ಆ್ಯಪ್ನಗರ

ನಶೆಯೇರಿದ ನಾರಿ, ನಾಗರಿಕರ ಛೀಮಾರಿ

ಕಲಾದಗಿ: ಒಳಗೆ ಸೇರಿದರೆ ಗುಂಡು.... ಹುಡುಗಿಯಾಗುವಳು ಗಂಡು.... ಎನ್ನುವ ತರಹವೇ ಇಲ್ಲೊಬ್ಬ ಮಹಿಳೆ ಮದ್ಯದ ಅಮಲಿನಲ್ಲಿ ತನ್ನ ಇಬ್ಬರು ಕಂದಮ್ಮಗಳೊಂದಿಗೆ ರಸ್ತೆ ಬದಿಯಲ್ಲಿ ಬಿದ್ದು ಎದ್ದು, ವಾಹನಕ್ಕೆ ಸಿಕ್ಕು ಸಾಯುವುದಾಗಿ ಹೇಳುತ್ತಿದ್ದಾಗ ಸಾರ್ವಜನಿಕರಿಂದ ಛೀಮಾರಿಹಾಕಿಸಿಕೊಂಡಿದ್ದಾಳೆ. ಕೆಲ ಹೊತ್ತಿನ ನಂತರ ಒಂದಿಷ್ಟು ಬುದ್ದಿಮಾತು ಹೇಳಿ ಮಂಗಳವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

Vijaya Karnataka 23 May 2018, 5:00 pm
ಕಲಾದಗಿ: ಒಳಗೆ ಸೇರಿದರೆ ಗುಂಡು.... ಹುಡುಗಿಯಾಗುವಳು ಗಂಡು.... ಎನ್ನುವ ತರಹವೇ ಇಲ್ಲೊಬ್ಬ ಮಹಿಳೆ ಮದ್ಯದ ಅಮಲಿನಲ್ಲಿ ತನ್ನ ಇಬ್ಬರು ಕಂದಮ್ಮಗಳೊಂದಿಗೆ ರಸ್ತೆ ಬದಿಯಲ್ಲಿ ಬಿದ್ದು ಎದ್ದು, ವಾಹನಕ್ಕೆ ಸಿಕ್ಕು ಸಾಯುವುದಾಗಿ ಹೇಳುತ್ತಿದ್ದಾಗ ಸಾರ್ವಜನಿಕರಿಂದ ಛೀಮಾರಿಹಾಕಿಸಿಕೊಂಡಿದ್ದಾಳೆ. ಕೆಲ ಹೊತ್ತಿನ ನಂತರ ಒಂದಿಷ್ಟು ಬುದ್ದಿಮಾತು ಹೇಳಿ ಮಂಗಳವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
Vijaya Karnataka Web little childrens fight the rebuke of civilians
ನಶೆಯೇರಿದ ನಾರಿ, ನಾಗರಿಕರ ಛೀಮಾರಿ


ಆತ್ಮಹತ್ಯೆ ಪ್ರಯತ್ನ:

ಅದೆಲ್ಲಿಂದಲೋ ಬಂದಿದ್ದ ಇಬ್ಬರು ಪುಟ್ಟಕಂದಮ್ಮಗಳೊಂದಿಗಿನ ಮದ್ಯವಯಸ್ಕ ಈ ಮಹಿಳೆ ಕುಡಿದ ಮತ್ತಿನಲ್ಲಿ ವಾಹನಕ್ಕೆ ಸಿಕ್ಕು ಸಾಯುವುದಾಗಿ ಹೇಳಿ ರಸ್ತೆಯತ್ತ ಹೋಗುತ್ತಿದ್ದದ್ದನ್ನು ಸೋಮವಾರ ರಾತ್ರಿಯೇ ಗ್ರಾಮದ ಬೈಪಾಸ್‌ ರಸ್ತೆಯಲ್ಲಿನ ಜನತಾಪ್ಲಾಟ್‌ನ ನಾಗರಿಕರು ಗಮನಿಸಿದ್ದಾರೆ.

ಈಕೆ ಹುಚ್ಚಾಟ ಹಾಗೂ ಆ ಪುಟ್ಟ ಮಕ್ಕಳ ರೋಧನ ಗಮನಿಸಿದ ಜನ ಆಕೆಯನ್ನು ಹಾಗೂಹೀಗು ಸಂಭಾಳಿಸಿ ಸಮೀಪದ ಸಾಯಿಮಂದಿರದ ಬಳಿ ಕರೆದುಕೊಂಡು ಬಂದು ಚಡಪಡಿಸುತ್ತಿದ್ದ ಮಕ್ಕಳೊಂದಿಗೆ ಆಕೆಗೂ ಊಟೋಪಚಾರ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಆಕೆಯಿಂದ ಸ್ಪಷ್ಟ ಮಾಹಿತಿ ಸಿಗದ್ದರಿಂದ ಆಕೆ ಮನೆ ಮುಟ್ಟಿಸುವ ಕೆಲಸ ವಿಫಲವಾಗಿದೆ.

ಮತ್ತೆ ನಶೆಯೇರಿಸಿಕೊಂಡ ನಾರಿ:

ಸಾಯಿಮಂದಿರದಲ್ಲಿ ರಾತ್ರಿ ಉಳಿದುಕೊಂಡಿದ್ದ ಮಹಿಳೆ ಮಂಗಳವಾರ ಬೆಳಗ್ಗೆ ಇಲ್ಲಿನ ಬಾರೊಂದರಲ್ಲಿ ಮತ್ತೆ ನಶೆಯೇರಿಸಿಕೊಂಡು ರಸ್ತೆ ಪಕ್ಕದಲ್ಲಿ ಪ್ರಜ್ಞೆ ತಪ್ಪಿಬಿದ್ದಿರುವುದು,ಆಕೆಯ ಪಕ್ಕದಲ್ಲಿ ಆ ಕಂದಮ್ಮಗಳು ರೋಧಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ.

ಪ್ರಜ್ಞೆ ಇಲ್ಲದೆ ಅಮಲಿನಲ್ಲಿದ್ದ ಮಹಿಳೆಯನ್ನು ನೀರು ಎರಚಿ ಎಚ್ಚರಗೊಳಿಸಿ ಸಾರ್ವಜನಿಕರು ಛೀಮಾರಿ ಹಾಕಿದ್ದಾರೆ. ಮಕ್ಕಳ ಸ್ಥಿತಿಗೆ ಮಮ್ಮಲು ಮರುಗಿದ್ದಾರೆ. ಆಕೆಯನ್ನು ಆಕೆಯ ಊರಿಗೆ ಮುಟ್ಟಿಸಬೇಕೆಂದು ಮಾಡಿದ ಪ್ರಯತ್ನ ಪ್ರಜ್ಞೆಯಿಲ್ಲದ ಆಕೆಯ ಮಾತಿನಿಂದ ಸಾಧ್ಯವಾಗದೇ ಕೈ ಚೆಲ್ಲಿದ್ದಾರೆ.

ಬೀದಿಯಿಂದ ಠಾಣೆಗೆ :

ಕೊನೆಗೆ ಸಾರ್ವಜನಿಕರಿಂದ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್‌ ಸಿಬ್ಬಂದಿ ಆಕೆಯನ್ನು ಬೀದಿಯಿಂದ ಸ್ಥಳಾಂತರ ಮಾಡುವುದಕ್ಕಾಗಿ ಠಾಣೆಗೆ ಕರೆದೊಯ್ದಿದ್ದು, ಅಲ್ಲಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳಸಿಕೊಟ್ಟಿದ್ದಾರೆ.

ಸಾಂತ್ವನ ಕೇಂದ್ರಕ್ಕೆ

ಆಕೆಯಿಂದ ಊರಿನ ಬಗ್ಗೆ, ಸಂಬಂಧಿಕರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಹಾವೇರಿಯವಳು ಎಂದು ಹೇಳಿದ್ದಾಳೆ. ಗಂಡನೊಂದಿಗೆ ಜಗಳವಾಡಿ ಬಂದಿರುವುದಾಗಿ ಅಸ್ಪಷ್ಟವಾಗಿ ಹೇಳಿದ್ದಾಳೆ. ಸುರಕ್ಷ ತೆ ಹಾಗೂ ಆಕೆ ಊರಿಗೆ ಸೇರಿಸುವ ಉದ್ದೇಶದಿಂದ ಮಹಿಳೆ, ಆಕೆ ಮಕ್ಕಳನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ