲ್ಲ, ಇದ್ರಿಂದ ಯಶಸ್ಸು ಕಾಣ್ತೇನೆ ಅನ್ನೋದು ಸುಳ್ಳು ಎಂದು ಸಚಿವ ಎಂ.ಬಿ ಪಾಟೀಲ್‌ಗೆ ವಿರುದ್ದ ಕುಟುಕಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮದ ಸಮಾವೇಶದಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸ್ತಿರೋದು ದುಖಃಕರ, ಲಿಂಗಾಯತ ಸ್ವತಂತ್ರ ಧರ್ಮವೇ ಅಲ್ಲ, ಇರೋದು ಒಂದೆ ಅದು ವೀರಶೈವ ಧರ್ಮ ಎಂದ್ರಲ್ಲದೇ, ಬಸವಣ್ಣನವರು ವೀರಶೈವ ಎಂದು ಪದ ಬಳಸಿದ್ದಾರೆ, ಅವರು ಲಿಂಗಾಯತ ಎಂಬ ಪದ ಬಳಸಿಯೇ ಇಲ್ಲ, ಅಂತದ್ರಲ್ಲಿ ಅವರ ಹೆಸರಿನ ಮೇಲೆ ಲಿಂಗಾಯತ ಪ್ರತ್ಯೇಕ ಧರ್ಮಮಾಡಲು ಹೊರಟಿದ್ದು ಸರಿಯಲ್ಲ ಎಂದರು.

ದಾಖಲೆಗಳನ್ನ ತೋರಿಸಲು ಬ್ರಿಟೀಷರ ಲೇಖನಿ ಮುಖ್ಯವಲ್ಲ, ನಾಡಿನ ಶರಣರ ವಚನಗಳಲ್ಲಿ ಇನ್ನೂರು ಬಾರಿ ವೀರಶೈವ ಪದ ಬಳಸಿದ್ದಾರೆ ಇವೇ ನಿಜವಾದ ದಾಖಲೆಗಳು. ಇನ್ನು ಬಸವಣ್ಣನವರ ಭಾವಚಿತ್ರ ಪೂಜೆ ಮಾಡೋದು ಮುಖ್ಯವಲ್ಲ, ಅವರ ತತ್ವಗಳನ್ನು ಅನುಸರಿಸೋದು ಮುಖ್ಯ, ಇನ್ನು ರ್ಯಾಲಿಗಳ ಮೂಲಕ ಹೆಚ್ಚು ಜನರನ್ನು ಸೇರಿಸೋದ್ರಿಂದ ಪ್ರತ್ಯೇಕ ಧರ್ಮವಾಗಲು ಸಾಧ್ಯವಿಲ್ಲ, ಸರ್ಕಾರಿ ದಾಖಲೆಯಲ್ಲಿ ಹಿಂದೂ ಲಿಂಗಾಯತ ಎಂದು ಇಟ್ಕೊಂಡು, ನಾವು ಹಿಂದೂ ಅಲ್ಲ ಎಂದು ಹೇಳೋದು ಸರಿಯಲ್ಲ. ಬಸವಣ್ಣನವರ ದೃಷ್ಟಿಯಲ್ಲಿ ಲಿಂಗಾಯತ ಧರ್ಮವೇ ಇಲ್ಲ ಎಂದು ವೀರಶೈವ ಧರ್ಮ ಎಂದು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ