ಆ್ಯಪ್ನಗರ

ಕುಲಾಯಿಸಿದ ಅದೃಷ್ಟ: ಮತ ಸಮಬಲ ಹಿನ್ನೆಲೆ ಟಾಸ್ ಮೂಲಕ ಗೆಲುವಿನ ನಗೆ ಬೀರಿದ ಅಭ್ಯರ್ಥಿ

​​ಹೀಗಾಗಿ ಚುನಾವಣಾ ಅಧಿಕಾರಿಗಳು, ಗೆಲುವಿನ ಅಭ್ಯರ್ಥಿಯನ್ನು ನಿರ್ಧರಿಸಲು ಟಾಸ್‌ ಹಾಕಿದ್ದಾರೆ. ನಾಣ್ಯ ಚಿಮ್ಮುಗೆಯಲ್ಲಿ ಅಭ್ಯರ್ಥಿ ಮಹಾಂತೇಶ ಎಂಬುವವರು ಗೆಲುವು ಸಾಧಿಸುವ ಮೂಲಕ ಗ್ರಾಮ ಪಂಚಾಯತ್‌ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ವಿಜಯಲಕ್ಷ್ಮೀ ಅವರ ಕೈ ಹಿಡಿದಿದ್ದಾಳೆ.

Vijaya Karnataka Web 30 Dec 2020, 12:26 pm
ಬಾಗಲಕೋಟೆ: ಚುನಾವಣೆಯಲ್ಲಿ ಜನ ಬಲ-ಪರಿಶ್ರಮದ ಜೊತೆಗೆ ಅದೃಷ್ಟ ಕೂಡ ಇರಬೇಕು ಎನ್ನುವುದಕ್ಕೆ ಈ ಬಾರಿಯ ಬಾಗಲಕೋಟೆಯ ಗ್ರಾಮ ಪಂಚಾಯತ್‌ನ ಚುನಾವಣೆ ಸಾಕ್ಷಿಯಾಗಿದೆ. ಯಾಕೆಂದರೆ ಬಾಗಲಕೋಟೆ ಜಿಲ್ಲೆಯ ಗೊರಬಾಳ ಗ್ರಾಮ ಪಂಚಾಯತಿಯ ಗೋಪಶಾನಿ ವಾರ್ಡ್‌ನ ಇಬ್ಬರು ಅಭ್ಯರ್ಥಿಗಳು ಸಮಬಲದ ಮತ ಪಡೆದಿದ್ದಾರೆ.
Vijaya Karnataka Web Bagalkot election result


ನಂತರ ಗೆಲುವು ಯಾರದು ಎಂಬುವುದನ್ನು ನಿರ್ಧಿರಿಸಲು ಟಾಸ್‌ ಹಾಕಿದ್ದಾರೆ. ಈ ಟಾಸ್‌ನಲ್ಲಿ ಇಬ್ಬ ಅಭ್ಯರ್ಥಿ ಗೆದ್ದುಕೊಂಡಿದ್ದಾನೆ. ಹೌದು, ಗೋಪಶಾನಿ ವಾರ್ಡ್‌ನಲ್ಲಿ ಮಹಾಂತೇಶ ಹಾಗೂ ಕಳಕಪ್ಪ ಎಂಬ ಇಬ್ಬರು ಅಭ್ಯರ್ಥಿಗಳು ತಲಾ 88 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಗೆಲುವು ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲ.

ಹೀಗಾಗಿ ಚುನಾವಣಾ ಅಧಿಕಾರಿಗಳು, ಗೆಲುವಿನ ಅಭ್ಯರ್ಥಿಯನ್ನು ನಿರ್ಧರಿಸಲು ಟಾಸ್‌ ಹಾಕಿದ್ದಾರೆ. ನಾಣ್ಯ ಚಿಮ್ಮುಗೆಯಲ್ಲಿ ಅಭ್ಯರ್ಥಿ ಮಹಾಂತೇಶ ಎಂಬುವವರು ಗೆಲುವು ಸಾಧಿಸುವ ಮೂಲಕ ಗ್ರಾಮ ಪಂಚಾಯತ್‌ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ವಿಜಯಲಕ್ಷ್ಮೀ ಅವರ ಕೈ ಹಿಡಿದಿದ್ದಾಳೆ.

ಬೆಳೆ ಸಮೀಕ್ಷೆ ಡಿ.31ರವರೆಗೆ ವಿಸ್ತರಣೆ: ಮೊಬೈಲ್‌ ಆ್ಯಪ್‌ ಮೂಲಕವೇ ಸಮೀಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ