ಆ್ಯಪ್ನಗರ

ಚುನಾವಣೆ ಪ್ರಚಾರಕ್ಕೂ ಹೋಗದ ಸ್ಥಿತಿಯಲ್ಲಿ ದೇಶದ ಹಳೆ ಪಕ್ಷ ಬಂದು ನಿಂತಿದೆ: ಸಚಿವ ಸುರೇಶ್‌ ಕುಮಾರ್

ಮಹಾರಾಷ್ಟ್ರ, ಹರಿಯಾಣ ಚುನಾವಣೆ ಫಲಿತಾಂಶದ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ. ಅಲ್ಲದೆ, ಚುನಾವಣೆ ಪ್ರಚಾರಕ್ಕೂ ಹೋಗದ ಸ್ಥಿತಿಯಲ್ಲಿ ಕಾಂಗ್ರೆಸ್‌ ಬಂದು ನಿಂತಿದೆ ಎಂದೂ ಸಹ ತಿರುಗೇಟು ನೀಡಿದ್ದಾರೆ.

Vijaya Karnataka Web 24 Oct 2019, 12:42 pm
ಬಾಗಲಕೋಟೆ: ಉತ್ತಮ ಆಡಳಿತ ಕೊಟ್ಟಾಗ ಎಂತಹ ಫಲಿತಾಂಶ ಬರುತ್ತೆ ಅನ್ನೋಕೆ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಕಾರಣ. ಚುನಾವಣೆ ಪ್ರಚಾರಕ್ಕೂ ಹೋಗದ ಸ್ಥಿತಿಯಲ್ಲಿ ದೇಶದ ಹಳೆ ಪಕ್ಷ ಬಂದು ನಿಂತಿದೆ. ಪ್ರಾಯಶಃ ಇದೊಂದು ವೇಕ್ ಅಪ್ ಕಾಲ್ ಎಂದು ಮಹಾರಾಷ್ಟ್ರ, ಹರಿಯಾಣ ಫಲಿತಾಂಶದ ಬಗ್ಗೆ ಬಾಗಲಕೋಟೆ ಜಿಲ್ಲೆಯ ಒಂಟಗೋಡಿ ಗ್ರಾಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web suresh kumar


ಹರಿಯಾಣ ಫಲಿತಾಂಶ ಮುಖ್ಯಾಂಶಗಳು: ಜಾಟರ ನಾಡಲ್ಲಿ ಕೈ - ಕಮಲ ಜಟಾಪಟಿ

ಇನ್ನು, ಕಾಂಗ್ರೆಸ್ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೇಶದಲ್ಲಿ ಒಳ್ಳೆ ವಿಪಕ್ಷ ಇರಬೇಕು ಅನ್ನೋದು ನಮ್ಮ ಬಯಕೆ. ರಾಜ್ಯ, ದೇಶದಲ್ಲಿ ಒಳ್ಳೆ ವಿಪಕ್ಷ ಇರಬೇಕು. ಆ ಬಯಕೆ ಈಡೇರಿಸೋದು ಆ ಪಕ್ಷಕ್ಕೆ ಬಿಟ್ಟಿದ್ದು. ಇದು ಬಹಳ ಒಳ್ಳೆ ನಡೆ, ದೇಶಕ್ಕೆ ಒಳ್ಳೆ ಸಂದೇಶ. ಒಳ್ಳೆ ಆಡಳಿತ ಕೊಟ್ಟೋವ್ರಿಗೆ ಮುಂದೆವರೆಸ್ತಾರೆ ಅನ್ನೋಕೆ ಉದಾಹರಣೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಹಾರಾಷ್ಟ್ರ, ಹರಿಯಾಣ ಫಲಿತಾಂಶ: ಕುತೂಹಲ ಕೆರಳಿಸುತ್ತಿದೆ ಹರಿಯಾಣ ನಂಬರ್ ಗೇಮ್ , ಬಹುಮತಕ್ಕೆ ಪರದಾಡುತ್ತಿರುವ ಬಿಜೆಪಿ

ಇನ್ನು, ಪಠ್ಯದಿಂದ ಟಿಪ್ಪು ಪಾಠ ತೆಗೆಯೋಕೆ ಅಪ್ಪಚ್ಚು ರಂಜನ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಸುರೇಶ್‌ ಕುಮಾರ್, ಪತ್ರ ಬರೆಯೋ ಹಕ್ಕು ಎಲ್ಲರಿಗೂ ಇದೆ. ಆ ಪತ್ರ ಇನ್ನೂ ನನ್ನ ಕೈ ಸೇರಿಲ್ಲ. ನಾನು ಕೂಡಾ ಕಳೆದ ಏಳು ದಿನಗಳಿಂದ ಪ್ರವಾಸದಲ್ಲಿದ್ದೇನೆ. ಪತ್ರ ಬಂದಾಗ ಕ್ರಮ ಕೈಗೊಳ್ತೇವೆ. ನಂತರ ಮುಂದಿನ ಹೆಜ್ಜೆ ಬಗ್ಗೆ ನಿರ್ಧಾರ ಮಾಡುವುದಾಗಿ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಫಲಿತಾಂಶ ಮುಖ್ಯಾಂಶಗಳು: ಎನ್‌ಡಿಎ ಪಾಳಯದಲ್ಲಿ ಗೆಲುವಿನ ಸಂಭ್ರಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ