ಆ್ಯಪ್ನಗರ

ಕೆ.ಎಸ್.ಈಶ್ವರಪ್ಪನ ತಲೆ, ಬಾಯಿ ಕನೆಕ್ಷನ್ ತಪ್ಪಿದೆ: ಎಂ.ಬಿ.ಪಾಟೀಲ್ ಟೀಕೆ

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ತಲೆ ಹಾಗೂ ಬಾಯಿಯ ಕನೆಕ್ಷನ್ ತಪ್ಪಿದೆ ಎಂದು ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು.

Vijaya Karnataka Web 12 Nov 2017, 3:26 pm
ಬಾಗಲಕೋಟ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ತಲೆ ಹಾಗೂ ಬಾಯಿಯ ಕನೆಕ್ಷನ್ ತಪ್ಪಿದೆ ಎಂದು ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದರು.
Vijaya Karnataka Web m b patil taunts k s eshwarappa
ಕೆ.ಎಸ್.ಈಶ್ವರಪ್ಪನ ತಲೆ, ಬಾಯಿ ಕನೆಕ್ಷನ್ ತಪ್ಪಿದೆ: ಎಂ.ಬಿ.ಪಾಟೀಲ್ ಟೀಕೆ


ಕೂಡಲಸಂಗಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದೇಹದಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿಯುತ್ತಿದೆ ಎಂಬ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

'ಈಶ್ವರಪ್ಪ ಏನು ಹೇಳುತ್ತಾರೆ ಎಂಬುದು ಅವರಿಗೇ ಗೊತ್ತಿರುವುದಿಲ್ಲ, ಹೀಗೆ ಮಾತನಾಡುವುದು ಅವರು ಜನಿಸಿದಾಗಿನಿಂದ ಬಂದ ಸಮಸ್ಯೆ ಯಿದೆ, ಅವರು ಟ್ರೀಟ್ ಮೆಂಟ್ ತೆಗೆದುಕೊಳ್ಳುವು ಒಳ್ಳೆಯದು' ಎಂದು ಛೇಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ತಾತ್ತ್ವಿಕ ಅಂತ್ಯ ದೊರೆಯಲಿದೆ, ಹೋರಾಟ ಯಶಸ್ವಿಯಾದ ನಂತರ ರಂಭಾಪುರಿ ಶ್ರೀಗಳು, ಶ್ಯಾಮನೂರು ಶಿವಶಂಕರಪ್ಪ ನಮ್ಮೊಂದಿಗೆ ಬರಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ