ಆ್ಯಪ್ನಗರ

ನದಿ ಸ್ವಚ್ಛಗೊಳಿಸಿದ ಸ್ವದೇಶಿ ಜಾಗರಣ ಮಂಚ್‌

ರಬಕವಿ/ಬನಹಟ್ಟಿ : ನದಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ವದೇಶಿ ಜಾಗರಣೆ ವೇದಿಕೆ ಸದಸ್ಯ ಶಿವಾನಂದ ಗಾಯಕವಾಡ ಹೇಳಿದರು.

Vijaya Karnataka 7 May 2019, 5:00 am
ರಬಕವಿ/ಬನಹಟ್ಟಿ : ನದಿ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ವದೇಶಿ ಜಾಗರಣೆ ವೇದಿಕೆ ಸದಸ್ಯ ಶಿವಾನಂದ ಗಾಯಕವಾಡ ಹೇಳಿದರು.
Vijaya Karnataka Web made the river cleaned jagaran manch
ನದಿ ಸ್ವಚ್ಛಗೊಳಿಸಿದ ಸ್ವದೇಶಿ ಜಾಗರಣ ಮಂಚ್‌


ರಬಕವಿ-ಮಹಿಷವಾಡಗಿ ಬ್ಯಾರೇಜ್‌ ಸಮೀಪದ ಕೃಷ್ಣಾ ನದಿ ತಟ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಸ್ವಚ್ಛ ನೀರು ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ನದಿ ತೀರ ಸಂಕಲ್ಪದೊಂದಿಗೆ ಸ್ವಚ್ಛತೆ ಕಾರ್ಯ ಪ್ರಾರಂಭಿಸಿದ್ದೇವೆ. ನಮ್ಮ ಈ ಕಾರ್ಯಕ್ಕೆ ಸ್ವಯಂ ಪ್ರೇರಣೆಯಿಂದ ರಬಕವಿ-ಬನಹಟ್ಟಿ, ರಾಮಪುರ, ಹೊಸೂರ, ಚಿಮ್ಮಡ, ಮಹಾಲಿಂಗಪುರ ಸೇರಿದಂತೆ ಸುತ್ತಮುತ್ತಲಿನಿಂದ ಸಾಕಷ್ಟು ತರುಣರು ಹಾಗೂ ಮಹಿಳೆಯರು ಕೈ ಜೋಡಿಸಿದ್ದಾರೆ ಎಂದರು.

ಸ್ವಚ್ಛ ಬಾರತ ಅಭಿಯಾನದ ಸದಸ್ಯೆ ರಬಕವಿಯ ಡಾ.ಅನಂತಮತಿ ಯಂಡೋಳಿ ಮಾತನಾಡಿ ನೀರು ನಮಗೆ ಅತೀ ಅಮೂಲ್ಯ ವಸ್ತು, ಅದರ ಮೂಲ ಈ ನದಿ. ಅದರ ಶುಚಿತ್ವ ನಮ್ಮೆಲ್ಲರ ಹೊಣೆ. ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರು ಅರಿಯುವ ಅಗತ್ಯವಾಗಿದೆ ಎಂದರು

ಶಿವು ಗುಂಡಿ, ಗುರು ಹೊರಟ್ಟಿ, ವಿಶ್ವನಾಥ ಸವದಿ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ರಾಜಶ್ರೀ ಕೈಸಾಲಿ, ಸೋಳಂಕಿ, ರವಿ ಜವಳಗಿ, ರಾಘು ಗಂಗಟ್ಟಿ, ಬಸವರಾಜ ಮೋಟಗಿ, ಸತೀಶ ಬಂಗಿ, ಆನಂದ ಕೊಪ್ಪದ, ಮಿಲನ ಚುನಮರಿ, ಜಡೇಶ ಗಂಟಿ, ಸಚೀನ ಕಾಟಕರ, ವೆಂಕಟೇಶ ಸಿಂಘನ, ಸದಾಶಿವ ತಟಕೋಟಿ, ಅಶ್ವಿನಿ ದೇಸಾಯಿ, ಬಸವರಾಜ ಕರಡಿ, ವಿಶ್ವನಾಥ ಮಿಳ್ಳಿ, ಸಂಗಮೇಶ ಚನಾಳ, ಗಣಪತಿ ಕಾಮಗೊಂಡ, ಜಕ್ಕಪ್ಪ ಜಿಡ್ಡಿಮನಿ, ಶ್ರೀಶೈಲ ಒಂಟಿ ಸೇರಿದಂತೆ ಅನೇಕರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ